ಬಿಗ್ ಬಾಸ್ ನ ವಾರದ ಕಥೆ ಕಿಚ್ಚನದ ಜೊತೆ ಎಪಿಸೋಡ್ ನಲ್ಲಿ ಸುದೀಪ್ ಅವರು ರಜತ್ ಗೆ ಸರಿಯಾಗಿ ಕ್ಲಾಸ್ ತಗೊಳ್ತಾರೆ. ಹಾಗೂ ರಜತ್ ಕೂಡ ತನ್ನ ತಪ್ಪಿನ ಅರಿವಾಗಿ ಇನ್ಮುಂದೆ ಹಾಗೆ ಮಾಡಲ್ಲ ಎಂದು ಹೇಳ್ತಾರೆ..
ಇನ್ನು ರಜತ್ ಗೆ ಕಳಪೆ ನೀಡಿದಾಗ. ಇನ್ನು ಮನೆಯ ಒಂದಿಷ್ಟು ಕಂಟೆಸ್ಟೆಂಟ್ಗಳು ರಜತ್ ಗೆ ಕಳಪೆಯನ್ನು ನೀಡಿದಾಗ ಕೋಪದಲ್ಲಿ, ಹುಡುಗಿಯರ ಕೈ ಹಿಡಿದು ಆಟ ಆಡಿದಷ್ಟು ಸುಲಭವಲ್ಲ ಎಂಬ ಕಮೆಂಟ್ ಮತ್ತು ಟಾಂಟನ್ನು ಮಾಡ್ತಾರೆ. ಈ ವಿಚಾರವಾಗಿ ಈ ವಿಷಯವನ್ನ ಯಾರಿಗೆ ಹೇಳಿದ್ದು ಎಂದು ಕೇಳಿದಾಗ ರಜತ್ ನಾನು ಶಿಶಿರ್ ಹಾಗೂ ಐಶ್ವರ್ಯಾಗೆ ಹೇಳಿದ್ದು ಎನ್ನುತ್ತಾರೆ. ಅದಕ್ಕೆ ಪ್ರತ್ಯುತ್ತರವಾಗಿ ಐಶ್ವರ್ಯ ಹುಡುಗಿಯರ ಕೈಹಿಟ್ಕೊಳ್ಳೋದು ಅಷ್ಟು ಸುಲಭದ ಮಾತಲ್ಲ ಸರ್ ಎಂಬುದನ್ನ ಹೇಳ್ತಾರೆ.

ನಂತರ ಕಿಚ್ಚ ಶಿಶಿರ್ ಗೆ ನೀವು ಕೆಂಪೇಗೌಡ ಸಿನಿಮಾ ನೋಡಿದಿರಾ ಎಂದು ಕೇಳುತ್ತಾರೆ, ಅದಕ್ಕೆ ಶಿಶಿರ್ ಹೌದು ನೋಡಿದೀನಿ ಅಂತಾರೆ, ನಂತರ ಕಿಚ್ಚ ಕೆಂಪೇಗೌಡ ಸಿನಿಮಾದಲ್ಲಿ ರೋಮ್ಯಾನ್ಸ್ ಎಷ್ಟಿದೆ ಹಾಗೂ ಫೈಟ್ ಎಷ್ಟಿದೆ ಎಂಬ ಪ್ರಶ್ನೆಯನ್ನ ಕೇಳ್ತಾರೆ. ಅದಕ್ಕೆ ಶಿಶಿರ್ 85 ಪೆರ್ಸೆಂಟ್ ಅಷ್ಟು ಫೈಟ್ ಇದ್ರೆ 15% ಅಷ್ಟು ರೋಮ್ಯಾನ್ಸ್ ಇದೆ ಎನ್ನುತ್ತಾರೆ. ಈ ಉತ್ತರವನ್ನು ನೀಡಿದ ಕಿಚ್ಚ ಹಾಗಿದ್ರೆ ನಿಮ್ಮದ್ರಲ್ಲಿ ಉಲ್ಟಾ ಇದೆ 85% ಅಷ್ಟು ರೋಮ್ಯಾನ್ಸ್ ಇದ್ರೆ 15 ಪರ್ಸೆಂಟ್ ಅಷ್ಟು ಫೈಟ್ ಇದೆ. ಇದೇ ಕಾರಣಕ್ಕೆ ನಿಮ್ಮಿಬ್ಬರಲಿ ಒಂದು ದಿನ ಬಿಗ್ ಬಾಸ್ ಸ್ಟೇಜ್ ಮೇಲೆ ಒಬ್ಬರು ನಿಂತಿರ್ತೀರಾ ಎಂಬ ಮಾತನ್ನು ನೀಡಿ ವಾರ್ನಿಂಗ್ ಕೂಡ ಕೊಡುತ್ತಾರೆ.
ಹಾಗೂ ನಿನ್ನ ಎಪಿಸೋಡ್ ನಲ್ಲಿ ಮಂಜು ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತದೆ ಮತ್ತು ಮೋಕ್ಷಿತ ಹಾಗೂ ಚೈತ್ರ ಅವರ ಪರ್ಫಾರ್ಮೆನ್ಸ್ ಈ ವಾರ ಚೆನ್ನಾಗಿತ್ತು ಎಂಬುದನ್ನ ಕಿಚ್ಚ ಹೇಳ್ತಾರೆ.

ಇನ್ನು ಭಾನುವಾರದ ಎಪಿಸೋಡ್ ಬಂತು ಅಂದ್ರೆ ಎಷ್ಟು ಫನ್ ಕಂಟೆಂಟ್ ಇರುತ್ತೋ, ಎಲಿಮಿನೇಷನ್ ಪ್ರೋಸೆಸ್ ಕೂಡ ಇರುತ್ತೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ ಎಂಬ ಚರ್ಚಿಗಳು ಒಂದು ವಾರದಿಂದ ನಡೀತಾನೆ ಇತ್ತು.ಇದ್ರಲ್ಲಿ ಹೆಚ್ಚು ಜನ ಹೇಳ್ತಾ ಇದ್ದಿದ್ದು ಚೈತ್ರ ಅವರ ಹೆಸರು.

ಆದರೆ ಮೂಲಗಳ ಮಾಹಿತಿ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾ ಇರೋದು ಧರ್ಮ ಕೀರ್ತಿರಾಜ್. ಸಾಕಷ್ಟು ವಾರಗಳಿಂದಲೂ ಧರ್ಮ ಅವರು ನಾಮಿನೇಟ್ ಆಗ್ತಾ ಇದ್ದರು ಹಾಗೂ ಕಳೆದ ವಾರ ಎಲಿಮಿನೇಷನ್ ತನಕ ಬಂದು ಒಂದಿಷ್ಟರಲ್ಲಿ ಸೇಫ್ ಆದ್ರೂ ಮನೆಯಿಂದ ಹೊರ ಹೋಗ್ತಾಯಿರೋದು ಸಾಕಷ್ಟು ನೆಟ್ಟಿಗರಿಗೆ ಬೇಸರವನ್ನ ಮೂಡಿಸಿದೆ.