ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಹಾಡು ಅಂದರೆ ಮೊದಲಿಗೆ ಜನರ ಬಾಯಿಗೆ ಬರುವ ಹೆಸರು ಕಚ್ಚಾ ಬಾದಾಮ್ ಹಾಡು. ಈ ಹಾಡಿನ ಮೂಲಕ ದೇಶಾದ್ಯಂತ ಖ್ಯಾತಿ ಪಡೆದವರು ಹಾಡಿನ ಕರ್ತೃ ಭುವನ್ ಬದ್ಯಕರ್.
ಇದೀಗ ಭುವನ್ರವರಿಗೆ ಅಪಘಾತವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೌದು ಇತ್ತೀಚಿಗೆ ಭುವನ್ ಹೊಸ ಕಾರೊಂದನ್ನು ಖರೀದಿಸಿದ್ದರು ಕಾರು ಕಲಿಯುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ಮುಖ ಮತ್ತು ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
![](https://pratidhvani.com/wp-content/uploads/2022/03/maxresdefault-4-1024x576.jpg)
ಇತ್ತೀಚಿನ ದಿನಗಳಲ್ಲಿ ತೀವ್ರ ಖ್ಯಾತಿಗಳಿಸಿದ ಭುವನ್ಗೆ ಎಲ್ಲೆಡೆಯಿಂದ ಬೇಡಿಕೆ ಹೆಚ್ಚಾಗಿತ್ತು. ಅದು ಎಷ್ಟರ ಮಟ್ಟಿಗೆ ಅಂದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಉಪಚುನಾವಣೆಯ ಪ್ರಚಾರದ ವೇಳೆ ಇವರನ್ನು TMC ಪಕ್ಷವು ಪ್ರಚಾರಕ್ಕೆ ಬಳಸಿಕೊಂಡಿತ್ತು. ಖ್ಯಾತ ಬಾಲಿವುಡ್ ತಾರೆಯರು ಸಹ ಭುವನ್ ಜೊತೆ ಇತ್ತೀಚಿಗೆ ಇವರ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿದ್ದರು.
![](https://pratidhvani.com/wp-content/uploads/2022/03/2493090ae27f918c7bc31a901b7f73ca.webp)