ಮಾಜಿ ಸಚಿವ ಎಚ್ ಡಿ ರೇವಣ್ಣ(Revanna)ವಿರುದ್ಧ ಕೆ.ಆರ್.ನಗರ (KR Nagar) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಿಡ್ನಾಪ್ ಪ್ರಕರಣಕ್ಕೆ (Kidnap case) ಸಂಬಂಧಪಟ್ಟಂತೆ ಈಗಾಗಲೇ ರೇವಣ್ಣರನ್ನ ಎಸ್ಐಟಿ (SIT) ಬಂಧಿಸಿ ನಾಲ್ಕು ದಿನ ಕಸ್ಟಡಿಗೆ ಪಡೆದುಕೊಂಡಿತ್ತು . ಸದ್ಯ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಇದೇ ಕೇಸ್ ಗೆ ಸಂಬಂಧಪಟ್ಟ ಹಾಗೆ ಈಗ ಭವಾನಿ ರೇವಣ್ಣಾಗೂ (Bhavani revanna) ಸಂಕಷ್ಟ ಎದುರಾಗಿದೆ.
![](https://pratidhvani.com/wp-content/uploads/2024/05/IMG_7539.jpeg)
ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ದೂರಿನಲ್ಲಿ ನೀಡಿರುವ ಹೇಳಿಕೆ ಮತ್ತು ಎಫ್ಐಆರ್ (FIR) ನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖ ಆಗಿರೋದ್ರಿಂದ ,ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಈ ಮುಂಚೆ ಭವಾನಿ ರೇವಣ್ಣರಿಗೆ ನೋಟಿಸ್ (Notice) ಜಾರಿ ಮಾಡಿದ್ದರು .ಆದರೆ ಇದಕ್ಕೆ ಭವಾನಿಯವರ ಕಡೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ .ಇದೀಗ ಎಸ್ಐಟಿ ಎರಡನೇ ನೋಟೀಸ್ ಜಾರಿ ಮಾಡಿದೆ.
![](https://pratidhvani.com/wp-content/uploads/2024/05/IMG_7538.jpeg)
ವಾಟ್ಸಪ್ (Whatsapp) ಮೂಲಕ ಭವಾನಿ ರೇವಣ್ಣರಿಗೆ ಎಸ್ಐಟಿ ಎರಡನೇ ನೋಟಿಸ್ ಜಾರಿ ಮಾಡಿದ್ದು , ವಿಚಾರಣೆಗಾಗಿ ಅವರ ಬರುವಿಕೆಗಾಗಿ ಅಧಿಕಾರಿಗಳು ಕಾದಿದ್ದಾರೆ . ಒಂದುವೇಳೆ ಭವಾನಿ ರೇವಣ್ಣ ಉತ್ತರಿಸದಿದ್ದಲ್ಲಿ, ಮೂರನೇ ನೋಟಿಸ್ ಅನ್ನು ಕೂಡ ಎಸ್ಐಟಿ ಅಧಿಕಾರಿಗಳು ರವಾನೆ ಮಾಡಲಿದ್ದಾರೆ .ಆ ನಂತರ ಭವಾನಿ ರೇವಣ್ಣರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳು ಇದೆ .ಆದರೆ ಅಲ್ಲಿವರೆಗೆ ಭವಾನಿ ರೇವಣ್ಣ ಅವರ ನಡೆ ಏನು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.