ತಮ್ಮ ಮನೆ ಕೆಲಸದಾಕೆ ಕಿಡ್ನಾಪ್ ಆರೋಪ ಪ್ರಕರಣದಲ್ಲಿ (Kidnap case) ಭವಾನಿ ರೇವಣ್ಣಗೆ (Bhavani revanna) ಬಿಗ್ ರಿಲೀಫ್ ಸಿಕ್ಕಿದೆ. ಇವತ್ತಿಗೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ (High court) ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.
![](https://pratidhvani.com/wp-content/uploads/2024/06/BHAVANI-REVANNA-3.png)
ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ಹೈಕೋರ್ಟ್ ಭವಾನಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು. ಆದ್ರೆ ಇದೀಗ ಸಂತ್ರಸ್ತೆ ಭವಾನಿ ರೇವಣ್ಣ ಆಹಾರ ಮತ್ತು ಬಟ್ಟೆ ನೀಡಿರೋದಾಗಿ ಹೇಳಿದ್ದು, ಇದನ್ನ ಪರಿಗಣಿಸಿದ ಕೋರ್ಟ್ ಅನಗತ್ಯವಾಗಿ ಅವರನ್ನ ಬಂಧಿಸೋದು ಬೇಡವೆಂದಿದೆ.
ಈ ಹಿನ್ನಲೆ ಇದೀಗ ಹೈಕೋರ್ಟ್ನೀಡಿದ್ದ ಮಧ್ಯಂತರ ಜಾಮೀನನ್ನ ನಿರೀಕ್ಷಣಾ ಜಾಮೀನಾಗಿ ಕಾಯಂಗೊಳಿಸಿದ್ದು,ಭವಾನಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ.