ಕೋವಿಡ್ -19 ಸಾಂಕ್ರಾಮಿಕ ಶಾಲಾ ಶಿಕ್ಷಣ ಕ್ಷೇತ್ರವನ್ನೇ ಅಸ್ತವ್ಯಸ್ತಗೊಳಿಸಿದೆ. ಒಂದೂವರೆ ವರ್ಷದಿಂದ ಶಾಲೆಗಳನ್ನು ಮುಚ್ಚುವುದು ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುವುದಲ್ಲದೆ ಈ ವಲಯವನ್ನು ಅವಲಂಬಿಸಿರುವ ಅನೇಕ ಜನರ ಜೀವನೋಪಾಯವನ್ನು ಕಿತ್ತುಕೊಂಡಿದೆ.
ಆಗಸ್ಟ್ 23 ರಂದು 9-12 ತರಗತಿಗಳಿಗೆ ಶಾಲೆಗಳನ್ನು ಪುನಃ ತೆರೆಯುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಲಾಗಿದ್ದರೂ, ಬೆಂಗಳೂರಿನಾದ್ಯಂತ ನೂರಾರು ಶಾಲೆಗಳು ಅತ್ಯಂತ ಕಡಿಮೆ ದಾಖಲಾತಿಯನ್ನು ಹೊಂದಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇವಲ 15 ದಿನಗಳು ಬಾಕಿ ಉಳಿದಿದ್ದು, ಹಲವು ಶಾಲೆಗಳು ಕನಿಷ್ಠ ಗುರಿಯನ್ನು ತಲುಪಲು ಹೆಣಗಾಡುತ್ತಿವೆ.
ಸಾಂಕ್ರಾಮಿಕ-ಪ್ರೇರಿತ ಆರ್ಥಿಕ ಬಿಕ್ಕಟ್ಟು, ಜನರ ವಲಸೆ ಮತ್ತು ಶಾಲೆಗಳನ್ನು ಸ್ಥಗಿತಗೊಳಿಸುವುದು ಈ ವರ್ಷ ಕಡಿಮೆ ಶಾಲಾ ಪ್ರವೇಶಕ್ಕೆ ಕಾರಣವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಬೆಂಗಳೂರು ಉತ್ತರ ಮತ್ತು ದಕ್ಷಿಣ ಶಿಕ್ಷಣ ಜಿಲ್ಲೆಗಳ ಶಾಲೆಗಳು ಈ ಸಮಸ್ಯಯನ್ನು ಬದಲಿಸಲು ಶ್ರಮಿಸುತ್ತಿದೆ ಎಂದು ತೋರಿಸುತ್ತಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಪರಿಸ್ಥಿತಿಯ ಮೌಲ್ಯಮಾಪನದಲ್ಲಿ ಕುರಿತು ಮಾತನಾಡಿ, “ಕೆಲವನ್ನು ಹೊರತುಪಡಿಸಿ, ಯಾವುದೇ ಶಾಲೆಯು ಕನಿಷ್ಠ ಶೇಕಡಾ 75 ರಷ್ಟು ಪ್ರವೇಶವನ್ನು ಸಾಧಿಸಿಲ್ಲ” ಎಂದು ಅವರು ಹೇಳಿದರು.

ಅಂಕಿಅಂಶಗಳನ್ನು ನಂಬಬೇಕಾದರೆ, ಕರ್ನಾಟಕದ 34 ಶಿಕ್ಷಣ ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲಿರುವ ಎರಡು ಶಿಕ್ಷಣ ಜಿಲ್ಲೆಗಳು ಕೊನೆ ಸ್ಥಾನದಲ್ಲಿದೆ. ಇತರ ಜಿಲ್ಲೆಗಳ ಬಹುತೇಕ ಶಾಲೆಗಳು ಶೇ 90-95 ರಷ್ಟು ದಾಖಲಾತಿಗಳನ್ನು ವರದಿ ಮಾಡಿವೆ.
ನಗರದ ಖಾಸಗಿ ಅನುದಾನರಹಿತ ಶಾಲೆಗಳು ಕನಿಷ್ಠ ಶೇ .70 ರಷ್ಟು ಪ್ರವೇಶವನ್ನು ತಲುಪಲು ಹೆಣಗಾಡುತ್ತಿವೆ. ಹಲವಾರು ಜನಪ್ರಿಯ ಮತ್ತು ಪ್ರತಿಷ್ಠಿತ ಖಾಸಗಿ ಶಾಲೆಗಳನ್ನು ಹೊಂದಿರುವ ಬೆಂಗಳೂರು ದಕ್ಷಿಣವು ಕೇವಲ ಶೇ .73 ರಷ್ಟು ಮತ್ತು ಉತ್ತರ ಜಿಲ್ಲೆಯು ಶೇ .74 ರಷ್ಟು ದಾಖಲಾತಿಗಳನ್ನು ಮಾತ್ರ ವರದಿ ಮಾಡಿದೆ. ಇದಕ್ಕೆ ವಿರುದ್ಧವಾಗಿ, ಕೆಲವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಶೇ .90 ರಷ್ಟು ಪ್ರವೇಶವನ್ನು ವರದಿ ಮಾಡಿವೆ.
“ಪ್ರತಿ ವರ್ಷ, 1 ನೇ ತರಗತಿಗೆ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆಯಿತ್ತು. ಆದರೆ ಈಗ, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿನ ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳು ಪ್ರಾಥಮಿಕ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಒಂದನೇ ತರಗತಿಯ ಪ್ರವೇಶವನ್ನು ನೀವು ವಿಶ್ಲೇಷಿಸಿದರೆ, ಹೆಚ್ಚಿನ ಶಾಲೆಗಳು ಶೇಕಡಾ 50 ರಷ್ಟು ಪ್ರವೇಶವನ್ನು ಸಹ ಸಾಧಿಸಿಲ್ಲ, ”ಎಂದು ಬೆಂಗಳೂರಿನ ಖಾಸಗಿ ಶಾಲೆಗಳ ಸಂಘದ ಪದಾಧಿಕಾರಿ ಹೇಳಿದ್ದಾರೆ.
ಈ ವರ್ಷ 17.70 ಲಕ್ಷ ಮಕ್ಕಳನ್ನು ಪ್ರವೇಶಿಸುವ ಗುರಿಯನ್ನು ಹೊಂದಿತ್ತು, ಆದರೆ ಇದರ ವಿರುದ್ದವಾಗಿ ಶಾಲೆಗಳು ಇದುವರೆಗೆ ಕೇವಲ 12.97 ಲಕ್ಷ ದಾಖಲಾತಿಗಳನ್ನು ವರದಿ ಮಾಡಿವೆ, ಇದು ಸುಮಾರು ಐದು ಲಕ್ಷಗಳ ಕೊರತೆ.
“ಕೆಲವು ಸಂದರ್ಭಗಳಲ್ಲಿ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂಜರಿಯುತ್ತಾರೆ ಮತ್ತು ಶುಲ್ಕ ರಿಯಾಯಿತಿಯ ಮೇಲೆ ಕಳೆದ ವರ್ಷದ ಸರ್ಕಾರದ ಆದೇಶದ ಹಿಂದೆ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ” ಎಂದು ಕುಮಾರ್ ಹೇಳಿದರು. ಪೋಷಕರು ನಿಜವಾಗಿಯೂ ತಮ್ಮ ಊರುಗಳಿಗೆ ಮರಳಿದ್ದಾರೆಯೇ ಅಥವಾ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದಾರೆಯೇ ಎಂದು ಯಾರಿಗೂ ತಿಳಿದಿಲ್ಲ. ಬೆಂಗಳೂರಿನಲ್ಲಿ ವಾಸವಾಗಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸದ ಪ್ರಕರಣಗಳು ನಮ್ಮಲ್ಲಿವೆ. ಈ ವರ್ಷ ನಿಜವಾದ ಪ್ರವೇಶಗಳು ಶೇಕಡಾ 30 ಕ್ಕಿಂತ ಹೆಚ್ಚಿಲ್ಲ ಎಂದಿದ್ದಾರೆ.
ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಬೆಂಗಳೂರಿನಲ್ಲಿ ಕಡಿಮೆ ಶಾಲಾ ಪ್ರವೇಶಕ್ಕೆ ಉದ್ಯೋಗ ನಷ್ಟ ಮತ್ತು ಆರ್ಥಿಕ ಕುಸಿತ ಮುಖ್ಯ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಉದ್ಯೋಗ ನಷ್ಟವು ಅನೇಕ ಪೋಷಕರು ತಮ್ಮ ಊರುಗಳಿಗೆ ಮರಳುವಂತೆ ಮಾಡಿತು, ಅನಿವಾರ್ಯವಾಗಿ ನಿಯಮಿತ ಪ್ರವೇಶದ ಮೇಲೆ ಪರಿಣಾಮ ಬೀರಿತು. ಅನೇಕ ವಿದ್ಯಾರ್ಥಿಗಳು ದುಬಾರಿ ಶಾಲೆಗಳಿಂದ ಅಗ್ಗದ ಮತ್ತು ಅನುದಾನಿತ ಅಥವಾ ನಗರದ ಹೊರವಲಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರು ಏಳು ಶಾಲೆಗಳನ್ನು ಹೊಂದಿದ್ದಾರೆ (ಒಂದು ನಗರದಲ್ಲಿ ಮತ್ತು ಆರು ಹೊರವಲಯದಲ್ಲಿ). ಹೊರವಲಯದಲ್ಲಿರುವ ಶಾಲೆಗಳಲ್ಲಿ ದಾಖಲಾತಿಗಳು ಆಘಾತಕಾರಿ ಆದರೆ ಬೆಂಗಳೂರಿನ ಸಂಸ್ಥೆಯು ಶೇಕಡ 50 ರಷ್ಟು ದಾಖಲಾತಿಗಳನ್ನು ವರದಿ ಮಾಡಿಲ್ಲ ಎಂದು ತಾಳಿಕಟ್ಟೆ ಹೇಳಿದರು.
ಹಿರಿಯ ಶಿಕ್ಷಣ ತಜ್ಞ ಡಾ ವಿ ಪಿ ನಿರಂಜನಾರಾಧ್ಯ ಮಾತನಾಡಿ, “ವಲಸೆಯು ಬಹುಶಃ ಒಂದು ಕಾರಣವಾಗಿದೆ. ಆದರೆ ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಆರ್ಥಿಕ ಸಂಕಷ್ಟದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಮಟ್ಟದ ಶಾಲೆಗಳಿಂದ ಕಡಿಮೆ ಬಜೆಟ್ ಮತ್ತು ಸರ್ಕಾರಿ ಶಾಲೆಗಳಿಗೆ ವರ್ಗಾಯಿಸುತ್ತಿದ್ದಾರೆ. ಅಂಚಿನಲ್ಲಿರುವ ಗುಂಪುಗಳ ಮಕ್ಕಳು ಶಾಲೆಗಳಿಂದ ಹೊರಗುಳಿಯುವ ಸಾಧ್ಯತೆಗಳಿವೆ, ಮತ್ತು ಪ್ರವೇಶದ ನಕಲು ಇರಬಹುದು (there may be duplication of admissions) ಎಂದಿದ್ದಾರೆ.
ನಗರದ ಶಾಲೆಗಳು
1) ಬೆಂಗಳೂರು ಉತ್ತರ ಸರ್ಕಾರಿ ಶಾಲೆಗಳು: 546
2) ಬೆಂಗಳೂರು ದಕ್ಷಿಣ ಸರ್ಕಾರಿ ಶಾಲೆಗಳು: 600 ಪ್ಲಸ್
3) ಬೆಂಗಳೂರು ದಕ್ಷಿಣ ಮತ್ತು ಉತ್ತರ ಅನುದಾನರಹಿತ ಶಾಲೆಗಳು: 5,500
4) ಅನುದಾನಿತ ಶಾಲೆಗಳು: 500 ಪ್ಲಸ್