ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ (Bengaluru mysuru express highway) ಟೋಲ್ ಕಟ್ಟದೆ ಪ್ರಯಾಣಿಸುತ್ತಿದ್ದ ಕಿಲಾಡಿಗಳಿಗೆ ಶಾಕ್ ಎದುರಾಗಿದೆ. ಹೀಗೆ ಕಳ್ಳ ಮಾರ್ಗದಲ್ಲಿ ಟೋಲ್ ತಪ್ಪಿಸಿ ಹೋಗುವುದನ್ನು ತಪ್ಪಿಸಲು ಬಿಡದಿ ಬಳಿಯ ನಿರ್ಗಮನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದೆ.

ಆದ್ರೆ ಹೀಗೆ ಎಕ್ಸಿಟ್ ರೋಡ್ ಬಂದ್ ಮಾಡಿರೋ ಬಗ್ಗೆ ಯಾವುದೇ ಬೋರ್ಡ್ ಹಾಕಿಲ್ಲ ಅನ್ನೋ ವಿಚಾರ ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರ ಮಧ್ಯೆ ಜಗಳಕ್ಕೆ ಕಾರಣವಾಗಿದೆ. ಯಾವುದೇ ಸೂಚನಾ ಫಲಕ ಇಲ್ಲದೇ ಇರೋದ್ರಿಂದ ಹೆದ್ದಾರಿಯಲ್ಲಿ ಬಂದು ದುಬಾರಿ ಟೋಲ್ ಕಟ್ಟಲು ವಾಹನ ಸವಾರರ ಪರದಾಟ ನಡೆಸಿದ್ದಾರೆ.

ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಟೋಲ್ ಸಿಬ್ಬಂದಿ ಕಲ್ಲಿನಿಂದ ಕಾರ್ ಗ್ಲಾಸ್ ಹೊಡೆಯಲು ಹೋಗಿ ಗೂಂಡಾಗಿರಿ ನಡೆಸಿರೋ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಲಾಗಿದೆ.