• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹಳ್ಳ ಹಿಡೀತಾ ಲಕ್ಷ ಲಕ್ಷ ಖರ್ಚು ಮಾಡಿ ತೆರೆದ ಬಿಬಿಎಂಪಿ ಕರೋನಾ ಸಹಾಯವಾಣಿ?

ಕರ್ಣ by ಕರ್ಣ
December 24, 2021
in ಕರ್ನಾಟಕ, ರಾಜಕೀಯ
0
ಹಳ್ಳ ಹಿಡೀತಾ ಲಕ್ಷ ಲಕ್ಷ ಖರ್ಚು ಮಾಡಿ ತೆರೆದ ಬಿಬಿಎಂಪಿ ಕರೋನಾ ಸಹಾಯವಾಣಿ?
Share on WhatsAppShare on FacebookShare on Telegram

ಕೇಂದ್ರ ಸರ್ಕಾರ ಎಚ್ಚರಿಕೆ ಕೊಟ್ಟರೂ ಪಾಲಿಕೆ ಮಾತ್ರ ಇನ್ನೂ ಕಿವುಡಾಗಿ ಕೂತಿದೆ. ಬೆಂಗಳೂರು ಓಮಿಕ್ರಾನ್ ಗಳ ತವರು ಆಗೋಕು ಮೊದಲೇ ಎಚ್ಚೆತ್ತುಕೊಳ್ಳಿ ಎಂದರೂ ಬಿಬಿಎಂಪಿ ಮಾತ್ರ ದಿವ್ಯ ನಿರ್ಲಕ್ಷ್ಯವಹಿಸಿದೆ. ಕಳೆದ ಬಾರಿಯಾದ ಅನಾಹುತಗಳು ಮತ್ತೆ ಮರುಕಳಿಸಬಾರದು, ಮುಂಜಾಗ್ರತೆ ವಹಿಸಿ, ಸಾರ್ವಜನಿಕರಿಗೆ ವೈರಸ್ ತಿಳುವಳಿಕೆ ನೀಡಿ ಎಂದರೆ ಹೆಲ್ಪ್‌ ಲೈನ್‌ ಅನ್ನೇ ಹಳ್ಳ ಹಿಡಿಸಿ ಕೂತಿದೆ ಬಿಬಿಎಂಪಿ.

ADVERTISEMENT

ಮೂರನೇ ಅಲೆ ಮೂನ್ಸೂಚನೆ ಇದ್ದರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ!

ಪ್ರತಿ ದಿನ ಓಮಿಕ್ರಾನ್ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ಇಡೀ ರಾಜ್ಯದಲ್ಲಿ 31 ಓಮಿಕ್ರಾನ್  ಕೇಸ್‌ ಪತ್ತೆಯಾಗಿದ್ದರೆ, ಈ ಪೈಕಿ ಬೆಂಗಳೂರಿನದ್ದೇ ಸಿಂಹಪಾಲು. ಕಳೆದ ಅಲೆಯಲ್ಲೂ ಕೂಡ ಇಡೀ ರಾಜ್ಯದ ಕರೋನಾ ಹಾಟ್‌ ಸ್ಪಾಟ್‌ ಆಗಿದ್ದು ಕೂಡ ಇದೇ ಬೆಂಗಳೂರು. ಹೀಗಾಗಿ ಬೆಂಗಳೂರಿಗೆ ಹೆಚ್ಚಿನ ಕಣ್ಗಾವಲು ಒದಗಿಸುವ ಅಗತ್ಯತೆ ಇದೆ. ಇತ್ತೀಚೆಗಷ್ಟೇ ದೇಶದ ಎಲ್ಲಾ ರಾಜ್ಯಗಳಿಗೂ ಕೇಂದ್ರ ಆರೋಗ್ಯ ಇಲಾಖೆ ಆಯುಕ್ತ ರಾಜೇಶ್‌ ಭೂಷಣ್‌ ಸುತ್ತೋಲೆ ಹೊರಡಿಸಿ ಓಮೈಕ್ರಾನ್‌ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ. ಇಷ್ಟಿದ್ದರೂ ಬಿಬಿಎಂಪಿಯ ನಿರ್ಲಕ್ಷ್ಯ ಮತ್ತೊಂದು ಸುತ್ತಿಗೆ ಸಿಲಿಕಾನ್‌ ಸಿಟಿಯನ್ನು ಕರೋನಾ ಅಡ್ಡೆಯಾಗುವಂತೆ ಮಾಡುತ್ತೆ ಎಂಬ ಅನುಮಾನ ಮೂಡ ತೊಡಗಿದೆ.

ಕೆಲಸ ಮಾಡುತ್ತಿಲ್ಲ ಬಿಬಿಎಂಪಿ 1533 ಹೆಲ್ಪ್‌ ಲೈನ್‌ ನಂಬರ್‌!

ಲಸಿಕೆ ಪಡೆದುಕೊಳ್ಳಬೇಕು, ಮಾಸ್ಕ್‌ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇವೆಲ್ಲವೂ ನಿಜ. ಇದಕ್ಕೂ ಮುಖ್ಯವಾಗಿ ಜನರಿಗೆ ಅಗತ್ಯಕ್ಕೆ ತಕ್ಕಂತೆ ಓಮಿಕ್ರಾನ್  ಬಗ್ಗೆ ತಿಳುವಳಿಕೆ ನೀಡಬೇಕು. ಅದರಲ್ಲೂ ಮುಖ್ಯವಾಗಿ ಓಮಿಕ್ರಾನ್  ಬಗ್ಗೆ ಮಾಹಿತಿ ಜನರಿಗೆ ನೀಡಬೇಕು. ಅಚಾನಕ್‌ ಆಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೂ ಕೂಡ ಹೇಗೆ ಎಲ್ಲಿ ಎಂಬ ಮಾಹಿತಿಯನ್ನೂ ಕೊಡುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ. ಇದಕ್ಕೆಂದೇ ಬಿಬಿಎಂಪಿ ಎರಡನೇ ಅಲೆಯ ವೇಳೆ ಇದಕ್ಕೆಂದೇ 1533 ಎಂಬ ನಂಬರಿನ ಸಹಾಯವಾಣಿಯನ್ನು ತೆರೆದಿತ್ತು. ಇದಕ್ಕೆಂದೇ ಲಕ್ಷ ಲಕ್ಷ ರೂಪಾಯಿ ಖರ್ಚು ಕೂಡ ಮಾಡಲಾಗಿತ್ತು. ಹೀಗೆ ನಿರ್ಮಿಸಲಾದ ಹೆಲ್ಪ್‌ ಲೈನ್‌ ನಂಬರ್‌ ಗೆ ಕರೆ ಮಾಡಿದರೆ ತಾವು ಕರೆ ಮಾಡಿದ ಚಂದಾದದರು ಕಾರ್ಯನಿರತರಾಗಿದ್ದಾರೆ ಎಂದು ಕರೆ ಕಡಿತಗೊಳ್ಳುತ್ತಿದ್ದೆ. ಈ ಮೂಲಕ ಕೊರೋನಾ ಹೆಲ್ಪ್‌ ಲೈನ್‌ ವ್ಯವಸ್ಥೆ ಹಳ್ಳ ಹಿಡಿದಿದೆ.

ಕೇಳಿದ್ರಲ್ಲ, ಪಾಲಿಕೆ ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಯ ಮಹಿಮೆ. ಜನರು ಎಷ್ಟೆ ಸರಿ ಪೋನ್ ಮಾಡಿದರೂ, ಇದೆ ವಾಯ್ಸ್  ರೇಕಾರ್ಡ್‌ ಬರುತ್ತೆ ಹೊರತ್ತು,  ಯಾರು ಕೂಡ ನಿಮ್ಮ ಪೋನ್ ಎತ್ತಿ ಮಾಹಿತಿ ನೀಡಲ್ಲ. ಕಾಲ್ ಸೆಂಟರ್ ಗೆ ಅಂತ 30 ಕ್ಕೂ ಹೆಚ್ಚು ಸಿಬ್ಬಂದಿಯನ್ನೂ ಗುತ್ತಿಗೆ ಅದಾರದ ಮೇಲೆ ನೇಮಿಸಲಾಗಿತ್ತು. ಆದರೆ ಈಗ ಸಿಬ್ಬಂದಿಯೂ ಇಲ್ಲ ಕಾಲ್ ಸೆಂಟರ್ ಕೂಡ ಇಲ್ಲ. ಆದರೆ ಪಾಲಿಕೆ ಮಾತ್ರ ನಾವು ಮೂರನೇ ಅಲೆ ಎದುರಿಸಲು ಸರ್ವ ಸನ್ನದ್ಧವಾಗಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದೆ.

ಇನ್ನೂ ಕೇಂದ್ರ ಸರ್ಕಾರ ಕಳೆದ ಒಂದು ತಿಂಗಳಿಂದ ಮೂರನೇ ಅಲೆಯ ಮೂನ್ಸೂಚನೆ ಕೊಡುತ್ತಾ ಬರುತ್ತಿದೆ. ಮುಂದಿನ ಜನವರಿಯಲ್ಲಿ ಓಮಿಕ್ರಾನ್ ನಿಂದ ಮೂರನೇ ಅಲೆ ಬಂದರೂ ಬರಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡುತ್ತಿದ್ದಾರೆ. ಬೆಡ್‌, ಆಕ್ಸಿಜನ್‌, ಆಂಬುಲೆನ್ಸ್‌ ಹೀಗೆ ನೂರೆಂಟು ವ್ಯವಸ್ಥೆಯನ್ನು ಸಿದ್ಧ ಮಾಡಿಕೊಳ್ಳ ಬೇಕಿರುವ ಬಿಬಿಎಂಪಿ ಮೊದಲು ಹೆಲ್ಪ್‌ ಲೈನ್‌ ಅನ್ನು ಮತ್ತೆ ಆರಂಭಿಸುವ ಕಡೆ ಗಮನ ಹರಿಸಬೇಕು. ಆರಂಭದಲ್ಲೇ ಇಂಥಾ ನಿರ್ಲಕ್ಷ್ಯಕ್ಕೆ ಪಾಲಿಕೆ ಜಾರಿದರೆ ಅಕಸ್ಮಾತ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೆ ಎರಡನೇ ಅಲೆಯ ಸನ್ನಿವೇಶಕ್ಕಿಂತಲೂ ಭೀಕರವಾಗಿರಲಿದೆ ಚಿತ್ರಣಗಳು.

Tags: BJPCovid 19ಕರೋನಾಕರೋನಾ ಸಹಾಯವಾಣಿಕೋವಿಡ್-19ಬಿಜೆಪಿಲಕ್ಷ ಲಕ್ಷ ಖರ್ಚು
Previous Post

ಬಹುಮತದ ಕೊರತೆ : ಪರಿಷತ್ ನಲ್ಲಿ ಮತಾಂತರ ಮಸೂದೆ ಮಂಡನೆಯಿಂದ ಹಿಂದೆ ಸರಿದ BJP ಸರ್ಕಾರ!

Next Post

ನಾಯಕ ಶಿಖಾಮಣಿಗಳ ಅಸೂಕ್ಷ್ಮತೆಯ ಅಣಿಮುತ್ತುಗಳು

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ನಾಯಕ ಶಿಖಾಮಣಿಗಳ ಅಸೂಕ್ಷ್ಮತೆಯ ಅಣಿಮುತ್ತುಗಳು

ನಾಯಕ ಶಿಖಾಮಣಿಗಳ ಅಸೂಕ್ಷ್ಮತೆಯ ಅಣಿಮುತ್ತುಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada