ನಿನ್ನೆ ರಾತ್ರಿ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮತ್ತೊಂದು ರೋಡ್ ರೇಜ್ ಕೇಸ್ ದಾಖಲಾಗಿದೆ. ಕೆಲಸ ಮುಗಿಸಿ ಮನೆಗೆ ಬರ್ತಿದ್ದ ಟೆಕ್ಕಿ ಮನೀಶ್ ಕುಮಾರ್ ಮೇಲೆ ಕ್ಯಾಬ್ ಚಾಲಕನಿಂದ ಹಲ್ಲೆ ನಡೆಸಲಾಗಿದೆ.

ಪರಪ್ಪನ ಅಗ್ರಹಾರ ಠಾಣೆ ಸಮೀಪದ ಬೃಂದಾವನ ಅಪಾರ್ಟ್ಮೆಂಟ್ ಬಳಿ ರಾತ್ರಿ 9.30ಕ್ಕೆ ಘಟನೆ ನಡೆದಿದ್ದು,ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಕ್ಯಾಬ್ ಚಾಲಕ ಹಲ್ಲೆ ಮಾಡಿದ್ದಾನೆ. ನಿನ್ನೆ ರಾತ್ರಿ ವೈಟ್ ಪಿಲ್ಡ್ ನ ಕಂಪನಿಯಿಂದ ಕೆಲಸ ಮುಗಿಸಿ ಎಲೆಕ್ಟ್ರಾನಿಕ್ ಸಿಟಿ ಮನೆಗೆ ಬರ್ತಿದ್ದ ಟೆಕ್ಕಿ ಮೇಲೆ ಹಲ್ಲೆಯಾಗಿದೆ.

ರಾತ್ರಿ ವೇಳೆ ಪರಪ್ಪನ ಅಗ್ರಹಾರ ಸಮೀಪದ ಅಪಾರ್ಟ್ ಮೆಂಟ್ ಬಳಿ ಬೈಕ್ ಗೆ ಕ್ಯಾಬ್ ಚಾಲಕ ಅಡ್ಡ ಬಂದಿದ್ದಾನೆ.ಆವಾಗ ನೋಡ್ಕೊಂಡು ಹೋಗು ಅಂತ ಬೈಕ್ ಸವಾರ ಬೈದಿದ್ದಾನೆ. ಅದೇ ಸಿಟ್ಟಿಗೆ ಫಾಲೋ ಮಾಡಿಕೊಂಡು ಬಂದು ಬೈಕ್ ಸವಾರ ಮನೀಶ್ ಮೇಲೆ ಹಲ್ಲೆ ಮಾಡಿದ್ದಾನೆ.
ಈ ಘಟನೆಯಲ್ಲಿ ಕ್ಯಾಬ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಹಲ್ಲೆ ಮಾಡ್ತಿರುವ ವಿಡಿಯೋ ಬೈಕ್ ಚಾಲಕ ಮನೀಶ್ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ.ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ಎನ್ ಸಿಆರ್ ದಾಖಲಾಗಿದೆ.