ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಹಲವೆಡೆ ಮಳೆರಾಯ ಅಬ್ಬರಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕೆಂಪೇಗೌಡ ಸರ್ಕಲ್ ಬಳಿ 4 ಅಡಿಗೂ ಹೆಚ್ಚು ನೀರು ನಿಂತಿದ್ದಿ, ವಾಹನಗಳು ಅರ್ಧ ನೀರಿನಲ್ಲಿ ಮುಳುಗುವಂತಾಗಿದೆ. ಭಾರೀ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದ್ದು, ರಸ್ತೆಗಳು ಕಾಣದೇ ಕೆಲ ಕಾರುಗಳು ನಿಂತಲ್ಲೇ ನಿಂತಿವೆ. ಬಿರುಗಾಳಿ ಸಹಿತ ಮಳೆಗೆ ಬ್ಯಾರಿಕೇಡ್ಗಳು ನೆಲಕ್ಕುರುಳಿದ್ದು, ದೇವನಹಳ್ಳಿಯಲ್ಲೂ ಸತತ ಒಂದು ಗಂಟೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ನಲುಗಿ ಹೋಗಿದ್ದಾರೆ.
ಮೌಂಟ್ ಎವರೆಸ್ಟ್ ನಲ್ಲಿ ರಾಶಿ ರಾಶಿ ಕಸ ! ಹಿಮದಲ್ಲಿ ಹುದುಗಿಹೋದ ಚಾರಣಿಗರು !
ಪ್ರಪಂಚದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ (Mount everest) ಈಗ ಕಸದ ಮಡುವಿನಲ್ಲಿದೆ ಭೂಮಿಯ ಮೇಲೆ ಕಡಲ ಆಳದಲ್ಲಿ ಪ್ಲಾಸ್ಟಿಕ್ (Plastic) ಮತ್ತು ಕಸ ಪತ್ತೆಯಾಗಿದ್ದನ್ನು...
Read more