• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬೆಂಗಳೂರಿನ ಪಾತಕ ಲೋಕಕ್ಕೆ ಹೊಸ ಎಂಟ್ರಿ ದರ್ಶನ್‌..!?

ಕೃಷ್ಣ ಮಣಿ by ಕೃಷ್ಣ ಮಣಿ
August 26, 2024
in Top Story, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
ದರ್ಶನ್‌ ಫೋಟೋ.. ವಿಡಿಯೋ ಹಿಂದೆ ಕಾಂಗ್ರೆಸ್‌ ಕರಾಮತ್ತು..?
Share on WhatsAppShare on FacebookShare on Telegram

ಸಂಗದಿಂದ ಸನ್ಯಾಸಿಯೂ ಕೆಡ್ತಾನೆ ಅನ್ನೋ ಮಾತಿದೆ. ಅದಕ್ಕಾಗಿಯೇ ನಾವು ಮಾಡುವ ಸ್ನೇಹಿತರ ಬಳಗ ಉತ್ತಮ ಆಗಿರಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದರೆ ದರ್ಶನ್‌ ಸ್ನೇಹಿತರ ಬಳಗವೇ ಆ ರೀತಿಯ ದುಷ್ಕೃತ್ಯ ಎಸಗಲು ಪ್ರೇರಣೆ, ದರ್ಶನ್‌ ಕೊಲೆ ಮಾಡುವಷ್ಟು ಕ್ರೂರಿ ಅಲ್ಲ ಎಂದು ಸಾಕಷ್ಟು ಜನರು ಸಮರ್ಥನೆಯನ್ನೂ ಮಾಡಿದರು. ಆದರೆ ಇದೀಗ ದರ್ಶನ್‌ ಮಾಡಿರುವ ಸಂಗ ಎಂತಹದ್ದು..? ದರ್ಶನ್‌ ಸನ್ಮಾರ್ಗದಲ್ಲಿ ಸಾಗುತ್ತಿದ್ದಾರಾ..? ಅನ್ನೋ ಎಲ್ಲಾ ಅನುಮಾನಗಳಿಗೂ ಉತ್ತರ ಸಿಕ್ಕಿದೆ.

ADVERTISEMENT

ಜೈಲಿನಲ್ಲಿ ನಟ ದರ್ಶನ್‌ ಮತ್ತು ರೌಡಿಶೀಟರ್‌ ವಿಲ್ಸನ್​ ಗಾರ್ಡನ್ ನಾಗ ಹರಟೆ ಹೊಡೆಯುತ್ತಿರುವ ಫೋಟೋ ಜೈಲಿನ ಕಾಂಪೌಡ್‌ ದಾಟಿಕೊಂಡು ಮಾಧ್ಯಮಗಳ ಎದುರು ಬಂದಿದೆ. ಸಿದ್ದಾಪುರ ಮಹೇಶ್‌ ಎಂಬ ರೌಡಿಶೀಟರ್‌ ಕೊಂದಿದ್ದ ಆರೋಪದಲ್ಲಿ ಆಗಸ್ಟ್‌ 2023ರಂದು ಕೋರ್ಟ್​ಗೆ ಶರಣಾಗಿದ್ದ. ವಿಲ್ಸನ್‌ ಗಾರ್ಡನ್‌ ನಾಗನ ಮೇಲೆ ಕೋಕಾ ಕಾಯ್ದೆ ಹಾಕಲಾಗಿದೆ. ನಾಗನೊಂದಿಗೆ ಟೀ, ಸಿಗರೇಟ್ ಸೇದುತ್ತಾ ದರ್ಶನ್ ಹರಟೆ ಹೊಡೆಯುತ್ತಿರುವುದನ್ನು ನೋಡಿದಾಗ ದರ್ಶನ್‌ಗೆ ನಾಗ ಎಷ್ಟು ಆತ್ಮೀಯ ಅನ್ನೋದನ್ನು ಯಾರು ಬೇಕಿದ್ದರೂ ಊಹಿಸಬಹುದು.

ಇನ್ನು ವಿಲ್ಸನ್‌ ಗಾರ್ಡನ್‌ ನಾಗ ಅಷ್ಟೇ ಅಲ್ಲ, ಕುಳ್ಳ ಸೀನ ಕೂಡ ದರ್ಶನ್‌ ಜೊತೆ‌ ಬಿಂದಾಸ್‌‌ ಮಾತುಕತೆ ಮಾಡ್ತಿದ್ದಾನೆ. ಶ್ರೀನಿವಾಸ್ ಅಲಿಯಾಸ್‌ ಕುಳ್ಳ ಸೀನ ಕೂಡ ಬೆಂಗಳೂರಿನ ರೌಡಿ ಶೀಟರ್​. ತಲಘಟ್ಟಪುರ ಠಾಣಾ ವ್ಯಾಪ್ತಿಯ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ಕುಳ್ಳ ಸೀನ, ಪರಪ್ಪನ ಅಗ್ರಹಾರ ಜೈಲಿನಲ್ಲಿ ರೆಸಾರ್ಟ್‌‌ನಲ್ಲಿ ಕುಳಿತು ಮಾತುಕತೆ ಮಾಡುವಂತೆ ಮೀಟಿಂಗ್‌ ಮಾಡಿದ್ದಾರೆ. ಜೈಲು ಸಿಬ್ಬಂದಿ ಕಣ್ಗಾವಲಿನಲ್ಲೇ ರೌಡಿಗಳ ಜೊತೆ ದರ್ಶನ್‌‌ ಚರ್ಚೆ ನಡೆಸಿರುವುದು ಓಪನ್‌ ಸೀಕ್ರೆಟ್‌.

ಫೋಟೋ ಕಥೆ ಇಷ್ಟಾದ್ರೆ ವಿಡಿಯೋ ಮಾಡಿರುವ ರೌಡಿ ಧರ್ಮನ ಮೊಬೈಲ್‌ನಿಂದ ಎನ್ನುವುದು ಕೂಡ ಬಯಲಾಗಿದೆ. ದರ್ಶನ್‌ಗೆ‌ ವಿಡಿಯೋ ಕಾಲ್‌‌ ಮಾಡಿಕೊಟ್ಟಿದ್ದು ಬಾಣಸವಾಡಿ ಪೊಲೀಸ್‌ ಠಾಣೆ ರೌಡಿಶೀಟರ್‌‌ ಧರ್ಮ. ಕಳೆದ ಮೇ 7ರಂದು ಕಾರ್ತಿಕೇಯನ ಕೊಲೆ ಕೇಸ್‌ನಲ್ಲಿ ಆರೋಪಿ ಆಗಿರುವ ಧರ್ಮ, ದರ್ಶನ್‌ ಮಾತನಾಡಲು ವಿಡಿಯೋ ಕಾಲ್‌ ಮಾಡಿಕೊಟ್ಟಿದ್ದ. ನನ್ನ ಸೆಲ್‌ನಲ್ಲೇ ಬಾಸ್‌ ಇದ್ದಾರೆ ಎಂದು ಹೇಳಿಕೊಂಡಿದ್ದ ರೌಡಿ ಧರ್ಮ.

ರೌಡಿ ಸತ್ಯನ ಜೊತೆ ದರ್ಶನ್‌ ಸಂಬಂಧ. ದರ್ಶನ್‌ ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದು ರೌಡಿ ಸತ್ಯನ ಜೊತೆ ಎನ್ನುವುದು ಕೂಡ ಬಯಲಾಗಿದೆ. ರೌಡಿ ಸತ್ಯ ಬ್ಯಾಡರಹಳ್ಳಿ ರೌಡಿಶೀಟರ್‌ ಜನಾರ್ದನ್ ಅಲಿಯಾಸ್‌ ಜಾನಿ ಮಗ. ಕಾಲೇಜು ವಿದ್ಯಾರ್ಥಿಗೆ ಮಚ್ಚಿನಿಂದ ಹಲ್ಲೆ ಮಾಡಿ ಜೈಲುಪಾಲಾಗಿದ್ದ ರೌಡಿ ಸತ್ಯ, ದರ್ಶನ್‌ ಜೊತೆ ಮಾತಾಡಿ ವಿಡಿಯೋ ಹಂಚಿಕೊಂಡು ಬಿಲ್ಡಪ್‌ ತಗೊಂಡಿದ್ದ. ಕಲಾಸಿಪಾಳ್ಯದ ಕೆಲವು ಹುಡುಗರಿಗೂ ವಿಡಿಯೋ ಕಳಿಸಿದ್ದ ಎನ್ನುವುದು ಗೊತ್ತಾಗಿದೆ.

ಕೊಲೆ ಕೇಸ್‌ನಲ್ಲಿ ದರ್ಶನ್‌ನನ್ನು ಸಮರ್ಥಿಸಿ ಮಾತನಾಡುತ್ತಿದ್ದವರು ಈಗ ಉತ್ತರ ಕೊಡಬೇಕಿದೆ. ಕೊಲೆ ನಡೆದಿರುವುದು ಆಕಸ್ಮಿಕವೇ ಆಗಿರಬಹುದು. ಆದರೆ ದರ್ಶನ್‌ ತುಳಿದಿರುವ ಮಾರ್ಗ ಪಾತಕಲೋಕ. ಬೆಂಗಳೂರಿನ ಪಾತಕಲೋಕಕ್ಕೆ ಎಂಟ್ರಿಯಾದವರು ಹೊರಕ್ಕೆ ಬರುವುದು ಅಷ್ಟು ಸುಲಭದ ಮಾತಲ್ಲ ಎಂದು ಸಾಕಷ್ಟು ರೌಡಿಗಳು ತಮ್ಮದೇ ಕಥೆ ಹೇಳುವಾಗ ಹೇಳಿಕೊಂಡಿದ್ದೂ ಉಂಟು. ಇದೀಗ ನಾಲ್ಕೈದು ರೌಡಿಗಳ ಜೊತೆಗೆ ದರ್ಶನ್‌ ಸಂಪರ್ಕ ಇರುವುದು ಬಯಲಾಗಿದೆ. ದರ್ಶನ್‌ ಕೂಡ ಇನ್ನು ಪಾತಕ ಲೋಕದ ಮೇಲೆ ಹಿಡಿದ ಸಾಧಿಸ್ತಾರಾ..? ಅನ್ನೋ ಅನುಮಾನ ದಟ್ಟವಾಗ್ತಿದೆ.

Tags: Actor Darshanactor darshan arrestactor darshan arrestedactor darshan case updatesactor darshan video call from jailchallenging star darshan arrestedDarshandarshan arrested in murder casedarshan arrested in mysurudarshan in jaildarshan in jail videodarshan jail photo viraldarshan jail videodarshan sent to parappana agrahara jaildarshan thoogudeep arresteddarshan video call in jailkannada actor darshan
Previous Post

ದರ್ಶನ್‌ ಫೋಟೋ.. ವಿಡಿಯೋ ಹಿಂದೆ ಕಾಂಗ್ರೆಸ್‌ ಕರಾಮತ್ತು..?

Next Post

ಜೈಲಲ್ಲಿ ದರ್ಶನ್‌ ದರ್ಬಾರ್‌.. ರೇಣುಕಾಸ್ವಾಮಿ ಹೆತ್ತವರ ಕಣ್ಣೀರು

Related Posts

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
0

ಬೆಂಗಳೂರು: ನೋಂದಾಯಿತ ಕಟ್ಟಡ ಕಾರ್ಮಿಕರ ಆರೋಗ್ಯ ಕಾಪಾಡಲು ನಡೆಸುವ ಪ್ರಿವೆಂಟಿವ್‌ ಹೆಲ್ತ್‌ ಕೇರ್‌ ಯೋಜನೆಯಡಿ ಪರೀಕ್ಷೆಗಳನ್ನು ನಿಯಮಾನುಸಾರ ನಡೆಸಲಾಗುತ್ತದೆ. ಅಕ್ರಮ ನಡೆದಿರುವ ದೂರುಗಳಿದ್ದರೆ ತನಿಖೆ ನಡೆಸಲಾಗುವುದು ಎಂದು...

Read moreDetails
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

January 28, 2026
WPL : ಪ್ಲೇ ಆಫ್‌ ಎಂಟ್ರಿಗೆ ಸಿದ್ಧವಾದ ವನಿತೆಯರು : ಯುಪಿ ವಿರುದ್ಧ ಗೆಲುವಿಗೆ ಆರ್‌ಸಿಬಿ ಪ್ಲ್ಯಾನ್‌ ಏನು..?

WPL : ಪ್ಲೇ ಆಫ್‌ ಎಂಟ್ರಿಗೆ ಸಿದ್ಧವಾದ ವನಿತೆಯರು : ಯುಪಿ ವಿರುದ್ಧ ಗೆಲುವಿಗೆ ಆರ್‌ಸಿಬಿ ಪ್ಲ್ಯಾನ್‌ ಏನು..?

January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

January 28, 2026
Next Post
ಜೈಲಲ್ಲಿ ದರ್ಶನ್‌ ದರ್ಬಾರ್‌.. ರೇಣುಕಾಸ್ವಾಮಿ ಹೆತ್ತವರ ಕಣ್ಣೀರು

ಜೈಲಲ್ಲಿ ದರ್ಶನ್‌ ದರ್ಬಾರ್‌.. ರೇಣುಕಾಸ್ವಾಮಿ ಹೆತ್ತವರ ಕಣ್ಣೀರು

Recent News

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌
Top Story

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!
Top Story

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

by ಪ್ರತಿಧ್ವನಿ
January 28, 2026
JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?
Top Story

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

ಕಾರ್ಮಿಕರಿಗಾಗಿ ತಂದ ಯೋಜನೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಸಚಿವ ಸಂತೋಷ್‌ ಲಾಡ್‌

January 28, 2026
‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ: 1 ಕೋಟಿ ರೂ ಕೃತಿಚೌರ್ಯ ಕೇಸ್‌ ಹಾಕಲು ನಿರ್ಧಾರ..!

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada