ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲು ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್ ಭೇಟಿ ಆಗಿದ್ದಾರೆ. ಆರ್ ಅಶೋಕ್ ಮನೆಗೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಶಾಸಕ ಮುನಿರತ್ನ, ಯೋಗೇಶ್ವರ್ ಕೂಡ ಸಾಥ್ ನೀಡಿದ್ರು. ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ್ರ ಜೊತೆ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಗೆ ಪರವಾಗಿ ಚರ್ಚೆ ನಡೆಸಲಾಯಿತು. ಆರ್ ಆರ್ ನಗರದ ಶಾಸಕ ಮುನಿರತ್ನ, ಯೋಗೆಶ್ವರ್, ಕುಪೇಂದ್ರ ರೆಡ್ಡಿ, ಮಾಗಡಿ ಮಂಜುನಾಥ್ ಸೇರಿ ಚರ್ಚೆ ಮಾಡಿದ್ವಿ. ಏಪ್ರಿಲ್ 4 ರಂದು ಮಂಜುನಾಥ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದಿದ್ದಾರೆ.

ಏಪ್ರಿಲ್ 4ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಸಹ ಭಾಗಿಯಾಗಲಿದ್ದಾರೆ. ಬೆಳಗ್ಗೆ 11.25 ಕ್ಕೆ ನಾಮಪತ್ರ ಸಲ್ಲಿಸಲಾಗುತ್ತದೆ. ಬಿ.ವೈ ವಿಜಯೇಂದ್ರ, ಆರ್. ಅಶೋಕ್ ಕೂಡ ಭಾಗಿಯಾಗಲಿದ್ದು, ಬೃಹತ್ ಬಹಿರಂಗ ಸಮಾವೇಶ ಮಾಡಲಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಮೈತ್ರಿಯಾಗಿ ಚುನಾವಣೆ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದಿದ್ದಾರೆ
ಡಾ.ಮಂಜುನಾಥ್ ವೈದ್ಯಕೀಯ ಸೇವೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹಣದ ಮೂಲಕ ಹೋರಾಟ ಮಾಡಲು ಸಾಧ್ಯವಿಲ್ಲ. ಇನ್ನೂ 28 ದಿನ ಬಾಕಿ ಇದೆ. ಪ್ರತಿ ಕ್ಷೇತ್ರವಾರು ಚರ್ಚೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಹಣದ ಹೊಳೆ ಹರಿಸಲಾಗ್ತಿದೆ. ಅವ್ರ ಹಣ ಹಾಗೂ ಅಧಿಕಾರ ದುರುಪಯೋಗದ ಬಗ್ಗೆ ಚರ್ಚೆ ಮಾಡಿದ್ದೇವೆ. ಸುಮಾರು 18 ಲಕ್ಷ ಮತದಾರ ಇರೋ ಕ್ಷೇತ್ರವಾಗಿದೆ, ನಮ್ಮ ಅಭ್ಯರ್ಥಿ ಮಂಜುನಾಥ್ ಅವರಿಗೆ ಜನತೆಯ ಆಶಿರ್ವಾದ ಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.


ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಕುಮಾರಸ್ವಾಮಿ ಅವರ ಜೊತೆಗೆ ಡಾ.ಮಂಜುನಾಥ್ ಸ್ಪರ್ಧೆ ಹಾಗೂ ಚುನಾವಣಾ ತಯಾರಿ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಪ್ರತಿಷ್ಠಿತ ಕ್ಷೇತ್ರ. ಕುಮಾರಸ್ವಾಮಿ ನಿನ್ನೆ ಹೇಳಿದ್ರು. 2006 ರಲ್ಲಿ ನನ್ನ ರಾಜಕೀಯ ಜೀವನದಲ್ಲಿ ಹಾಲು ಜೇನನಂತಿತ್ತು. ಅದೇ ರೀತಿಯಾದ ಮೈತ್ರಿ ನಮ್ಮಲ್ಲಿ ಮತ್ತೆ ಬರ್ಬೇಕು. ಇವತ್ತು ಜೀವ ಕೋಡೊರ್ ಬೇಕಾ..? ಜೀವ ತೆಗೆಯೋರ್ ಬೇಕಾ..? ಎಂದು ಪ್ರಶ್ನಿಸಿದ್ದಾರೆ. ರಾಜಕಾರಣ ಒಳ್ಳೆಯ ರೀತಿಯಲ್ಲಿ ನಡಿಬೇಕಾದ್ರೆ, ಒಳ್ಳೆಯ ವ್ಯಕ್ತಿಗಳ ಅಗತ್ಯವಿದೆ. ಸಮಾಜಸೇವೆ ಮಾಡಿದವರು ಡಾ .ಮಂಜುನಾಥ್. ಮನೆ ಮನೆಗೂ ಡಾ. ಮಂಜುನಾಥ್ ಕರಪತ್ರ ತಲುಪಿದೆ. ಯಾವುದೇ ಜಾತಿ ಧರ್ಮ ಬೇಧ ಭಾವ ಇಲ್ಲದೆ ಕೆಲಸ ಮಾಡಿದ್ದಾರೆ. ದುರಾಡಳಿತ ಹಾಗೂ ಅಧಿಕಾರ ದಾಹದ ಸರ್ಕಾರ ಕೊನೆಯಾಗ್ಬೇಕು ಅಂತಾ ಜನ ತೀರ್ಮಾನ ಮಾಡಿದ್ದಾರೆ. ಹಣ ಬಲವೋ ಜನ ಬಲವೋ ಮುಖ್ಯನಾ..? ಅನ್ನೋದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಪ್ರೂವ್ ಮಾಡ್ತಾರೆ ಎಂದಿದ್ದಾರೆ.






