ಬೆಂಗಳೂರಿನಲ್ಲಿ (Bangalorer) ಕುರಿಯ ಮಟನ್ (Mutton) ಜೊತೆಗೆ ನಾಯಿ ಮಾಂಸವನ್ನ ಸೇರಿಸಲಾಗಿದೆ ಎಂಬ ಸುದ್ದಿ ಮಾಂಸ ಪ್ರಿಯರನ್ನ (Non veg lovers) ಬೆಚ್ಚಿ ಬೀಳಿಸಿದೆ. ನಿನ್ನೆ ರಾತ್ರಿ ಜೈಪುರದಿಂದ ಬೆಂಗಳುರಿನಿಂದ ಬಂದ ರೈಲಿನಲ್ಲಿ ಬಂದಿದ್ದ ಸುಮಾರು 90 ಬಾಕ್ಸ್ಗಳಲ್ಲಿ, ಒಂದು ಬಾಕ್ಸ್ನಲ್ಲಿ 30 ಕೆಜಿಯಂತೆ ಆಮದು ಮಾಡಲಾಗಿದ್ದ ಕುರಿ ಮಟನ್ ಜೊತೆಗೆ ನಾಯಿ ಮಾಂಸ ಬೆರೆಸಲಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ರಸ್ತೆಗಿಳಿದಿದ್ದು.

ಪುನೀತ್ ಕೆರೆಹಳ್ಳಿ (Puneeth kere halli) ನೇತೃತ್ವದಲ್ಲಿ ಹೀಂದೂ ಪರ ಕಾರ್ಯಕರ್ತರು, ಈ ಮಾಂಸ ಸಾಗುತ್ತಿದ್ದ ವಾಹನಗಳಿಗೆ ಮುತ್ತಿಗೆ ಹಾಕಿ ತಡೆದು, ಗೂಡ್ಸ್ ಸೀಝ್ ಮಾಡಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದಿದ್ದರು. ನಂತರ ಸ್ಥಳಕ್ಕೆ ಬಂದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ (Abdul razak), ನಮ್ಮ ಬಳಿ ಎಲ್ಲಾ ಲೈಸೆಸ್ನನ ಇದ್ದು, ಇದ್ರಲ್ಲಿ ಯಾವುದೇ ಮಾಂಸ ಕಲಬೆರಕೆ ಆಗಿಲ್ಲ ಎಂದು ತಿರುಗಿಬಿದ್ದರು.

ಕೊನೆಗೆ ಆಹಾರ ಇಲಾಖೆಯ (Food department) ಅಧಿಕಾರಿಗಳು ಸ್ಥಳಕ್ಕೆ ಬಂದು ಮಾಂಸದ ಸ್ಯಾಂಪಲ್ ಪಡೆದು ಲ್ಯಾಬ್ ಗೆ ಕಳುಹಿಸಿದ್ದು, ವರದಿ ಬರಲು 14 ದಿನ ಬೇಕಾಗಬಹುದು ಎಂದು ಹೇಳಿದ್ದಾರೆ. ಈ ಮಧ್ಯೆ ಇದು ಕೇವಲ ನಾಯಿ ಮಾಂಸ ಮಾತ್ರವಲ್ಲ, ಈ ಮಾಂಸ ಜೈಪುರದಿಂದ ಹೊರಟು, ಬೆಂಗಳೂರನ್ನ ತಲುಪುವಷ್ಟರಲ್ಲಿ 80 ಗಂಟೆಗಳ ಸಮಯ ಬೇಕಾಗುತ್ತೆ. ಹಾಗಾಗಿ ಇದು ಸೇವಿಸಲು ಯೋಗ್ಯವಲ್ಲದ ಮಾಂಸ ಎಂದು ಕೂಡ ಆರೋಪ ಮಾಡಿದ್ದಾರೆ.
ಒಟ್ನಲ್ಲಿ ಬೆಂಗಳೂರಿನಲ್ಲಿ ಮಾಂಸಾಹಾರ ಊಟಕ್ಕೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ (Hotels & restaurents) ಮೇಲೆ ಅವಲಂಭಿತರಾಗಿರುವ ಜನ ಈ ಸುದ್ದಿಯಿಂದ ನಿಜಕ್ಕೂ ಗಾಬರಿಗೊಳಗಾಗಿದ್ದು, ನಾಯಿ ಮಾಂಸದ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳೇ ಸತ್ಯಾಸತ್ಯತೆಯನ್ನ ಬಯಲಿಗೆಳೆಯಬೇಕಿದೆ.