
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ವಿಧಾನಸೌಧದ ಬಳಿ ʻಮ್ಯಾರಧಾನ್ಗೆ ಚಾಲನೇ ನೀಡಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 2028ಕ್ಕೆ ಮತ್ತೇ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದಾರೆ.

ಡಿಕೆಶಿವಕುಮಾರ್ ಇಂದು ವಿಶ್ವಪರಿಸರ ಜಾಗೃತಿ ಜಾತಿದಲ್ಲಿ ವಿಧಾನಸೌಧದ ಬಳಿ ಸೈಕಲ್ ತುಳಿಯುವ ಮೂಲಕ ಜಾಗೃತಿ ಮೂಡಿಸಿದರು. ಈ ವೇಳೆ ವಿಧಾನಸೌಧದ ಮೆಟ್ಟಿಲು ಬಳಿ ಡಿಕೆಶಿ ಕಾಲು ಸೈಕಲ್ ನಿಂದ ಕೆಳಗೆ ಜಾರಿ ಬಿದ್ದಿದ್ದಾರೆ…. ಇದು ಅಪಶಕುನ ಸಂಕೇತ, ಡಿಕೆ ಶಿವಕುಮಾರ್ ಮುಖ್ಯ ಮಂತ್ರಿ ಆಗುವ ಕನಸ್ಸಿಗೆ ಇದು ಅಪಶಕುನ ಎನ್ನುವ ವಾದ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
2028ಕ್ಕೆ ನಾವೇ ಪ್ರಮಾಣ ವಚನ ಸ್ವೀಕಾರ ಮಾಡ್ತೀವಿ ಅಂತ ಓವರ್ ಕಾನ್ಫಿಡೆನ್ಸ್ ಆಗಿ ಮಾಧ್ಯಮದ ಕ್ಯಾಮರಾಗಳ ಮುಂದೆ ಡೈಲಾಗ್ ಹೊಡೆದಿರುವ ಡಿಕೆ ಶಿವಕುಮಾರ್ ಅವರಿಗೆ ಅದು ಹೇಳಿದಷ್ಟು ಸುಲಭ ಅಲ್ಲ ಎನ್ನುವ ಅರಿವು ಕೂಡ ಇದೆ. ಇದಕ್ಕೆ ಮುನ್ಸೂಚನೆ ಎನ್ನುವಂತೆ ಇಂದು ವಿಧಾನಸೌಧದ ಮೆಟ್ಟಿಲುಗಳ ಮುಂದೆ ಸೈಕಲ್ ನಿಂದ ಜಾರಿ ಬೀಳುವ ಮೂಲಕ ನವೆಂಬರ್ ನಲ್ಲಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅಪಶಕುನದ ಸಂಕೇತ ಎನ್ನುವ ವಾದ ಜೋತಿಷ್ಯ ವಲಯದಲ್ಲಿ ಕೇಳಿಬರುತ್ತಿದೆ.
ನವೆಂಬರ್ ನಲ್ಲಿ ಡಿಕೆಶಿಗೆ ಸಿಎಂ ಸ್ಥಾನ ಫಿಕ್ಸ್… ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಆ ಹೇಳಿಕೆಗೂ ಇಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಜಾರಿ ಬಿದ್ದಿರುವುದುಕ್ಕೂ ಇದು ಅಪಶಕುನದ ಸಂಕೇತ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಈ ಹಿಂದೆಯೂ ಇದೇ ರೀತಿ ಸೋಷಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಸಿಎಂ ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕುಳಿತಾಗ ಮುಖ್ಯಮಂತ್ರಿಸ್ಥಾನ ಕಳೆದು ಕೊಳ್ತಾರೆ ಅಂತ ಹೇಳಲಾಗಿತ್ತು. ಇದಕ್ಕೆ ಸಿದ್ರಾಮಯ್ಯ ನವರು ಕಾರಿನ ಮೇಲೆ ಕಾಗೆ ಕುಳಿತರೆ ರಾಜ್ಯದ ಜನತೆಗೆ ಏನಾಗಬೇಕು? ಈ ಬಗ್ಗೆ ಜ್ಯೋತಿಷಿಗಳನ್ನು ಕರೆಸಿ ಚಾನೆಲ್ನಲ್ಲಿ ಚರ್ಚೆ ನಡೆಸಿದರು. ಜ್ಯೋತಿಷಿಗಳು ಅಧಿಕಾರ ಕಳ್ಕೊತೀನಿ ಅಂತಾ ಹೇಳಿದ್ದರು. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳ್ಕೊತೀನಿ ಅಂತಾನೂ ಜ್ಯೋತಿಷಿಗಳು ಹೇಳಿದ್ದರು. ಆದರೆ ನಾನು ಅಧಿಕಾರ ಪೂರ್ಣಗೊಳಿಸಿ 2ನೇ ಬಾರಿ ಸಿಎಂ ಆದೆ. ಕಾಗೆ ಕೂತಾಗ ಮಾತಾಡಿದ್ದ ಜ್ಯೋತಿಷಿಗಳ ಮಾತಿಗೆ ಏನು ಬೆಲೆ ಬಂತು? ಎಂದು ಸಿಎಂ ಸಿದ್ದರಾಮಯ್ಯ ಇಂದು ವಾಗ್ದಾಳಿ ನಡೆಸಿ, ಪ್ರಶ್ನೆ ಮಾಡಿದ್ರು. ಈಗಲೂ ನವೆಂಬರ್ ನಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುವುದಕ್ಕೂ, ಇಂದು ವಿಧಾನಸೌಧದ ಮೆಟ್ಟಿಲುಗಳ ಮುಂದಿ ಕಾಲ್ ಜಾರಿ ಆಕಸ್ಮಿಕವಾಗಿ ಬಿದ್ದಿರುವುದಕ್ಕೂ ಏನು ಸಂಬಂಧ.? ಇದು ಮೌಢ್ಯದ ಪರಮಾವದಿ. ಏಕಂತೀರಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ. ಧನ್ಯವಾದಗಳು.