![](https://pratidhvani.com/wp-content/uploads/2024/06/dfbshbsdfg-1024x741.jpg)
ಅಬಕಾರಿ ನೀತಿ ಹಗರಣ (Excise duty scam) ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ಸಿಎಂ ಅರವಿಂದ ಕೇಜ್ರವಾಲ್ಗೆ (Aravind Kejriwal) ದೆಹಲಿ ಕೋರ್ಟ್ (Delhi court) ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ್ದ ರೋಸ್ ಅವೆನ್ಯೂ ಕೋರ್ಟ್ 1 ಲಕ್ಷ ರೂ. ಮೊತ್ತದ ಬಾಂಡ್ ಮೇಲೆ ಜಾಮೀನು ನೀಡಿದೆ.
![](https://pratidhvani.com/wp-content/uploads/2024/06/erythgfg-1024x576.jpg)
ಜಾಮೀನು ಬಾಂಡ್ಗಳನ್ನು ಸ್ವೀಕರಿಸಲು ತನಿಖಾ ಸಂಸ್ಥೆಗೆ 48 ಗಂಟೆಗಳ ಕಾಲಾವಕಾಶ ನೀಡುವಂತೆ ಜಾರಿ ನಿರ್ದೇಶನಾಲಯ (ED) ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ. ಕೇಜ್ರವಾಲ್ಗೆ ಬೇಲ್ ಸಿಕ್ಕ ಬೆನ್ನಲ್ಲೇ ಎಎಪಿ (AAP) ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.
![](https://pratidhvani.com/wp-content/uploads/2024/06/ddfvdfdfdb.jpeg)
ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಜೈಲಿನಲ್ಲಿದ್ದ ಅರವಿಂದ್ ಕೇಜ್ರವಾಲ್ಗೆ ಕೋರ್ಟ್, ಪ್ರಾಚಾರದಲ್ಲಿ ಭಾವಹಿಸಲು ಅವಕಾಶ ಮಾಡಿಕೊಟ್ಟಿತ್ತು. ಬಹಿರಂಗ ಪ್ರಚಾರದ ನಂತರ ಕೇಬ್ರಿವಾಲ್ ಮತ್ತೆ ಜೈಲು ಸೇರಿದ್ದರು. ಇದೀಗ ಕೋರ್ಟ್ ಅವರಿಗೆ ಜಾಮಿನು ಮಂಜೂರು ಮಾಡಿದೆ