ಹೊಳೆ ನರಸೀಪುರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಡ ರೇವಣ್ಣ ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಕೆ.ಆರ್.ನಗರ ಕಿಡ್ನಾಪ್ ಕೇಸ್ ನಲ್ಲಿ ಬೇಲ್ ಸಿಕ್ಕು ಹೊರಬರ್ತಿದ್ದ ಹಾಗೆ ಎಸ್.ಐ.ಟಿ ಮತ್ತೊಂದು ಕೇಸ್ ನಲ್ಲಿ ವಶಕ್ಕೆ ಪಡೆಯೋ ಪ್ರಯತ್ನದಲ್ಲಿತ್ತು. ಇದಕ್ಕೆ ರೇವಣ್ಣ ಬ್ರೇಕ್ ಹಾಕಿದ್ದಾರೆ.
![](https://pratidhvani.com/wp-content/uploads/2024/05/HD-Revanna.webp)
ಸದ್ಯ ಮೊನ್ನೆಯಷ್ಟೇ ಪರಪ್ಪನ ಅಗ್ರಹಾರದಿಂದ (Parappana agrahara) ಹೊರಬಂದಿರೋ ರೇವಣ್ಣಗೆ (Revanna) ಮತ್ತೆ ಎಸ್ ಐ ಟಿ (SIT) ಭೂತ ಬೆನ್ನುಬಿದ್ದಿತ್ತು. ಹೊಳೆನರಸೀಪುರ (Hole narasipura) ಪ್ರಕರಣದ ತನಿಖೆಯನ್ನ ಎಸ್ಐಟಿ ಚುರುಕುಗೊಳಿಸಿದ್ದು, ಈಗಾಗಲೇ ಕೇಸ್ ಸಂಬಂಧ 3 ನೋಟಿಸ್ ಜಾರಿ ಮಾಡಲಾಗಿತ್ತು. ಜೊತೆಗೆ ಸಂತ್ರಸ್ತೆಯರಿಂದ ಸ್ಥಳ ಮಹಜರು ಮಾಡಿಸಿದೆ. ಅಲ್ಲದೇ 164 ಹೇಳಿಕೆಯನ್ನೂ ದಾಖಲಿಸಲಾಗಿತ್ತು. ಜೊತೆಗೆ ಪ್ರಕರಣದ ಆರೋಪಿ ರೇವಣ್ಣರ ವಿಚಾರಣೆ ನಡೆಸಲು ಮತ್ತೊಂದು ನೋಟಿಸ್ (SIT notice) ನೀಡಲು ಮುಂದಾಗಿತ್ತು.
![](https://pratidhvani.com/wp-content/uploads/2024/05/hd-revanna-1-3-1024x576.webp)
ಸದ್ಯ ರೇವಣ್ಣ ಪರಪ್ಪನ ಅಗ್ರಹಾರ ಜೈಲುಪಾಲಾಗಿ ಕಂಬಿ ಎಣಿಸಿದ್ದು, ಹರಸಾಹಸ ಪಟ್ಟು ಜಾಮೀನಿನ (Bail) ಮೇಲೆ ಹೊರಬಂದಿದ್ದು, ಕೆ.ಆರ್.ನಗರದಲ್ಲಿ (KR nagar) ದಾಖಲಾಗಿದ್ದ ಕಿಡ್ನಾಪ್ (Kidnap) ಕೇಸ್ನಲ್ಲಿ. ಇನ್ನೇನು ಈಗಷ್ಟೇ ಹೊರಬಂದೆ, ದೇವಸ್ಥಾನಗಳನ್ನ ಸುತ್ತಾಡಿ ದೇವರ ದರ್ಶನ ಪಡೆಯೋಣ ಎನ್ನುವಷ್ಟರಲ್ಲಿ ಮತ್ತೊಂದು ಸಂಕಷ್ಟ ಎದುರಾಗಿತ್ತು.
ಹೊಳೆನರಸಿಪುರ ಕೇಸ್ನಲ್ಲಿ ಈಗಾಗಲೇ ರೇವಣ್ಣಗೆ ಎಸ್ಐಟಿ (SIT) ಮೂರು ನೋಟಿಸ್ ಜಾರಿ ಮಾಡಿದ್ದು, ಇದೀಗ ನಾಲ್ಕನೇ ನೋಟಿಸ್ ನೀಡಲು ಸಿದ್ಧತೆ ನಡೆಸಿದ ಬೆನ್ನಲ್ಲೇ ಅಲರ್ಟ್ ಆದ ರೇವಣ್ಣ ಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದಾರೆ .