ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್ನಲ್ಲಿ 2ನೇ ಆರೋಪಿ ದರ್ಶನ್ (A2 Accused Darshan) ಜಾಮೀನು ಅರ್ಜಿ ವಿಚಾರಣೆ ನಡೀತು. ದರ್ಶನ್ ಪರ ಖ್ಯಾತ ವಕೀಲ ಸಿ ವಿ ನಾಗೇಶ್ ವಾದ (C V Nagesh) ಮಂಡನೆ ಮಾಡಿದ್ರು. ನಿನ್ನೆ ಕೂಡ ವಾದ ಮಂಡಿಸಿದ್ದ ಸಿವಿ ನಾಗೇಶ್ ಇಂದೂ ಕೂಡ ವಾದ ಮುಂದುವರಿಸಿದ್ದಾರೆ. ಚಾರ್ಜ್ಶೀಟ್ನಲ್ಲಿ ಸಾಕಷ್ಟು ಲೋಪ ಆಗಿರುವ ಬಗ್ಗೆ ವಕೀಲ ನಾಗೇಶ್ ಪ್ರಸ್ತಾಪ ಮಾಡ್ತಿದ್ದಾರೆ. ಪಂಚನಾಮೆ ತಡ ಮಾಡಿದ್ಯಾಕೆ..? ಸೆಕ್ಯೂರಿಟಿ ಗಾರ್ಡ್ ಹೇಳಿಕೆ ಸರಿಯಿಲ್ಲ. ನಗರದಿಂದ ಹೊರಗಿದ್ದ PSIಗೆ ವಿಡಿಯೋ ಹೋಗಿತ್ತು. ಪೊಲೀಸರಿಗೆ ಎಲ್ಲಾ ಮಾಹಿತಿ ಇತ್ತು. ಆದರೂ ಪ್ರಕರಣದಲ್ಲಿ ಪೊಲೀಸ್ರು ಯಾಕೆ ತಟಸ್ಥವಾಗಿದ್ದರು? ದರ್ಶನ್ ಹೇಳಿಕೆ ದಾಖಲಿಸುವ ತನಕ ಯಾಕೆ ಸುಮ್ಮನಿದ್ರು? ಅನ್ನೋದನ್ನು ಪ್ರಸ್ತಾಪ ಮಾಡಿದ್ದಾರೆ.

ಪೋಸ್ಟ್ಮಾರ್ಟಂ(Postmortem) ತಡ ಮಾಡಿದ್ದಾರೆ.. ಬಾಡಿ ಐಡೆಂಟಿಟಿ ಆಗಿರಲಿಲ್ಲ ಅಂತಾರೆ.. ಅದು ತನಿಖೆ ವೇಳೆ ಮಾಡಬೇಕಿತ್ತಲ್ವಾ..? ಒಟ್ಟು ₹40 ಲಕ್ಷ ಹಣ ನೀಡಿದ್ದಾಗಿ ಹೇಳಿದ್ದಾರೆ.. ಆ ಹಣ ಮೇ. 1ರಂದು ಮೋಹನ್ ರಾಜ್ ದರ್ಶನ್ಗೆ ನೀಡಬೇಕಿದ್ದ ಬಾಕಿ ಹಣ ಆಗಿತ್ತು.. ಇದನ್ನ ಸಾಕ್ಷಿಗಳಿಗೆ ಕೊಡಲು ಸಂಗ್ರಹ ಅಂತ ಉಲ್ಲೇಖಿಸಿದ್ದಾರೆ.. ತನಿಖಾಧಿಕಾರಿಗಳು ತಪ್ಪು ಮಾಡಿದ್ದಾರೆಂದು ವಾದ ಮಂಡಿಸಿದ್ದಾರೆ ದರ್ಶನ್ ಪರ ವಕೀಲ ಸಿ.ವಿ ನಾಗೇಶ್(C.V Nagesh). ಮೋಹನ್ ಹಣಕ್ಕೂ ಕ್ರೈಮ್ಗೂ ಸಂಬಂಧವೇ ಇಲ್ಲ ಎಂದಿದ್ದಾರೆ..

ಪ್ರಕರಣದಲ್ಲಿ ದರ್ಶನ್ ಸಿಲುಕಿಸೋ ಪ್ಲ್ಯಾನ್ ಆಗಿದೆ. ಸಿಸಿಟಿವಿ ಕ್ಯಾಮೆರಾ ಗೋಡೆಯಲ್ಲಿತ್ತು ಅಂದಿದ್ದಾರೆ. ಆಮೇಲೆ ಸಿಸಿಟಿವಿ ಡಿವಿಆರ್ (CCTV DVR) ಸೀಜ್ ಮಾಡಿದ್ದಾರೆ. ಪಿಎಸ್ಐ ವಿನಯ್ಗೆ (PSI Vinay) ಮೊದಲೇ ಹೇಗೆ DVR ಸಿಕ್ತು..? 9ನೇ ತಾರೀಖು ಬೆಳಗ್ಗೆನೇ ಸಿಸಿಟಿವಿ ಸಿಕ್ಕಿದೆ. ಪೊಲಿಸರಿಗೆ ಸಿಸಿಟಿವಿ ವಿಡಿಯೋ ಸಿಕ್ಕಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಪೊಲೀಸ್ರು ವಶಕ್ಕೆ ಪಡೆಯುವ ಮುನ್ನ ಕೆಲವರ ಎಂಟ್ರಿ ಆಗಿದೆ ಎಂದು FSLನ ಕೆಲವು ಅಂಶಗಳನ್ನ ಉಲ್ಲೇಖಿಸಿದ್ದಾರೆ.

ಆರೋಪಿಗಳೇ ಸಬ್ ಇನ್ಸ್ಪೆಕ್ಟರ್ ಗೆ ವಿಡಿಯೋ ಕಳಿಸಿದ್ದಾರೆ. ಆ ಬಳಿಕ PSI ವಿನಯ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ಆದರೂ PSI ಅವರ ಫೋನ್ ಸೀಜ್ ಮಾಡಿಲ್ಲ ಯಾಕೆ..? PSI 110 ಬಾರಿ ಚಾಟ್ ಮಾಡಿದ್ದಾರೆ. ಯಾರು ವಿಡಿಯೋ ಡಿಲೀಟ್ ಮಾಡಿದ್ದು..? ಇದುವರೆಗೂ ಯಾಕೆ ಆ ವಿಡಿಯೋ ರಿಟ್ರೀವ್ ಆಗಿಲ್ಲ..? ನನ್ನ ಈ ಪ್ರಶ್ನೆಗೆ ಯಾರು ಉತ್ತರ ಕೊಡ್ತಾರೆ? ಎಂದು ಕೋರ್ಟ್ನ ಪ್ರಶ್ನೆ ಮಾಡಿರುವ ಸಿವಿ ನಾಗೇಶ್, ವೈಜ್ಞಾನಿಕವಾಗಿ ತನಿಖೆ ಆಗಬೇಕಾಗಿದೆ. ಆದರೆ ಇಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಪ್ರತಿಪಾದಿಸಿದ್ದಾರೆ. ತಾತ್ಕಾಲಿಕವಾಗಿ ಊಟದ ಬ್ರೇಕ್ ಕೊಡಲಾಗಿದೆ.