ಆರ್ಥಿಕ ದಿವಾಳಿ ಹಿನ್ನೆಲೆಯಲ್ಲಿ ಸಂಕಷ್ಟದಿಂದ ಬೇಸತ್ತ ಶ್ರೀಲಂಕಾದ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದು, ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ಮುಂದುವರಿಯಲಿದ್ದಾರೆ.
2019ರಲ್ಲಿ ಬಹುಮತದೊಂದಿಗೆ ಮಹಿಂದ ರಾಜಪಕ್ಸೆ ಅಧಿಕಾರಕ್ಕೆ ಬಂದಿದ್ದರು. ಆದರೆ ಅವರ ಆಡಳಿತದಲ್ಲಿ ದೇಶ ಆರ್ಥಿಕ ದುಸ್ಥಿತಿ ತಲುಪಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ಮಹಿಂದ ರಾಜಪಕ್ಸೆ ಅವರ ಹಿರಿ ಮಗ ನಮಲ್ ರಾಜಪಕ್ಸೆ ಕೂಡ ಇದ್ದಾರೆ. ಅವರು ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದರು.






