ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ವಿಮಲ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಟೀಕೆಗೆ ಟ್ರೋಲ್ಗೆ (troll) ಒಳಗಾಗಿದ್ದರು. ವಿಮಲ್ ಪ್ರಚಾರ ರಾಯಭತ್ವದಿಂದ ಅವರು ಹಿಂದೆ ಸರಿದಿದ್ದರು. ಈ ಘಟನೆ ನಡೆದು ವರ್ಷದ ಮೇಲಾಗಿದೆ. ಈ ವಿಚಾರದಲ್ಲಿ ಅಕ್ಷಯ್ ಕುಮಾರ್ ಬಗ್ಗೆ ಮೂಡಿದ್ದ ಅಸಮಾಧಾನ ಕಡಿಮೆ ಆಗಿದೆ. ಈ ಕಾರಣಕ್ಕೋ ಏನೋ ಅಕ್ಷಯ್ ಕುಮಾರ್ ಮತ್ತೆ ವಿಮಲ್ನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಅವರು ಮತ್ತೆ ಟೀಕೆಗೆ ಒಳಗಾಗಿದ್ದಾರೆ. ಅಕ್ಷಯ್ ಅವರನ್ನು ಅನೇಕರು ಕಟುವಾಗಿ ಟೀಕಿಸಿದ್ದಾರೆ.
![](https://pratidhvani.com/wp-content/uploads/2023/10/aa1650521696033.jpg)
ಸಿನಿಮಾ ನಟರಿಗೆ ನಿಜ ಜೀವನದಲ್ಲಿ ಒಳ್ಳೇಯದೆ ಇಮೇಜ್ ಇರುತ್ತದೆ. ಅದಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಅಕ್ಷಯ್ ಕುಮಾರ್ ಅವರ ಬಗ್ಗೆ ಜನರಿಗೆ ಅಪಾರ ಅಭಿಮಾನ ಇದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಸಿನಿಮಾಗಳನ್ನು ಅಕ್ಷಯ್ ಕುಮಾರ್ ಮಾಡಿದ್ದಾರೆ. ಅವರು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗಿತ್ತು. ಯಾವಾಗಲೂ ಫಿಟ್ನೆಸ್ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದು ಸರಿ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದರು. ಇದಾದ ಬೆನ್ನಲ್ಲೇ ವಿಮಲ್ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅವರು ಹೇಳಿದ್ದರು. ಈಗ ಅಕ್ಷಯ್ ವಿಮಲ್ನ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಅವರು ಕಾರಿನಲ್ಲಿ ಕುಳಿತಿರುತ್ತಾರೆ. ಅಕ್ಷಯ್ ಮನೆಯಲ್ಲಿ ಕುಳಿತು ಹೆಡ್ಫೋನ್ ಹಾಕಿ ಹಾಡು ಕೇಳುತ್ತಾ ಇರುತ್ತಾರೆ. ಶಾರುಖ್ ಕರೆದಿದ್ದು ಅಕ್ಷಯ್ಗೇ ಕೇಳುವುದೇ ಇಲ್ಲ. ಆಗ ಬೌಲ್ ಮೂಲಕ ಕಿಟಕಿ ಗಾಜಿಗೆ ಹೊಡೆಯುತ್ತಾರೆ ಶಾರುಖ್. ಆಗಲೂ ಅಕ್ಷಯ್ಗೆ ಗೊತ್ತಾಗುವುದಿಲ್ಲ. ಪಕ್ಕದಲ್ಲೇ ಇರುವ ಅಜಯ್ ವಿಮಲ್ ಪಾನ್ ಮಸಾಲ ಸೇವನೆ ಮಾಡುತ್ತಾರೆ. ಈ ಗುಟ್ಕಾದಲ್ಲಿರುವ ಕೇಸರಿಯ ಪರಿಮಳ ಅಕ್ಷಯ್ ಕುಮಾರ್ ಮೂಗಿಗೆ ಬಡಿದು ಅವರು ಕೆಳಗೆ ಇಳಿದು ಬರುವ ರೀತಿಯಲ್ಲಿ ಜಾಹೀರಾತನ್ನು ತೋರಿಸಲಾಗಿದೆ.
![](https://pratidhvani.com/wp-content/uploads/2023/10/ju.jpg)
2022ರ ಏಪ್ರಿಲ್ನಲ್ಲಿ ಟ್ವೀಟ್ ಮಾಡಿದ್ದ ಅಕ್ಷಯ್, ‘ದಯವಿಟ್ಟು ನನ್ನ ಕ್ಷಮಿಸಿ. ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ. ನೀವು ನೀಡಿರುವ ಎಲ್ಲಾ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆ ಉತ್ತೇಜಿಸುವುದಿಲ್ಲ. ಮಾನವೀಯತೆಯ ಕಾರಣದಿಂದ ನಾನು ಈ ಅಡ್ವಟೈಸ್ಮೆಂಟ್ನಿಂದ ಹಿಂದೆ ಸರಿಯುತ್ತೇನೆ. ಇದರ ಸಂಭಾವನೆಯನ್ನು ಒಳ್ಳೆಯ ಉದ್ದೇಶಕ್ಕೆ ನೀಡಲು ಬಯಸಿದ್ದೇನೆ. ಬ್ರ್ಯಾಂಡ್ನವರು ಒಪ್ಪಂದದ ಅವಧಿ ಮುಗಿಯುವವರೆಗೂ ಆ ಜಾಹೀರಾತನ್ನು ಟೆಲಿಕಾಸ್ಟ್ ಮಾಡಬಹುದು. ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರುತ್ತೇನೆ’ ಎಂದಿದ್ದರು ಅಕ್ಷಯ್ ಕುಮಾರ್.
ಈಗ ಪ್ರಸಾರ ಕಂಡಿರೋದು ಈ ಮೊದಲೇ ಶೂಟ್ ಮಾಡಿದ್ದ ಜಾಹಿರಾತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಪಠಾಣ್’ ಸಿನಿಮಾ ಸಂದರ್ಭದಲ್ಲಿ ಶಾರುಖ್ ಖಾನ್ ಅವರು ಉದ್ದ ಕೂದಲು ಬಿಟ್ಟುಕೊಂಡಿದ್ದರು. ಈ ಜಾಹೀರಾತಿನಲ್ಲೂ ಅವರಿಗೆ ಉದ್ದ ಕೂದಲಿದೆ. ಈ ಕಾರಣದಿಂದ ಈ ಅನುಮಾನ ಮೂಡಿದೆ. ಅಕ್ಷಯ್ ಕುಮಾರ್ ಅವರು ಗುಟ್ಕಾನ ವಿರೋಧಿಸಿದ್ದರು. ‘ಸ್ವಸ್ಛ ಭಾರತ’ ಯೋಜನೆಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಅವರು ಈ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದರು. ಗುಟ್ಕಾ ಕಂಪನಿಗಳಿಂದ ಅವರಿಗೆ ಸಾಕಷ್ಟು ಆಫರ್ ಬಂದಿತ್ತಂತೆ. ಆದರೆ, ಇದನ್ನು ಅವರು ಬಿಟ್ಟಿದ್ದರಂತೆ. ಹಳೇ ವಿಡಿಯೋವನ್ನು ಶೇರ್ ಮಾಡಿ, ಅಕ್ಷಯ್ ಕುಮಾರ್ಗೆ ಪಾಠ ಹೇಳಲಾಗುತ್ತಿದೆ.