ಎಐಎಡಿಎಂಕೆ ಮಧ್ಯಂತರ ಅಧ್ಯಕ್ಷ ಪಳನಿಸ್ವಾಮಿ ಮಹತ್ವದ ಬೆಳವಣಿಗೆಯಲ್ಲಿ ಪನ್ನೀರ್ ಸೆಲ್ವಂ ಹಾಗೂ ಅವರ ಬೆಂಬಲಿಗರನ್ನು ಪಕ್ಷದಿಂದ ವಜಾಗೊಳಿಸಿದ್ದಾರೆ.
ಮಾಜಿ ಸಿಎಂ ಜಯಲಲಿತಾ ನಿಧನಗೊಂಡ 6 ವರ್ಷಗಳ ನಂತರ ಎಡಪ್ಪಾಡಿ ಪನ್ನೀರ್ ಸೆಲ್ವಂ ಅವರನ್ನು ಸೋಮವಾರ ನಡೆದ ಎಐಎಡಿಎಂಕೆ ಪಕ್ಷದ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಪಕ್ಷದಲ್ಲಿ ಇಬ್ಬರು ನಾಯಕರ ನೀತಿಯನ್ನು ತೆಗೆದು ಹಾಕಲಾಯಿತು. ಇದರಿಂದ ಪಕ್ಷಕ್ಕೆ ಹಾನಿ ಮತ್ತು ಗೊಂದಲ ಸೃಷ್ಟಿಯಾಗುತ್ತಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಯಿತು.

ಇದೇ ವೇಳೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಹಾಗೂ ಅವರ ಬೆಂಬಲಿಗರಾದ ಮನೋಜ್ ಪಾಂಡಿಯನ್, ಜೆಸಿಡಿ ಪ್ರಭಾಕರನ್, ಆರ್.ವೈಐಇಲಿಂಗಂ ಮುಂತಾದವರನ್ನು ಪಕ್ಷದಿಂದ ವಜಾಗೊಳಿಸಲಾಯಿತು.