![](https://pratidhvani.com/wp-content/uploads/2023/09/WhatsApp-Image-2023-09-30-at-4.38.33-PM-1024x576.jpeg)
ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಇಂದು ಕೋಲಾರ ಜಿಲ್ಲೆಯಲ್ಲಿ ಮಳೆ , ಬರ ಹಾಗೂ ಬಳೆ ಪರಿಸ್ಥಿತಿ ಪರಿಶೀಲಿಸಿ ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದರು. ಕೋಲಾರ ಜಿಲ್ಲೆಗೆ ಆಗಮಿಸುವ ಮಾರ್ಗದುದ್ದಕ್ಕೂ ಬೆಳೆ ಪರಿಸ್ಥಿತಿ ಪರಿಶೀಲಿಸಿದ ಸಚಿವರು ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ರೈತರ ಅಹವಾಲು ಆಲಿಸಿದರು.
ರೈತರ ಮನವಿಯಂತೆ ನರ್ಸರಿಗಳಿಗೆ ಪರವಾನಗಿ ವಿತರಣೆ ಹಾಗೂ ಮೇಲ್ವಿಚಾರಣೆ ನಡೆಸುವಂತೆ ತೋಟಗಾರಿಕೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ಸೂಚಿಸಿದರು. ಟೊಮೇಟೊ ಬೆಳೆ ಕೀಟ ಬಾಧೆ ನಿಯಂತ್ರಣ ಕ್ರಮಕ್ಕೆ ಕೃಷಿ ವಿಶ್ವವಿದ್ಯಾಲಯದ ತಜ್ಞರರಿಂದ ಮಾಹಿತಿ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಇದೇ ವೇಳೆ ಸಚಿವರು ಕೃಷಿ, ಹಾಗೂ ಜಲಾನಯನ ಇಲಾಖೆ ವತಿಯಿಂದ ಮಾವಿನ ಸಸಿಗಳು,ಜೇನು ಸಾಕಾಣಿಕಾ ಪೆಟ್ಟಿಗೆಗಳು ,ಹನಿ ನಿರಾವರಿ ಸಾಧನಗಳು ಸೇರಿದಂತೆ ರೈತರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು .
![](https://pratidhvani.com/wp-content/uploads/2023/09/WhatsApp-Image-2023-09-30-at-4.38.35-PM-1024x576.jpeg)
ಇದೇ ವೇಳೆ ಸಚಿವರು ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಹಲವು
ಸಲಹೆ ಸೂಚನೆಗಳನ್ನು ನೀಡಿದರು. ಬರ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಡೆಸುವಂತೆ ಸಚಿವರು ನಿರ್ದೇಶನ ನೀಡದರು. ರಾಜ್ಯದಲ್ಲಿ ಯಾವುದೇ ರೀತಿಯ ರಸಗೊಬ್ಬರ ಪೂರೈಕೆ ಕೊರತೆಯಾಗದಂತೆ ನಿಗಾವಹಿಸಲಾಗಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದರು. ಕಳೆದ ನಾಲ್ಕೈದು ದಿನ ರೈಲ್ವೆ ಸಾರಿಗೆ ಸಮಸ್ಯೆಯಿಂದ ಸಾಗಾಣಿಕೆ ವಿಳಂಬವಾಗಿತ್ತು. ಈಗಾಗಲೇ ಗೋದಾಮುಗಳಿಗೆ ಸಾಗಾಣಿಕೆಯಾಗುತ್ತಿದೆ ಯಾವುದೇ ವೆತ್ಯಯ ಅಗದಂತೆ ಅಧಿಕಾರಿಗಳು ಎಚ್ಚರ ವಹಿಸಿ ಎಂದು ಸೂಚನೆ ನೀಡಿದರು.
![](https://pratidhvani.com/wp-content/uploads/2023/09/WhatsApp-Image-2023-09-30-at-4.38.38-PM-1024x576.jpeg)
ಬೆಳೆ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಿ, ಹಾವಾಮಾನ ,ರೈತರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ವೆ ನಡೆಸಿ ಮಾಹಿತಿ ನಮೂದಿಸಿ ಎಂದ ಸಚಿವರು, ಇ.ಕೆ ವೈ.ಸಿ ಶೇ 100 ರಷ್ಟು ಗುರಿಸಾಧನೆಯಾಗಬೇಕು ಎಂದು ಅವರು ನಿರ್ದೇಶನ ನೀಡಿದರು. ಕೋಲಾರ ಶ್ರಮಜೀವಿಗಳ ಜಿಲ್ಲೆ ಸಕಾಲದಲ್ಲಿ ಬಿತ್ತನೆ ಬೀಜ ರಸಗೊಬ್ಬರ ನೀಡಿ , ವಿಶ್ವ ವಿದ್ಯಾನಿಲಯದ ಜೊತೆಗೂಡಿ ಟೊಮೆಟೊ ಬೆಳೆ ಕಿಟ ಬಾಧೆ ನಿಬಾಯಿಸಲು ನೆರವು ,ಮಾರ್ಗದರ್ಶನ ನೀಡಿ ಎಂದು ಅವರು ಒಂದು ಹೇಳಿದರು. ಜಿಲ್ಲೆಯ ಸಮಗ್ರ ಕೃಷಿ ಅಳವಡಿಕೆ ಅಭಿನಂದನೀಯ ಇದನ್ನು ಇನ್ನಷ್ಟು ಉತ್ತಮಪಡಿಸಿ ಎಂದು ಸಚಿವರು ತಿಳಿಸಿದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೃಷಿ ಭಾಗ್ಯ ಯೋಜನೆ ಪುನಾರಂಭ ಮಾಡಲಾಗಿದೆ.
ಮುಂದಿನ ವರ್ಷ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಜಾರಿಗೊಳಿಸಲಾಗುವುದು ಎಂದರು. ಬ್ಯಾಂಕ್ ಗಳು ಸರ್ಕಾರದಿಂದ ರೈತರ ಖಾತೆಗೆ ಹಾಕಲಾಗುವ ಸಬ್ಸಿಡಿ ಹಾಗೂ ನೆರವಿನ ಅನುಧಾನವನ್ನು ಸಾಲಕ್ಕೆ ಕಡಿತ ಮಾಡದಂತೆ ಜಿಲ್ಲಾಧಿಕಾರಿ,ಜಿಲ್ಲಾ ಪಂಚಾಯತ್ ಸಿ.ಇ.ಒ .ಲೀಡ್ ಬ್ಯಾಂಕ್ ವ್ಯವಸ್ಥಾಪಕರು ನಿರ್ದೇಶನ ನೀಡಬೇಕು ಎಂದು ಸಚಿವರು ಸೂಚಿಸಿದರು.
ಯಂತ್ರಧಾರೆ ಯೋಜನೆ ಮುಂದುವರೆಸುವ ಜೊತೆಗೆ ಬೃಹತ್ ಕಟಾವು ಯಂತ್ರ ಗಳ ಹಬ್ ಸ್ಥಾಪನೆಗೆ ಸರ್ಕಾರ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸುತ್ತಿದೆ ಎಂದು ಎನ್ ಚಲುವರಾಯಸ್ವಾಮಿ ತಿಳಿಸಿದರು. ಜಿಲ್ಲಾಡಳಿತದಿಂದ ನಂದಿನಿ,ಹಾಪ್ ಕಾಮ್ಸ್ ಗಳಂತೆ ಕೃಷಿ ಉತ್ಪಾದಕ ಸಂಸ್ಥೆ ಗಳ ಉತ್ಪನ್ನಗಳ ಮಾರಾಟಕ್ಕೆ ಜಾಗ ಗುರುತಿಸಿ ನೀಡುವಂತೆ ಸಚಿವರು ಸಲಹೆ ನೀಡಿದರು. ಶಾಸಕರಾದ ಕೊತ್ತೂರು ಮಂಜುನಾಥ್ಕೃ ಷಿ ಇಲಾಖೆ ಆಯುಕ್ತರಾದ ವೈ ಎಸ್ . ಪಾಟೀಲ್, ಜಿಲ್ಲಾ ಪಂಚಾಯತ್ ಸಿಂಗ್.ಇ.ಒ ಪದ್ಮಾ, ಕೃಷಿ ಇಲಾಖೆ ಆಯುಕ್ತರಾದ ಡಾ ಪುತ್ರ,ಜಲಾನಯನ ಇಲಾಖೆ ಆಯುಕ್ತರಾದ ಶ್ರೀನಿವಾಸ್, ಕೃಷಿ ಇಲಾಖೆ ಅಪರ ನಿರ್ದೇಶಕರಾದ ರೆಡ್ಡಿ ಮತ್ತಿತರರು ಹಾಜರಿದ್ದರು.