![](https://pratidhvani.com/wp-content/uploads/2024/05/parameshwara-g.jpg)
ಮೇ 30 ರಂದು ಹಾಸನದಲ್ಲಿ(Hassan) ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್(DG Parameshwar) ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಿಎಂ(CM) ಹಾಗೂ ಗೃಹ ಸಚಿವರು(Home Minister) ಹಾಸನ ಸಂತ್ರಸ್ಥೆಯರನ್ನ ಭೇಟಿ ಮಾಡಿ ಸ್ವಾಂತನ ಹೇಳಿಲ್ಲ ಎಂದು ಪ್ರಗತಿಪರ ಸಾಹಿತಿಗಳ ಅಸಮಾಧಾನಗೊಂಡಿರಬಹುದು.
![](https://pratidhvani.com/wp-content/uploads/2024/05/AFP_8RC6T8_1601740868477_1601740888640_1602753232666.webp)
ನಾವು ಅವರಿಗೆ ಎಲ್ಲಾ ರೀತಿ ಸೆಕ್ಯುರಿಟಿ ಕೊಡುತ್ತೇವೆ. ಯಾರಿಗೂ ಸಂತ್ರಸ್ತರಿಗೆ(Victims) ತೊಂದರೆ ಆಗದಂತೆ ರಕ್ಷಣೆ(Protection) ಕೊಡುತ್ತೇವೆ. ನಾನು ಹಾಗೂ ಸಿಎಂ ಈಗಾಗಲೇ ಹೇಳಿದ್ದೇವೆ. ಸಂತ್ರಸ್ಥೆಯರನ್ನ ಯಾರು ಒತ್ತಾಯ ಮಾಡಿ ಬೇರೆ ಬೇರೆ ರೀತಿಯಲ್ಲಿ ನಡೆಸಿಕೊಳ್ಳದಿಲ್ಲ. ಹಾಸನ (Hassan) ಜಿಲ್ಲೆ ಎಸ್ಪಿ(SP) ಹಾಗೂ ಐಜಿಗೆ (IG)ತಿಳಿಸಿದ್ದೇವೆ.
ಯಾರಿಗೂ ಕೂಡ ತೊಂದರೆ ಆಗಬಾರದೆಂದು ಸೂಚನೆ(Notice) ಕೊಟ್ಟಿದ್ದೇವೆ. ಇನ್ನು ಮೇ 30 ರಂದು ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರರು ನಡೆಸುವ ಪ್ರತಿಭಟನೆ(Protest) ಜಾಗೃತಿಗಾಗಿ. ಅದಕ್ಕೆ ಸಹಕಾರ ನೀಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.