ಸ್ಯಾಂಡಲ್ವುಡ್ನ ದೊಡ್ಮನೆಯಲ್ಲಿ ಬಿರುಗಾಳಿ ಶುರುವಾಗಿದೆ. ಯುವ ರಾಜಕುಮಾರ್ ಪರ ವಕೀಲ ಡಿವೋರ್ಸ್ ವಿಚಾರವಾಗಿ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಪತ್ನಿ ಶ್ರೀದೇವಿ ವಿರುದ್ಧ ವಿಚ್ಚೇದನಕ್ಕೆ 54 ಪುಟಗಳ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಕೀಲರು ಸಲ್ಲಿಸಿರುವ ಡಿವೋರ್ಸ್ ಪಿಟಿಷನ್ನಲ್ಲಿ ಏನೇನು ಸೇರಿಸಿದ್ದಾರೆ ಅನ್ನೋದನ್ನು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ.
![](https://pratidhvani.com/wp-content/uploads/2024/06/WhatsApp-Image-2024-06-11-at-1.40.58-AM-1-621x1024.jpeg)
ನಟ ಯುವ ಪರ ವಕೀಲ ಸಿರಿಲ್ ಪ್ರಸಾದ್ ಪಯಾಸ್ ಮಾತನಾಡಿ, ಪತ್ನಿ ಶ್ರೀದೇವಿ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದಾರೆ. ರಾಜ್ ಕುಟುಂಬದಲ್ಲಿ ಪಾರ್ವತಮ್ಮ ಸ್ಥಾನದ ಮೇಲೆ ಕಣ್ಣಿದ್ರಂತೆ ಯುವ ಪತ್ನಿ ಶ್ರೀದೇವಿ. ಇಡೀ ಕುಟುಂಬದ ವ್ಯವಹಾರ ಹಾಗೂ ಎಲ್ಲದರ ಮೇಲೂ ಕಂಟ್ರೋಲ್ ಮಾಡೋಕೆ ಯತ್ನಿಸಿದ್ರಂತೆ. ರಾಜ್ ಕುಮಾರ್ ಕುಟುಂಬದ ಬ್ಯುಸಿನೆಸ್ ಮೇಲೂ ಯುವ ಪತ್ನಿ ಶ್ರೀದೇವಿ ಕಣ್ಣು ಹಾಕಿದ್ರಂತೆ. ರಾಜ್ ಕುಮಾರ್ ಫಿಲ್ಮ್ ಅಕಾಡೆಮಿಯಿಂದ ಕೋಟಿ ಕೋಟಿ ಹಣ ವರ್ಗಾಯಿಸಿಕೊಂಡಿರುವ ಆರೋಪ ಮಾಡಿದ್ದಾರೆ. ಬರೋಬ್ಬರಿ 4.5 ಕೋಟಿ ಹಣ ತನ್ನ ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದಾರೆ ಎಂದು ದೂರಿದ್ದಾರೆ.
![](https://pratidhvani.com/wp-content/uploads/2024/06/WhatsApp-Image-2024-06-11-at-1.40.58-AM.jpeg)
ಡಾ. ರಾಜ್ ಕುಮಾರ್ ಫಿಲ್ಮ್ ಅಕಾಡೆಮಿ ನೋಡಿಕೊಳ್ತಿದ್ದ ಶ್ರೀದೇವಿ, ಆಕೆಯ ಅಕೌಂಟ್ಗೆ 3 ಕೋಟಿಗೂ ಅಧಿಕ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಮೈಸೂರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಬೆಂಗಳೂರಲ್ಲಿ ಸುಮಾರು 20ಕ್ಕೂ ಹೆಚ್ಚು ಸೈಟ್ ಖರೀದಿ ಮಾಡಿದ್ದಾರೆ ಎಂದು ಯುವ ಪರ ವಕೀಲರು ಆರೋಪಿಸಿದ್ದಾರೆ. ಡಾ ರಾಜ ಕುಮಾರ್ Raj Kumar ಕುಟುಂಬದ ಹೆಸರು ಕೆಡಿಸ್ತೀನಿ ಅಂತ ಯುವನಿಗೆ ಸಂದೇಶ ಕಳುಹಿಸಿದ್ದಾರೆ ಶ್ರೀದೇವಿ ಎಂದು ಆರೋಪಿಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಶ್ರೀದೇವಿ ಯುಎಸ್ಗೆ ತೆರಳಿದ್ದಾರೆ. ಕಳೆದೊಂದು ವರ್ಷದಿಂದ ಯುವ ಹಾಗೂ ಶ್ರೀದೇವಿ ಸಂಬಂಧ ಹಾಳಾಗಿದ್ದು, ಹಲವು ಬಾರಿ ಕುಟುಂಬದ ಹೆಸರು ಕೆಡಿಸುವ ಬೆದರಿಕೆ ಹಾಕಿದ್ದಾರೆ ಅಂತಾನು ತಿಳಿಸಿದ್ದಾರೆ.
![](https://pratidhvani.com/wp-content/uploads/2024/06/pro-2-2.webp)
ಅಕಾಡೆಮಿಯ ಪ್ರಾಪರ್ಟಿಯನ್ನು ಶ್ರೀದೇವಿ ತನ್ನ ತಂಗಿಯ ಹೆಸರಿಗೆ ಮಾರ್ಟ್ಗೇಜ್ ಮಾಡಿ ಲೋನ್ ತೆಗೆದುಕೊಂಡಿದ್ದಾರೆ. ರಾಜ್ ಕುಮಾರ್ ಲರ್ನಿಂಗ್ ಆ್ಯಪ್ನಿಂದಲೂ ಗೌಪ್ಯವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದಿದ್ದಾರೆ. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಲು ಎಜುಕೇಶನ್ ಲೋನ್ ಕೂಡ ನಟ ಯುವನೇ ಕೊಡಿಸಿದ್ದಾರೆ. 2016ರಲ್ಲಿ ಶ್ರೀದೇವಿಯನ್ನು ಭೇಟಿಯಾಗಿದ್ದ ಯುವ ರಾಜ್ ಕುಮಾರ್, 2018ರಲ್ಲಿ ಮನೆಯವರ ವಿರೋಧದ ನಡುವೆಯೂ ಶ್ರೀದೇವಿಯನ್ನು ವರಿಸಿದ್ದ. ಯುವನ ಮನೆಯವರು ಆಕೆಯನ್ನು ಮದುವೆಯಾಗದಂತೆ ಮನವಿ ಮಾಡಿದ್ದರು. ಕುಟುಂಬದ ಮಾತು ಕೇಳದೆ ಆಕೆಯನ್ನು ಮದುವೆ ಆಗಿದ್ದ. ಮದುವೆ ಆದ ಮೇಲೆ ಯುಎಸ್ನಲ್ಲಿ ಸೆಟ್ಲ್ ಆಗೋಕೆ ಟಾರ್ಚರ್ ಮಾಡ್ತಿದ್ರು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
![](https://pratidhvani.com/wp-content/uploads/2024/06/Yuva-Rajkumar-4.webp)
ವಕೀಲರ ಆರೋಪದ ಬಗ್ಗೆ ತಿರುಗೇಟು ನೀಡಿರುವ ಶ್ರೀದೇವಿ, ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ ಎಂದಿದ್ದಾರೆ. ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ, ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು, ಮೌನವಾಗಿದ್ದೆ. ಆದರೆ ನನ್ನ ಸಭ್ಯತೆ ಹಾಗೂ ಮಾನವೀಯತೆಯನ್ನು ಗೌರವಿಸದೆ, ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರಾದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.
ಕೃಷ್ಣಮಣಿ
![](https://pratidhvani.com/wp-content/uploads/2024/06/Yuva-Rajkumar-2.webp)