ಸ್ಯಾಂಡಲ್ವುಡ್ನಲ್ಲಿನ ಇತ್ತೀಚಿನ ಕೆಲ ಬದಲಾವಣೆಗಳು ಶುಭ ಸೂಚನೆಯನ್ನು ನೀಡಿದ್ದವು ದೂರವಾಗಿದ್ದ ಚಂದನವನದ ಬಹುಕಾಲದ ಸ್ನೇಹಿತರು ಮತ್ತೆ ಒಂದಾಗುವ ಸುಳಿವು ಸಿಕ್ಕಿತ್ತು. ಹರಿದಾಡಿದ ವಿಡಿಯೊ ನೋಡಿದ ಅಭಿಮಾನಿಗಳು ಕಿಚ್ಚ ಸುದೀಪ್ ಮತ್ತು ನಟ ದರ್ಶನ್ ಒಂದಾದರು ಎಂದೇ ಮಾತನಾಡಿಕೊಂಡಿತ್ತು.
ಸೋಷಿಯಲ್ ಮೀಡಿಯಾದಲ್ಲಿಯೂ ಇಬ್ಬರ ಅಭಿಮಾನಿಗಳು ಹಬ್ಬ ಮಾಡಿದ್ದರು ರಾಕ್ಲೈನ್ ವೆಂಕಟೇಶ್, ಸುಮಲತಾ ಸಮ್ಮುಖದಲ್ಲಿ ಇಬ್ಬರ ಸಂಧಾನ ನಡೆಯಲಿದೆ ಎಂಬ ಮಾತ್ರ ಕೇಳಿ ಬಂದಿತ್ತು. ಆದರೆ, ಅದು ಈಗ ಸಾಧ್ಯವಿಲ್ಲ ಎಂದು ದರ್ಶನ್ ಅವರ ಹೊಸ ಟ್ವೀಟ್ ಹೇಳಿದೆ.
ಸೋಮವಾರವಷ್ಟೇ ಜೋಡೆತ್ತಿನ ಫೋಟೋ ಹಂಚಿಕೊಂಡಿದ್ದ ದರ್ಶನ್ ಅಭಿಮಾನಿ ವಲಯಕ್ಕೂ ಕುತೂಹಲ ಮೂಡಿಸಿದ್ದರು. ಕಾಲಾಯ ತಸ್ಯೆ ನಮಃ ಎಂಬ ಕಾವ್ಯನ್ ಸಹ ನೀಡಿದ್ದರು. ಇದೆಲ್ಲವನ್ನು ನೋಡಿದ ಫ್ಯಾನ್ಸ್ ಎಲ್ಲವೂ ಮೊದಲಿನಂತಾಗುತ್ತಿದೆ. ಸ್ಯಾಂಡಲ್ವುಡ್ನ ಜೋಡೆತ್ತುಗಳು ಒಂದಾಗಲಿವೆ ಎಂದೇ ಭಾವಿಸಿತ್ತು. ಆದರೆ, ಇದೀಗ ದರ್ಶನ್ ಅವರ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ಆ ಆಸೆಗೆ ತಣ್ಣೀರೆರಚಿದೆ. ಅಭಿಮಾನಿಗಳ ಹೃದಯವೇ ಒಡೆದಂತಾಗಿದೆ. ಹಾಗಾದರೆ ದರ್ಶನ್ ಹಾಕಿದ ಪೋಸ್ಟ್ ಏನು?
ʼನಾನು ಒಬ್ಬಂಟಿʼ
ಟ್ವಿಟರ್ನಲ್ಲಿ ಹೊಸ ಫೋಟೋದೊಂದಿಗೆ ದರ್ಶನ್ ಎದುರಾಗಿದ್ದಾರೆ. “ಏಕಾಂಗಿಯಾಗಿರಿ, ಸಂತೋಷವಾಗಿರಲು ಸಂತೋಷವಾಗಿರಿ ಏಕಾಂಗಿಯಾಗಿರಲು ನನ್ನ ಸೆಲೆಬ್ರಿಟಿಗಳೊಂದಿಗೆ” ಎಂಬ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ನಾನು ಒಂಟಿ ಎಂಬ ಸುಳಿವು ನೀಡಿದ್ದಾರೆ ದರ್ಶನ್, ದರ್ಶನ್ ಅವರ ಈ ಪೋಸ್ಟ್ ನೋಡಿದ ಇಬ್ಬರ ಅಭಿಮಾನಿಗಳು ಮತ್ತೆ ಮೌನಕ್ಕೆ ಜಾರಿದ್ದಾರೆ. ಇನ್ನೇನು ಎಲ್ಲವೂ ಒಳ್ಳೆಯದಾಗಲಿದೆ. ಇಬ್ಬರೂ ಒಂದಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದಂತೆ, ಅದೆಲ್ಲವೂ ಸುಳ್ಳು ಎಂದು ದರ್ಶನ್ ತಮ್ಮ ಪೋಸ್ಟ್ ಮೂಲಕ ಹೇಳಿದಂತಿದೆ.
ಸುಮಲತಾ ಬರ್ತ್ಡೇಯಲ್ಲಿ ಮುಖಾಮುಖಿ
ಹಿರಿಯ ನಟಿ ಸುಮಲತಾ ತಮ್ಮ ಬರ್ತ್ಡೇ ನಿಮಿತ್ತ ಶನಿವಾರ ರಾತ್ರಿ ಗ್ರಾಂಡ್ ಪಾರ್ಟಿ ಆಯೋಜನೆ ಮಾಡಿದ್ದರು. ಆ ಪಾರ್ಟಿಯಲ್ಲಿ ಸ್ಯಾಂಡಲ್ವುಡ್ನ ಬಹುತೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ವಿಶೇಷ ಏನೆಂದರೆ ಕಳೆದ ಆರು ವರ್ಷಗಳ ಬಳಿಕ ನಟ ದರ್ಶನ್ ಮತ್ತು ಸುದೀಪ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರ ವಿಡಿಯೋಗಳು ವೈರಲ್ ಆಗಿದ್ದವು. ಇಬ್ಬರಿಗೂ ಒಂದೇ ಸ್ಪೂನಿನಿಂದ ಕೇಕ್ ತಿನಿಸಿದರು ಸುಮಲತಾ ಇದೆಲ್ಲವೂ ಅಭಿಮಾನಿಗಳ ಎದೆಯಲ್ಲಿ ಪುಳಕ ಸೃಷ್ಟಿಸಿತ್ತು.
ಸಂಧಾನ ಸಭೆ ನಡೆಯಲಿ ಎಂದು ಬಯಸಿದ್ದರು ಫ್ಯಾನ್ಸ್
ಮಾಧ್ಯಮಗಳ ಜತೆಗಿನ ಎರಡು ವರ್ಷದ ಕಂದಕವನ್ನು ರಾಕ್ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಸಂಧಾನ ಮಾಡಿದ್ದರು. ಅದೇ ರೀತಿಯ ಸಂಧಾನ ಸಭೆ ದರ್ಶನ್ ಮತ್ತು ಸುದೀಪ್ ಅವರ ನಡುವೆಯೂ ನಡೆಯಲಿ ಎಂದು ಫ್ಯಾನ್ಸ್ ಬಯಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಯನ್ನು ಕರೆಸಿ ಇಬ್ಬರ ನಡುವಿನ ಸಮಸ್ಯೆ ಬಗೆಹರಿಸುವಂತೆ ಇಬ್ಬರ ಅಭಿಮಾನಿಗಳು ಒತ್ತಾಯಿಸಿದ್ದರು. ಅಷ್ಟೇ ಅಲ್ಲ ಇದರ ಉಸ್ತುವಾರಿಯನ್ನು ರಾಕ್ಲೈನ್ ವೆಂಕಟೇಶ್ ಅವರೇ ವಹಿಸಿಕೊಳ್ಳಲಿ ಎಂದು ಹೇಳಿದರು.