ನಟ ದರ್ಶನ್ (Actor darshan) ಸೇರಿದಹಾಗೆ ಉಳಿದ ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿರುವ ಪೊಲೀಸ್ ಅಧಿಕಾರಿಗಳು (Police officers), ಸಾಕ್ಷ್ಯಾಧಾರ ಕಲೆಹಾಕಲು ಮುಂದಾಗಿದ್ದಾರೆ. ಇದೀಗ ಟೆಕ್ನಲ್ ಎಸಿಡೆನ್ಸ್ (Technical evidences) ನಲ್ಲಿ ,ಸಿಡಿಆರ್ ನಲ್ಲಿ (CDR) ದರ್ಶನ್ ಪಾತ್ರವಿರೋದು ತನಿಖೆ ವೇಳೆ ಕನ್ಫರ್ಮ್ ಆಗಿದೆ.
![](https://pratidhvani.com/wp-content/uploads/2024/06/1-1-1024x576.jpg)
ಆರ್.ಆರ್.ನಗರದ ಶೆಡ್ ನಲ್ಲಿ ದರ್ಶನ್ ಇದ್ದ ಬಗ್ಗೆ ಈ ಮೂಲಕ ಟೆಕ್ನಿಕಲ್ ಸಾಕ್ಷ್ಯ ಲಭ್ಯವಾದಂತಾಗಿದೆ. ಇದು ನಟ ದರ್ಶನ್ ಪ್ರಕರಣದಲ್ಲಿ ಫಿಟ್ ಆಗಲು ಇನ್ನಷ್ಟು ಪೂರಕವಾದ ಅಂಶ ಎನ್ನಲಾಗಿದೆ.
ರೇಣುಕಾಸ್ವಾಮಿ ಯನ್ನ ಶೆಡ್ ಗೆ ಕರೆತಂದ ಬಳಿಕ ಕರೆ ದರ್ಶನ್ ಗೆ ಕರೆ ಮಾಡಿದ್ದ ಪವನ್ ಹಾಗೂ ರಘು ಮಾಹಿತಿ ನೀಡ್ತಾರೆ. ನಂತರ ದರ್ಶನ್ ಪವಿತ್ರಾಗೌಡರನ್ನ (Pavitra gowda) ಶೆಡ್ ಗೆ ಕರೆತಂದಿದ್ದರು ಎಂದು ಹೇಳಲಾಗ್ತಿದೆ.
ಆ ನಂತರದಲ್ಲಿ ಪವಿತ್ರಾಗೌಡ ಸಮ್ಮುಖದಲ್ಲಿ ರೇಣುಕಾಸ್ವಾಮಿ ಗೆ (Renuka swamy) ದರ್ಶನ್ ಹಾಗೂ ಗ್ಯಾಂಗ್ ನಿಂದ ತೀವ್ರ ಹಲ್ಲೆ ನಡೆಸಲಾಗಿದ್ದು ಆತ ಸಾವನ್ನಪ್ಪಿರುತ್ತಾನೆ. ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ತನಿಖಾಧಿಕಾರಿಗಳಿಗೆ ಈ ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಾಗಿದೆ.