ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿದಂತೆ ಸಾಕ್ಷಿ ಬೆದರಿಕೆ ಪ್ರಕರಣದಲ್ಲಿ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ತನಿಖೆಯಲ್ಲಿ ದರ್ಶನ್ ಫ್ಯಾನ್ಸ್ ಹಿಂದೆ ಪ್ರಭಾವಿಗಳು ಇದ್ದಾರೆ ಅನ್ನುವ ಸುದ್ದಿಯೊಂದು ಬಯಲಾಗಿದೆ. ಸದ್ಯ ಅವರಾರು ಅನ್ನುವುದರ ಹಿಂದೆ ಕಾಮಾಕ್ಷಿ ಪೊಲೀಸರು ಬೆನ್ನು ಹತ್ತಿದ್ದಾರೆ.

ಈ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್ನ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಫ್ಯಾನ್ ಆಗಿರುವ ಪುನೀತ್, ವೇಣು ಹಾಗು ಸುಹಾಸ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಹೊಸ ಸುದ್ದಿ ಸಿಕ್ಕಿದೆ. ಆ ಫ್ಯಾನ್ಸ್ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎನ್ನಲಾಗಿದೆ. ಬಾರ್ ಒಂದರ ಮಾಲೀಕ ಮತ್ತು ಸ್ನೇಹಿತನ ಹೆಸರು ಈಗ ಸಾಕ್ಷಿ ಬೆದರಿಕೆ ಪ್ರಕರಣದಲ್ಲಿ ಕೇಳಿಬಂದಿದೆ.

ಅಂದಹಾಗೆ, ಅದು ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ. ಆರೋಪಿ ಪುನೀತ್ ಎಂಬಾತ ಈ ಇಬ್ಬರ ಜೊತೆ ಸಂಪರ್ಕ ಹೊಂದಿದ್ದ ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸಂಜಯ್ ನಗರದ ಬಾರ ವೊಂದರ ಮಾಲೀಕರ ಸ್ನೇಹಿತನಾಗಿರುವ ಗೌರವ್ ಶೆಟ್ಟಿ ಹೆಸರು ಕೇಳಿ ತನಿಖೆ ವೇಳೆ ಹೊರಬಿದ್ದಿದೆ. ಸಂಜಯ್ ನಗರದ ಬಾರ್ ಮಾಲೀಕ ಕೂಡ ಬೆದರಿಕೆಯಲ್ಲಿ ಭಾಗಿಯಾಗಿರಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಾಟ್ಸಾಪ್ ಕರೆ ಮೂಲಕ ಪುನೀತ್ ಜೊತೆ ಸಂಪರ್ಕದಲ್ಲಿದ್ದ ಗೌರವ್ ಹಾಗು ಕಿರಣ್ ರೆಡ್ಡಿ ಹೆಸರು ಈಗ ಈ ಕೇಸ್ನಲ್ಲಿ ಪ್ರಮುಖವಾಗಿದೆ.

ಪುನೀತ್ ಬಂಧನ ಆಗುತ್ತಿದ್ದಂತೆಯೇ, ಗೌರವ್ ಹಾಗು ಕಿರಣ್ ತಲೆಮರೆಸಿಕೊಂಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರೆಸಿರುವ ಕಾಮಾಕ್ಷಿಪಾಳ್ಯ ಪೊಲೀಸರು. ಇಬ್ಬರಿಗೂ ಹುಡುಕಾಟ ನಡೆಸುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಇದೀಗ ತನಿಖೆ ಚುರುಕುಗೊಳಿಸಿದ್ದಾರೆ. ಅಂದಹಾಗೆ, ಸಾಕ್ಷಿಗಳ ಹೇಳಿಕೆ ದಾಖಲು ವೇಳೆ ಸಾಕ್ಷಿಯೊಬ್ಬರು ತನಗೆ ಕೆಲವರು ಬೆದರಿಕೆ ಹಾಕಿದ ಬಗ್ಗೆ ದೂರು ನೀಡಿದ್ದರು. ಸಿಸಿಟಿವಿ ಡಿವಿಆರ್ ಸೀಜ್ ಸಂಬಂಧ ಸಾಕ್ಷಿ ಸಂದೀಪ್ಗೆ ಸುಳ್ಳು ಹೇಳುವಂತೆ ಕೆಲವರು ಬೆದರಿಸಿದ ಆರೋಪ ಕೇಳಿ ಬಂದಿತ್ತು.






