
ಬೆಂಗಳೂರು ಕೆಂಗೇರಿ ಪೊಲೀಸರ ವಿಶೇಷ ಕಾರ್ಯಾಚರಣೆ ಬರೊಬ್ಬರಿ ಒಂದು ವರ್ಷದ ಬಳಿಕ ಆರೋಪಿ ಬಂಧನ..
2022 ರ ಮಹಾಲಕ್ಷ್ಮಿ ಲೇಔಟ್ ಪೊಲೀಸರ ಬ್ರೈನ್ ಮ್ಯಾಪಿಂಗ್ ಪ್ರಕರಣವೇ ಪ್ರೇರಣೆ.. ಬಿಡದಿ ಮೂಲದ ಶಾರದಮ್ಮ ಬಂಧಿತ ಆರೋಪಿ..
ಕಳೆದ ವರ್ಷ ಮನೆ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕೈಚಳಕ ತೋರಿದ್ದ ಶಾರದಮ್ಮ. ನೋಬ್ರೋಕರ್ ನಲ್ಲಿ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಶಶಿಕಾಂತ್ ಎನ್ನುವವರ ಮನೆಯಲ್ಲಿ ಕಳ್ಳತನ.. ಅರ್ಧ ಕೆಜಿ ಗೂ ಅಧಿಕ ಚಿನ್ನಾಭರಣ ಕದ್ದಿದ್ದ ಆರೋಪಿ ಶಾರದಮ್ಮ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಕೆಂಗೇರಿ ಪೊಲೀಸರು. ಸಿಸಿಟಿವಿಯಲ್ಲಿ ಶಾರದಮ್ಮ ಸೆರಗಿನಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಹೋಗಿದ್ದು ಸೆರೆಯಾಗಿತ್ತು ಆದರೆ ಅದನ್ನು ಶಾರದಮ್ಮ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿದ್ದ ಕೆಂಗೇರಿ ಪೊಲೀಸರು. ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಶಾರದಮ್ಮ ತಪ್ಪೊಪ್ಪಿಗೆ ಸದ್ಯ ಮನೆಯಲ್ಲಿ ಬಚ್ಚಿಟ್ಟಿದ್ದ 583 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು.
