ರಾಯಬಾಗ ತಾಲ್ಲೂಕಿನ ಖಣದಾಳ ಗ್ರಾಮದಲ್ಲಿ, ಶ್ರೀ ಹುಲಿಕಾಂತೇಶ್ವರ ದೇವರಿಗೆ ವ್ಯಕ್ತಿಯೊಬ್ಬ ಒಂದು ಆಶ್ಚರ್ಯಕರ ಬೇಡಿಕೆಯನ್ನು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಖಣದಾಳ ಗ್ರಾಮದಲ್ಲಿ ನೆಲೆಸಿರುವ ಶ್ರೀ ಹುಲಿಕಾಂತೇಶ್ವರ (ಜಗದ್ಗುರು ಹುಲಿಕಾಂತೆಶ್ವರ) ದೇವಸ್ಥಾನವು ಪ್ರಸಿದ್ಧವಾಗಿದೆ. ಈ ಕ್ಷೇತ್ರದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಶ್ರೀ ಹುಲಿಕಾಂತೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಗ್ರಾಮದ ದೇವಸ್ಥಾನವು ಸುತ್ತಮುತ್ತಲಿನ ಭಕ್ತರಿಗೆ ಪವಿತ್ರ ಸ್ಥಳವಾಗಿದೆ.

ವ್ಯಕ್ತಿ ದೇವರಿಗೆ “ನಮ್ಮ ಅತ್ತೆ ಸಾಯಲಿ, ದಯವಿಟ್ಟು ನನ್ನ ಕಷ್ಟವನ್ನು ದೂರ ಮಾಡು” ಎಂದು ಬರೆದು ಹುಂಡಿಗೆ ಸಲ್ಲಿಸಿದ್ದಾನೆ. ಹರಿಕೆಯು ದೇವಾಲಯದ ಹುಂಡಿಯಲ್ಲಿ ಸ 100 ರೂ ಮತ್ತು 10 ರೂ ನೋಟುಗಳ ಒಳಗೆ ಬಿಳಿಹಾಳೆಯ ಮೇಲೆ ಬರವಣಿಗೆ ರೂಪದಲ್ಲಿ ಸಿಕ್ಕಿದೆ.

ನಮ್ಮ ಅತ್ತೆ ಮುಂದಿನ ವರ್ಷದ ಜಾತ್ರೆ ಬರುವ ಮುಂಚೆ ಸಾವನ್ನಪ್ಪಬೇಕು ಎಂದು ಸೊಸೆಯೊ ಅಥವಾ ಅಳಿಯನೋ ಚೀಟಿ ಬರೆದು ಹುಂಡಿಯಲ್ಲಿ ಹಾಕಿರುವ ಘಟನೆ ನಡೆದಿದೆ. ಕೇವಲ 3 ದಿನಗಳ ಹಿಂದೆ ಗ್ರಾಮದಲ್ಲಿ ಶ್ರೀ ಹುಲಿಕಾಂತೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆದು ರಥೋತ್ಸವದೊಂದಿಗೆ 5 ದಿನಗಳ ಕಾಲ ನಡೆದ ಜಾತ್ರೆ ಮುಕ್ತಾಯವಾಗಿದೆ.






