
ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಯುದ್ದ ವಿಮಾನಕ್ಕೆ ಹಾನಿಯಾಗಿರೋ ಬಗ್ಗೆ ಸೇನಾ ಮುಖ್ಯಸ್ಥರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಆಪರೇಷನ್ ಸಿಂದೂರ ಆದಾಗ ನಾಗರಿಕರು, ಪ್ರತಿಪಕ್ಷಗಳು ಬೆಂಬಲ ಕೊಟ್ಟಿದ್ದವು. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಬೇಕೆಂದು ಹೇಳಿದ್ದೆವು. ಆದ್ರೆ ಎಕಾಏಕಿ ಕದನ ವಿರಾಮ ಘೋಷಿಸಿದ್ರು. ಅಮೆರಿಕಾ ಮಾತು ಕೇಳಿ ಕದನ ವಿರಾಮ ಘೋಷಿಸಿದ್ರು. ವ್ಯಾಪಾರವನ್ನು ಮುಂದಿಟ್ಟು ಯುದ್ದ ನಿಲ್ಲಿಸಿದ್ದೆವೆ ಎಂದು ಟ್ರಂಪ್ ಹೇಳಿದ್ದಾರೆ. ಸೇನೆಯ ಸಾಮರ್ಥ್ಯವನ್ನು ರಾಜಕೀಯ ಸಲಕರಣೆಯಾಗಿ ಉಪಯೋಗಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಸಿಂಗಾಪುರಕ್ಕೆ ಹೋಗಿ ಅಲ್ಲಿ ಸಿಡಿಎಸ್ ಸ್ವಲ್ಪ ಯುದ್ದ ವಿಮಾನಕ್ಕೆ ಲಾಸ್ ಆಗಿದೆ ಎಂದಿದ್ದಾರೆ. ಎನ್ ಲಾಸ್ ಆಗಿದೆ ಎಂದು ಜನರ ಮುಂದೆ ಹೇಳಬೇಕು. ಕಾರ್ಗಿಲ್ ಆದಾಗ ಜೈಶಂಕರ್ ತಂದೆ ಅಧಿಕಾರಿಯಾಗಿದ್ದರು. ಅವರು ಸಂಪೂರ್ಣ ಮಾಹಿತಿ ನೀಡಿದ್ರು. ಯುದ್ದ ವಿಮಾನಕ್ಕೆ ಹಾನಿ ಆದ್ರೆ ಖರೀದಿ ಮಾಡಬಹುದು. ಸೈನಿಕರಿಗೆ ಏನಾಗಿದೆ ಎಂದು ದೇಶದ ಮುಂದೆ ಹೇಳಬೇಕಲ್ವಾ..? ಎಂದಿರುವ ಪ್ರಿಯಾಂಕ್ ಖರ್ಗೆ, ವಿದೇಶಗಳಿಗೆ ನಿಯೋಗ ಹೋಗಿದ್ಯಲ್ವಾ? ಯಾರನ್ನ ಭೇಟಿ ಮಾಡ್ತಿದ್ದಾರೆ..? ಯಾವ ದೇಶದ ಪ್ರಧಾನಿ, ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ..? ಎಂದು ಪ್ರಶ್ನಿಸಿದ್ದಾರೆ. ನಿಯೋಧ ಕೇವಲ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದಾರಷ್ಟೇ ಎಂದಿದ್ದಾರೆ.

ಭಾರತದ ಸಿಡಿಎಸ್ ಯುದ್ಧ ವಿಮಾನಕ್ಕೆ ಹಾನಿ ಆಗಿದೆ ಅಂದಿದ್ದಾರೆ. ಬಿಜೆಪಿಯ ಅಂಧ ಭಕ್ತರು ಈಗ ಅವರನ್ನು ದೇಶ ವಿರೋಧಿಗಳು ಅಂತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ದ್ವೇಷ ಬಾಷಣಕ್ಕೆ ಕಡಿವಾಣ ಹಾಕುವ ವಿಚಾರವಾಗಿ ಮಾತನಾಡಿ, ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲೇಬೇಕು. ನಾವು ಯುವಕರಿಗೆ ಉದ್ಯೋಗ ನೀಡಬೇಕು ಅಂತಿದ್ದಿವಿ. ಬೆಂಗಳೂರು ಜಿಡಿಪಿಗೆ ಶೇಕಡ 30ರಷ್ಟು ಕೊಡುಗೆ ನೀಡ್ತಿದೆ. ಮಂಗಳೂರು ಶೇಕಡ 5 ರಷ್ಟು ಕೊಡುಗೆ ನೀಡ್ತಿದೆ. ಅಲ್ಲಿನ ಯುವಕರಿಗೆ ಉದ್ಯೋಗ ಸಿಗೋದು ಬೇಡವಾ..? ಕರಾವಳಿ ಹಿಂದುತ್ವದ ಪ್ರಯೋಗಾಲಯ ಆಗಿದೆ. ಇಲ್ಲಿ ಕಾಂಗ್ರೆಸ್ ಪ್ರಚೋದನೆ ಮಾಡ್ತಿಲ್ಲ. ಬಿಜೆಪಿಗರೇ ಸುಳ್ಳು ಸುದ್ದಿ ಹರಡಿ ಪ್ರಚೋದನೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.