
ಮುಂಬಯಿ: ಎನ್ ಸಿಪಿ(ಅಜಿತ್ ಪವರ್) ಬಣದ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಯ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದು, ಗ್ಯಾಂಗ್ ನ ಹಿಟ್ ಲಿಸ್ಟ್ ನಲ್ಲಿ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಕೂಡ ಇದ್ದಾರೆ ಎನ್ನುವುದು ತಿಳಿದುಬಂದಿದೆ.
BIG BREAKING NEWS 🚨 Lawrence Bishnoi can next target a big COMEDIAN for insulting Hindu Gods.
— Times Algebra (@TimesAlgebraIND) October 14, 2024
Any guesses who?
Lawrence Bishnoi has prepared ‘hit-list’ as per Mumbai Police.
Lawrence Bishnoi is extremely angry with that comedian who passes vulgar remarks against Hindu Gods &… pic.twitter.com/XR8SNLug8E
ಗ್ಯಾಂಗ್ನ ಹಿಟ್ಲಿಸ್ಟ್ನಲ್ಲಿದ್ದ ಮುನಾವರ್ ಅವರನ್ನು ಸೆಪ್ಟೆಂಬರ್ನಲ್ಲಿ ದೆಹಲಿಯಲ್ಲಿ ಬೆನ್ನಟ್ಟಲಾಗಿತ್ತು. ಗುಪ್ತಚರ ಇಲಾಖೆಗಳ ಒಳಹರಿವಿನ ಸಹಾಯದಿಂದ ಹಾಸ್ಯನಟನನ್ನು ರಕ್ಷಣೆ ಮಾಡಿ ಮುಂಬೈಗೆ ಸ್ಥಳಾಂತರಿಸಲು ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.
ಕೃಷ್ಣ ಮೃಗ ಬೇಟಿಯಾಡಿದ ಆರೋಪಕ್ಕೆ ಸಂಬಂಧಿಸಿ ಬಹಳ ಹಿಂದಿನಿಂದಲೂ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸೇಡು ಇಟ್ಟುಕೊಂಡು ಬೆನ್ನಟ್ಟುತ್ತಲೇ ಇದೆ. ಸಲ್ಮಾನ್ ಖಾನ್ ಅವರಿಗೂ ಸದ್ಯ ಭದ್ರತೆ ಬಿಗಿಗೊಳಿಸಲಾಗಿದೆ.
ಮುನಾವರ್ ಫಾರುಕಿಯನ್ನು ಗುರಿಯಾಗಿಸಿಕೊಳ್ಳಲು ಪ್ರಮುಖ ಕಾರಣವೇನೆಂದರೆ ಅವರು ತಮ್ಮ ಶೋಗಳಲ್ಲಿ ಹಿಂದೂ ಧರ್ಮ, ದೇವತೆಗಳನ್ನು ಅವಹೇಳನ ಮಾಡಿರುವುದು, ಅಪಹಾಸ್ಯ ಮಾಡಿರುವುದು ಪ್ರಮುಖ ಕಾರಣ ಎಂದು ಹೇಳಲಾಗಿದೆ.