
ಬಲ್ರಾಂಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ತುಳಸಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮದರಸಾದಲ್ಲಿ (In the Madrasa)ಆಗಸ್ಟ್ 1 ರಂದು 2 ನೇ ತರಗತಿ ವಿದ್ಯಾರ್ಥಿಯನ್ನು (student)ಚಾಕುವಿನಿಂದ ಇರಿದು ಕೊಂದಿದ್ದಾನೆ. ಪೊಲೀಸರು ಭಾನುವಾರ ಕೊಲೆ ಪ್ರಕರಣವನ್ನು ಬಹಿರಂಗಪಡಿಸಿ 12 ವರ್ಷ ವಯಸ್ಸಿನ ಒಬ್ಬನನ್ನು ಬಂಧಿಸಿದ್ದಾರೆ.ಈತ ಮದ್ರಸದ ಅಪ್ರಾಪ್ತ ವಿದ್ಯಾರ್ಥಿ ಆಗಿದ್ದು ಹತ್ಯೆಗೆ ಬಳಸಿದ್ದ ಚಾಕುವನ್ನೂ ವಶಪಡಿಸಿಕೊಂಡಿದ್ದಾರೆ.ಉತ್ತರ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಕುಮಾರ್ ಮಾತನಾಡಿ, ಮದರಸಾದಲ್ಲಿ ಓದುತ್ತಿರುವ 2ನೇ ತರಗತಿ ವಿದ್ಯಾರ್ಥಿ ಮಹ್ಫೂಜ್ ಅಯಾನ್ ಆರು ದಿನಗಳ ಹಿಂದೆ ಸಣ್ಣ ವಿಷಯಕ್ಕೆ ಮದ್ರಸದ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಜಗಳವಾಡಿದ್ದನು.

ವಿವಾದದ ಸಂದರ್ಭದಲ್ಲಿ ಅಯಾನ್ ಆರೋಪಿ ವಿದ್ಯಾರ್ಥಿನಿಯನ್ನು ನಿಂದಿಸಿದ್ದಾನೆ. ಶೀಘ್ರದಲ್ಲೇ ಆರೋಪಿ ವಿದ್ಯಾರ್ಥಿಯು ಅಯಾನ್ನನ್ನು ಕೊಲ್ಲುವುದಾಗಿ ನಿರ್ಧರಿಸಿದ ಮತ್ತು ಅವನನ್ನು ಕೊಲ್ಲ್ಲಲು ಯೋಜನೆ ರೂಪಿಸಿದನು. ಕೊಲೆಗೆಂದು ಮಾರ್ಕೆಟ್ ನಿಂದ ಚಾಕುವನ್ನೂ ಖರೀದಿಸಿದ್ದ. ಆಗಸ್ಟ್ 1, 2024 ರಂದು, ಮಹ್ಫೂಜ್ ಅಯಾನ್ ಮತ್ತು ಆರೋಪಿ ಅಪ್ರಾಪ್ತ ವಿದ್ಯಾರ್ಥಿ ಹಾಸ್ಟೆಲ್ ಕೋಣೆಯಲ್ಲಿ ಅಕ್ಕಪಕ್ಕದಲ್ಲಿ ಮಲಗಿದ್ದರು.
ಹಾಸ್ಟೆಲ್ನಲ್ಲಿದ್ದ ಇತರ ವಿದ್ಯಾರ್ಥಿಗಳು ನಿದ್ರೆಗೆ ಜಾರಿದ ನಂತರ ಆರೋಪಿ ವಿದ್ಯಾರ್ಥಿ ಅಯಾನ್ನ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಅವನ ಬಾಯಿ ಮತ್ತು ಕುತ್ತಿಗೆಯನ್ನು ಹಾಸಿಗೆಯ ಮೇಲೆ ದೀರ್ಘಕಾಲ ಒತ್ತಿ ಹಿಡಿದು ಸಾಯಿಸಿದ್ದಾನೆ. ಅಯಾನ್ನ ಸಾವಿನ ನಂತರ, ಆರೋಪಿ ವಿದ್ಯಾರ್ಥಿಯು ಅವನ ದೇಹವನ್ನು ಮುಚ್ಚಿ ಅವನ ಪಕ್ಕದಲ್ಲಿ ಮಲಗಿದ್ದನು.
ಆರೋಪಿ ವಿದ್ಯಾರ್ಥಿಯನ್ನು ವಿಚಾರಣೆಗೊಳಪಡಿಸಿದಾಗ ಪೊಲೀಸರು ತನಿಖೆಯ ವೇಳೆ ಅನುಮಾನಗೊಂಡಿದ್ದು, ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸುವ ಯತ್ನ ನಡೆಸಿದ್ದು, ನಂತರ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉತ್ತರ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ಅಪ್ರಾಪ್ತ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತನ ಮಾಹಿತಿ ಮೇರೆಗೆ ಕೊಲೆಗೆ ಬಳಸಿದ ಚಾಕು ಹಾಗೂ ಘಟನೆ ವೇಳೆ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಹೇಳುವ ಪ್ರಕಾರ, ಮದರಸಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಕೂಡ ರಾತ್ರಿ 2.30ಕ್ಕೆ ಸ್ವಿಚ್ ಆಫ್ ಆಗಿದ್ದು, 8 ಗಂಟೆಗೆ ಸ್ವಿಚ್ ಆನ್ ಆಗಿತ್ತು.