• Home
  • About Us
  • ಕರ್ನಾಟಕ
Friday, June 27, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

2022 – 23ನೇ ಸಾಲಿನ ಬಜೆಟ್‌ಗೆ BBMP ತಯಾರಿ : ಚುನಾವಣೆ ಜೊತೆಯಲ್ಲೇ ಪಾಲಿಕೆಯಿಂದ ಬಜೆಟ್‌ಗೆ ಸಿದ್ಧತೆ

ಕರ್ಣ by ಕರ್ಣ
February 5, 2022
in ಕರ್ನಾಟಕ
0
BBMP Election | 243 ವಾರ್ಡ್‌ ಡ್ರಾಫ್ಟ್‌ ಸಿದ್ಧಪಡಿಸಿದ ಪಾಲಿಕೆ, ಚುನಾವಣೆ ಎದುರಿಸಲು ತುದಿಗಾಲಲ್ಲಿ ನಿಂತ ಪಕ್ಷಗಳು
Share on WhatsAppShare on FacebookShare on Telegram

ಬಿಬಿಎಂಪಿ (Bruhath Bengaluru Mahanagara Palike) ಚುನಾವಣೆ ಶೀಘ್ರವೇ ನಡೆಯುವ ಸಾಧ್ಯತೆ ಇದೆ. ಇದರ ನಡುವೆಯೇ ಬಿಬಿಎಂಪಿ ಪ್ರಸಕ್ತ ಸಾಲಿನ ಬಜೆಟ್‌ (BBMP Budget) ಮಂಡಿಸಲು ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಹೌದು, ಚುನಾವಣೆ ಸಿದ್ಧತೆಯ ಜೊತೆಗೆ ಬಜೆಟ್ ಗೂ ಸಿದ್ಧತೆ ಆರಂಭಿಸಿದೆ ಬಿಬಿಎಂಪಿ. ಈಗ ಎಲ್ಲರ ಗಮನ ಬಿಬಿಎಂಪಿ ಬಜೆಟ್‌ ಮೇಲೆ ನೆಟ್ಟಿದ್ದು, ನಮಗೇನು ಸಿಗಲಿದೆ ಎಂದು ಸಿಲಿಕಾನ್‌ ಸಿಟಿ ಜನರು ಎದುರು ನೋಡುತ್ತಿದ್ದಾರೆ.

ADVERTISEMENT

ಚುನಾವಣೆ ಜೊತೆಗೆ ಬಜೆಟ್‌ಗೂ ಬಿಬಿಎಂಪಿ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ. ಚುನಾವಣೆ ಹಿನ್ನಲೆ ಸರ್ಕಾರದಿಂದ ವಿಶೇಷ ಗಿಫ್ಟ್ ನಿರೀಕ್ಷೆಯಲ್ಲಿ ಬಜೆಟ್ ಗೆ ಸಿದ್ಧತೆ ಮಾಡಲಾಗುತ್ತಿದೆ. ಸದ್ಯ ಪಾಲಿಕೆ ಸಂಪನ್ಮೂಲಕ್ಕೆ ತಕ್ಕಂತೆ ವಾಸ್ತವಿಕ ಬಜೆಟ್ ಗೆ ಮುಂದಾಗಿದೆ.
ಸರ್ಕಾರ ವಿಶೇಷ ನೆರವು ನೀಡಿದ್ದಲ್ಲಿ ಜನಪ್ರಿಯ ಬಜೆಟ್ ಗೂ ಯೋಜನೆ ರೂಪಿಸುತ್ತಿದೆ ಪಾಲಿಕೆ. ಸರ್ಕಾರದಿಂದ ವಿಶೇಷ ಅನುದಾನ ಇಲ್ಲದಿದ್ದರೆ, ಬೆಂಗಳೂರಿಗೆ ಯಾವುದೇ ಹೊಸ ಯೋಜನೆ ಪ್ಲ್ಯಾನ್‌ ಮಾಡದೆ ಇರಲು ಬಿಬಿಎಂಪಿ (BBMP) ನಿರ್ಧರಿಸಿದೆ.

2022 – 23ನೇ ಸಾಲಿನ ಬಿಬಿಎಂಪಿ ಬಜೆಟ್ ಗೆ ಅದಾಯ ಕೊರತೆ

ಈ ಬಾರಿ ದೊಡ್ಡ ಮೊತ್ತದ ಬಜೆಟ್‌ ಮಂಡಿಸದೇ ಇರಲು ಪಾಲಿಕೆ ನಿರ್ಧರಿಸಿದೆ. ಯಾಕೆಂದರೆ ಈ ಬಾರಿಯ ಬಜೆಟ್‌ ಗೆ ಪಾಲಿಕೆ ಆದಾಯದ ಕೊರತೆ ಎದುರಿಸುತ್ತಿದೆ. ಯಾವುದೇ ಹೊಸ ಕಾಮಗಾರಿ ಕೈಗೊಳ್ಳಲು ಅರ್ಥಿಕವಾಗಿ ಪಾಲಿಕೆ ಈ ಬಾರಿ ಸದೃಢವಾಗಿಲ್ಲ. ಕೊರೋನಾ (Corona) ಹಾಗೂ ಇನ್ನಿತರ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಅರ್ಥಿಕ ಸಂಕಷ್ಟ ದಲ್ಲಿದೆ ಬಿಬಿಎಂಪಿ. ಕೇವಲ ಅಸ್ತಿ ತೆರಿಗೆ (Property Tax) ಒಂದೆ ನಂಬಿಕೊಂಡಿರುವ ಮಹಾನಗರ ಪಾಲಿಕೆ, ಅಸ್ತಿ ತೆರಿಗೆಯಿಂದ 2,670 ಕೋಟಿ ಹಾಗೂ ಇತರೆ ಮೂಲಗಳಿಂದ 1 ಸಾವಿರ ಕೋಟಿ ಆದಾಯ ಶೇಖರಿಸಿಕೊಂಡಿದೆ. ಒಟ್ಟು ಪಾಲಿಕೆ ಆದಾಯ 3500 ಕೋಟಿ ಹಾಗೂ ಸರ್ಕಾರದಿಂದ 3500 ಕೋಟಿ ಅನುದಾನ ಸಿಕ್ಕಿದೆ. ಒಟ್ಟಾರೆ ಈ 7 ಸಾವಿರ ಕೋಟಿಯಲ್ಲಿ ಸಿಬ್ಬಂದಿಗಳಿಗೆ ಸಂಬಳ (BBMP Employees Salary) ನೀಡಬೇಕು. ಕಛೇರಿಗಳ ವಿದ್ಯುತ್ ಬಿಲ್ (Electricity Bill), ಪಾರ್ಕ್ ನಿರ್ವಹಣೆ (Park Mainatince) ಸೇರಿದಂತೆ ಇತರೆ ಖರ್ಚುಗಳು ತಿಂಗಳಿಗೆ 300 ಕೋಟಿ ವ್ಯಯವಾಗುತ್ತಿದೆ.

ಬಿಬಿಎಂಪಿಯ ಬಜೆಟ್‌ ತಯಾರಿ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ನಮ್ಮಲ್ಲಿ ಇರುವ ಆದಾಯ ಮೂಲಗಳು ಹಾಗೂ ರಾಜ್ಯ ಸರ್ಕಾರದ ಆದಾಯ ಮೂಲಗಳು ಅಂದಾಜಿನಲ್ಲಿದೆ. ಏನೆಲ್ಲ ಕಾಮಾಗಾರಿಗಳನ್ಮ ಕೈಗೆತ್ತಿಕೊಳ್ಳಬೇಕು, ನಮ್ಮ‌ದಿನನಿತ್ಯ ನಿರ್ವಹಣಾ ವೆಚ್ಚವೇ (Mainatince Charges) ಗೆ ಎಷ್ಟು ತಗುಲುತ್ತದೆ.? ಹಾಗೆ ಹೊಸ ಕಾಮಾಗಾರಿಗಳಿಗೆ (Project Luanching) ಎಷ್ಟು ಹಣ ತಗುಲುತ್ತದೆ ಎನ್ನುವುದನ್ನ ನೋಡಬೇಕಾಗುತ್ತದೆ. ಇದಕ್ಕೆ ಸಂಭಂದಪಟ್ಟಂತೆ ಸಮಗ್ರ ವರದಿ ತಯಾರಿಸಬೇಕಿದೆ. ಹೊಸ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಿಎಂ‌ ಬಳಿ‌ ಚರ್ಚೆ ಮಾಡಲಿದ್ದೇವೆ ಎಂದರು.

ಕಳೆದ ಬಾರಿ 10,295 ಕೋಟಿ ರೂ. ಮೊತ್ತದ ಬಜೆಟ್‌ ಮಂಡನೆ

ಇನ್ನು, ಗುತ್ತಿಗೆದಾರರಿಗೆ (BBMP Contractors) ಸುಮಾರು 2 ಸಾವಿರ ಕೋಟಿ ರೂಪಾಯಿ ಪಾವತಿ ಬಾಕಿ ಇದೆ. ಕಳೆದ ಬಾರಿ 10,295 ಕೋಟಿ ಬಜೆಟ್ ಗೆ ಸರ್ಕಾರ ಅನುಮೋದನೆ ನೀಡಿತ್ತು. ಈ ವರ್ಷ ಪಾಲಿಕೆ ಆದಾಯ ಹೆಚ್ಚಿಸಿ ಕೊಳ್ಳಲು ಬಿಬಿಎಂಪಿ ಕಾಯ್ದೆ-2020 ಅನ್ವಯ ಜಾಹಿರಾತು ನಿಯಮ ಜಾರಿಗೆ ಚಿಂತನೆ ಮಾಡಿದೆ. ಬೀದಿ ಬದಿ ವ್ಯಾಪಾರಿಗಳ ನೊಂದಣಿಯಿಂದಲೂ ಆದಾಯಕ್ಕೆ ಯೋಜನೆಹಾಕಲಾಗಿದೆ. ಪಾಲಿಕೆ ವ್ಯಾಪ್ತಿಯ 500 ಶುದ್ಧ ಕುಡಿಯುವ ನೀರಿನ ಘಟಕಗಳಿಂದ (BBMP Pure Drinking Water Plant) ತಿಂಗಳಿಗೆ ತಲಾ 10 ಸಾವಿರ ರೂ. ಶುಲ್ಕ ಸಂಗ್ರಹಕ್ಕೆ ಪಾಲಿಕೆ ಪ್ಲ್ಯಾನ್‌ ಮಾಡಿಕೊಂಡಿದೆ. ಜೊತೆಗೆ ಕಸದ ಮೇಲೆಯೂ ಕಣ್ಣಿಟ್ಟಿದ್ದು, ಗಾರ್ಬೇಜ್‌ ಬಿಲ್‌ (Garbage Bill) ಅನ್ನೂ ಜಾರಿ ಮಾಡುವ ಯೋಚನೆಯಲ್ಲಿದೆ. ಸದ್ಯ ವಾಸ್ತವಿಕ ಬಜೆಟ್ ಮಂಡಿಸಿ, ಚುನಾವಣೆ ನಂತರ ಜನಪ್ರತಿನಿಧಿಗಳೇ ಪೂರ್ಣ ಬಜೆಟ್ ಮಂಡಿಸಲಿ ಎಂಬ ಚರ್ಚೆಯೂ ಸಾಗಿದೆ.

Tags: BBMPBJPCovid 19ಕರೋನಾಕೋವಿಡ್-19ಬಜೆಟ್‌ಬಿಜೆಪಿ
Previous Post

ಹಿಂದೂ ಮುಸ್ಲಿಂ ಭಾವೈಕ್ಯತೆಯ  ಶ್ರೇಷ್ಠ ಪ್ರವಚಕ ಇಬ್ರಾಹಿಂ ಸುತಾರ್ (76) ಹೃದಯಾಘಾತದಿಂದ ನಿಧನ

Next Post

ಸೇನಾ ಸಮವಸ್ತ್ರ ಧರಿಸಿದ ಪ್ರಧಾನಿ ಮೋದಿಗೆ ಉತ್ತರಪ್ರದೇಶ ಕೋರ್ಟ್ ನೋಟಿಸ್‌ ನೀಡಿದ್ದೇಕೆ?

Related Posts

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
0

ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂಬ ಸಚಿವ ಕೆ‌. ಎನ್. ರಾಜಣ್ಣ (KN Rajanna) ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ (Dcm Dk...

Read moreDetails
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

June 26, 2025
ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲದೆ ಸರ್ಕಾರದ ವಿರುದ್ಧ ಆರೋಪ: ಸಚಿವ ಎನ್.ಎಸ್.ಬೋಸರಾಜು

June 26, 2025
Next Post
ಸೇನಾ ಸಮವಸ್ತ್ರ ಧರಿಸಿದ ಪ್ರಧಾನಿ ಮೋದಿಗೆ ಉತ್ತರಪ್ರದೇಶ ಕೋರ್ಟ್ ನೋಟಿಸ್‌ ನೀಡಿದ್ದೇಕೆ?

ಸೇನಾ ಸಮವಸ್ತ್ರ ಧರಿಸಿದ ಪ್ರಧಾನಿ ಮೋದಿಗೆ ಉತ್ತರಪ್ರದೇಶ ಕೋರ್ಟ್ ನೋಟಿಸ್‌ ನೀಡಿದ್ದೇಕೆ?

Please login to join discussion

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 
Top Story

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

by Chetan
June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 
Top Story

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

by Chetan
June 27, 2025
ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 
Top Story

ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದಲ್ಲಿ 5 ಹುಲಿಗಳ ಕಳೇಬರ ಪತ್ತೆ – ವಿಷ ಹಾಕಿ ಹುಲಿ ಕೊಂದ್ರಾ..?! 

by Chetan
June 27, 2025
ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ
Top Story

ತಲೆಗೆ ಪೆಟ್ಟಾಗುವುದನ್ನು , ಮೆದುಳಿಗೆ ಹಾನಿಯುಂಟಾಗುವುದನ್ನು ತಪ್ಪಿಸುವ ಉದ್ದೇಶ

by ಪ್ರತಿಧ್ವನಿ
June 27, 2025
ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ
Top Story

ಉಕ್ಕು ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ

by ಪ್ರತಿಧ್ವನಿ
June 26, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

ಕಾಂಗ್ರೆಸ್ ಒಳಗೆ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ..?! – ಗೃಹ ಸಚಿವ ಪರಮೇಶ್ವರ್ ಏನಂದ್ರು ..?! 

June 27, 2025
ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

ಕಾಂಗ್ರೆಸ್ ಸರ್ಕಾರ ಗಂಧದ ಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ – ಹುಲಿಗಳ ಸಾವಿಗೆ ಆರ್.ಅಶೋಕ್ ಆಕ್ರೋಶ 

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada