• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಹೋರಾಟಗಳಿಗೆ ಮಸಿ ಬಳಿದ್ರಾ ಅಣ್ಣಾ ಹಜಾರೆ? ಸಂಘ ಪರಿವಾರ ಬಳಸಿಕೊಂಡ ತಾತನ ಸುತ್ತ ಒಂದಿಷ್ಟು ಗುಸುಗುಸು

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 10, 2021
in ದೇಶ, ರಾಜಕೀಯ
0
ಹೋರಾಟಗಳಿಗೆ ಮಸಿ ಬಳಿದ್ರಾ ಅಣ್ಣಾ ಹಜಾರೆ? ಸಂಘ ಪರಿವಾರ ಬಳಸಿಕೊಂಡ ತಾತನ ಸುತ್ತ ಒಂದಿಷ್ಟು ಗುಸುಗುಸು
Share on WhatsAppShare on FacebookShare on Telegram

ಅಣ್ಣಾ ಹಜಾರೆ ಎಂದು ಕರೆಯಲ್ಪಡುವ ಬಾಬುರಾವ್ ಹಜಾರೆ (ಜನನ 15 ಜೂನ್ 1937) ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ ಕೂಡ ಹೌದಂತೆ. ಅವರು ಮಹಾರಾಷ್ಟ್ರದ ರಾಲೇಗಾಂವ್ ಸಿದ್ಧಿ ಎಂಬ ಗ್ರಾಮವನ್ನು ಅಭಿವೃದ್ಧಿಪಡಿಸಿದರು ಎಂದೆಲ್ಲ ಪ್ರಚಾರ ಮಾಡಲಾಗಿದೆ. ಆದರೆ ಅಲ್ಲಿ ಅವಿರೋಧ ಆಯ್ಕೆ ಎಂಬ ವಿದ್ಯಮಾನಕ್ಕೆ ಕಾರಣರಾದ ಈ ಮನುಷ್ಯ ತುಳಿತಕ್ಕೆ ಒಳಗಾದವರ ಹಕ್ಕುಗಳನ್ನೇ ಕಿತ್ತುಕೊಂಡು ಬಿಟ್ಟರು.

ADVERTISEMENT

2011 ರ ಭಾರತೀಯ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು ಎಂದು ಮಾಧ್ಯಮಗಳು ಗೀಚಿ ಬಿಟ್ಟಿವೆ. ಆದರೆ ಆ ಸಂದರ್ಭದಲ್ಲಿ ಅವರು ಬಿಜೆಪಿಯ ಏಜೆಂಟರಾಗಿದ್ದರು.

ಭ್ರಷ್ಟಾಚಾರ ಎಂದರೆ ಕೇವಲ ಹಣದ ವಹಿವಾಟು ಎಂದು ನಂಬಿರುವ ಮಧ್ಯಮ ಮಾತ್ತು ಮೇಲ್‌ ಮಧ್ಯಮ ವರ್ಗದ ಜನರೆಲ್ಲ ಈ ಹೋರಾಟಕ್ಕೆ ಸಾಥ್‌ ನೀಡಿದರು. ಅರವಿಂದ್‌ ಕೇಜ್ರಿವಾಲ್‌ ಟೀಮ್‌ ಇದರ ಲಾಭ ಪಡೆದು ದೆಹಲಿಯಲ್ಲಿ ಅಧಿಕಾರ ಪಡೆಯಿತು. ಆದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಈ ಅಣ್ಣಾ ಹಜಾರೆ ಎಂಬ ಬಿಜೆಪಿಯ ಎಜೆಂಟ್‌ ನೆರವು ನೀಡಿದ್ದರು. ಅಣ್ಣಾಗೆ ಬೆಂಬಲ ನೀಡಿದ್ದ ಮಧ್ಯಮ ಮತ್ತು ಮೇಲ್‌ ಮಧ್ಯಮ ವರ್ಗದ ಯುವ ಸಮುದಾಯ ಆಗಲೇ ಬಿಜೆಪಿಯ ಅಂಧ ಭಕ್ತರಾಗಿದ್ದರು. ಇದಕ್ಕೆ ಬಿಜೆಪಿಯ ಐಟಿ ಸೆಲ್‌ ತುಪ್ಪ ಸುರಿಯುತ್ತ ಬಂದಿತು.

ಈಗೆಲ್ಲಿ ಈ ಅಣ್ಣಾ ಹಜಾರೆ ಎಂಬ ವೇಷಧಾರಿ ಹೋರಾಟಗಾರ?

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಳಿ ಒಮ್ಮೆಯೂ ಸುಳಿಯದ ಈ ಮಹಾಶಯ. ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು, ಆದರೆ ಬಿಜೆಪಿ ಕಣ್ಸನ್ನೆ ಮಾಡಿದ ಕೂಡಲೇ ಪುಣೆಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್‌ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೋದಿ ಸರ್ಕಾರ ತರುತ್ತಿರುವ ಮೂರು ಕೃಷಿ ಕಾಯ್ದೆಗಳು ರೈತರ ಪರ ಇವೆ ಎಂದು ಬೊಂಬಡಾ ಹೊಡೆದರು.

ಈ ಯಪ್ಪ  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣವನ್ನು ಪಡೆದವ್ರೆ.

ಏಪ್ರಿಲ್ 2011 ರಲ್ಲಿ, ಭ್ರಷ್ಟಾಚಾರದ ಮೇಲಿನ ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ನಂತರ ಸರ್ಕಾರ ಅವರ ಬೇಡಿಕೆಗಳನ್ನು ಒಪ್ಪಿಕೊಂಡಿತು ಮತ್ತು ಅವರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು.

ಆದರೆ, ಈಗಲೂ ಜನ್‌ ಲೋಕ್‌ಪಾಲ್‌ ಮಸೂದೆ ಜಾರಿಗೆ ಬಂದಿಲ್ಲ. ಅಣ್ಣಾ ಈ ಬಗ್ಗೆ ಮಾತೇ ಆಡ್ತಿಲ್ಲ!

ಕೇಜ್ರಿವಾಲ್‌ ಮತ್ತು ಇತರರು ಹೋರಾಡಿ ಜಾರಿಗೆ ತಂದಿರಿಸಿದ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅನ್ನೇ ಮೋದಿ ಸರ್ಕಾರ ದುರ್ಬಲಗೊಳಿಸಿದೆ.

ಭ್ರಷ್ಟಾಚಾರ ಎಂದರೆ ಟೇಬಲ್‌ ಕೆಳಗೆ ಪಡೆಯುವ ರೊಕ್ಕದ ವ್ಯವಹಾರ ಮಾತ್ರವಲ್ಲ, ರಫೇಲ್‌ಗಳ ಖರೀದಿಯಲ್ಲಿ ನಡೆಯುವ ಕಿಕ್‌ಬ್ಯಾಕ್‌ ದಂಧೆಯಷ್ಟೇ ಅಲ್ಲ, ತೈಲ ಹಗರಣ, 3-ಜಿ, 4-ಜಿ ಹಗರಣಗಳಷ್ಟೇ ಅಲ್ಲ ಎಂಬ ಸತ್ಯ ಈ ಅಣ್ಣಾ ಸಾಹೇಬರಿಗೆ ಗೊತ್ತೇ ಇಲ್ಲವೇ?  ಈ ದೇಶದ ಜನರನ್ನು ಜಾತಿ-ಧರ್ಮದ ಆಧಾರದಲ್ಲಿ ಒಡೆದು ಹಾಕುವುದು ಮಹಾನ್‌ ಪಾಪ ಮತ್ತು ಘೋರ ಭ್ರಷ್ಟಾಚಾರ ಎಂಬುದು ಈ ಜನರಿಗೆ ಗೊತ್ತೇ ಇಲ್ಲವೇ?

ಅವರನ್ನು ಫಾಲೋ ಮಾಡಿದ ಮಧ್ಯಮ ವರ್ಗ ಇವತ್ತು ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ  ಏರಿಕೆಯಿಂದ ತತ್ತರಿಸುತ್ತಿದೆ. ಆದರೆ ಈ ಮೂರ್ಖರು ಹುಂಬತನದಲ್ಲಿ ಮತ್ತೆ ಮೋದಿ ಅನ್ನುತ್ತಿದ್ದಾರೆ.

ಯುವ ಜನಾಂಗವೊಂದು ಖಾದಿ ಟೊಪ್ಪಿಗೆಯ ಮುದುಕನ ಬೆಂಬಲಕ್ಕೆ ನಿಂತಿದ್ದರ ಹಿಂದೆ ಬಿಜೆಪಿ ಅಥವಾ ಸಂಘ ಪರಿವಾರದ ಅಜೆಂಡಾ ಇತ್ತು ಅಲ್ಲವೇ?

ಈ ದೇಶದಲ್ಲಿ ರಾಮದೇವ್‌ ಎಂಬ ಕೊಳಕ ಸನ್ಯಾಸಿಯೂ ಹಿಂದೂತ್ವ ಎಂಬ ಅಮಲನ್ನು ಪ್ರಚಾರ ಮಾಡುತ್ತಾನೆ, ಅಣ್ಣಾ ಹಜಾರೆಯಂತಹ ಗೋಸುಂಬೆಗಳು ಹಿಂದೂತ್ವದ ಪರ ನಿಲ್ಲುತ್ತಾರೆ.

ದೆಹಲಿಯ ರೈತ ಹೋರಾಟ , ಮತ್ತು ನಮ್ಮದೇ ರಾಜ್ಯದ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ  ವರ್ಷ ಕಾಲದಿಂದ ನಡೆಯುತ್ತಿರುವ ನೀರಾವರಿ ಹೋರಾಟ, ಗದಗ ಜಿಲ್ಲೆಯ ನರಗುಂದದಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ  ಮಹದಾಯಿ ಹೋರಾಟಗಳು ಪ್ರಾಮಾಣಿಕತೆ ಉಳಿಸಿಕೊಂಡು ಹೋರಾಟಗಳಿಗೆ ಘನತೆ ತಂದಿವೆ.

ಆದರೆ, ಅಣ್ಣಾ ಎಲ್ಲೂ ಕಾಣುತ್ತಿಲ್ಲ. ಹೋರಾಟಗಳಿಗೇ ಮಸಿ ಬಳಿದ ಈ ಮಹಾಶಯ ಈಗ ಎಲ್ಲ ಮುಚ್ಚಿಕೊಂಡು ತೆಪ್ಪಗಿದ್ದಾರೆ.  ಅದು ನಮ್ಮ ಪುಣ್ಯ!

Tags: BJP Agent Anna Hajar Tesses In To Fight Around The Grandfather Used By The Sangh Parivar
Previous Post

ಉತ್ತರಪ್ರದೇಶದಲ್ಲಿ ಈಗ ಕೆಂಪು ಟೊಪ್ಪಿ V/s ಕೇಸರಿ ಶಾಲು ಕದನವೇ?

Next Post

ರಾಘವೇಶ್ವರ ಪ್ರಕರಣ : ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿರುದ್ಧವೂ ಅಪಹರಣದ ಆರೋಪ!

Related Posts

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
0

"ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. (Deputy Chief...

Read moreDetails

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

November 18, 2025

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

November 18, 2025

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 18, 2025
Next Post
ರಾಘವೇಶ್ವರ ಪ್ರಕರಣ : ಹೆಚ್ಚುವರಿ  ಅಡ್ವೊಕೇಟ್ ಜನರಲ್ ವಿರುದ್ಧವೂ ಅಪಹರಣದ ಆರೋಪ!

ರಾಘವೇಶ್ವರ ಪ್ರಕರಣ : ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿರುದ್ಧವೂ ಅಪಹರಣದ ಆರೋಪ!

Please login to join discussion

Recent News

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
Top Story

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
November 18, 2025
Top Story

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

by ಪ್ರತಿಧ್ವನಿ
November 18, 2025
Top Story

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

by ಪ್ರತಿಧ್ವನಿ
November 18, 2025
Top Story

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
November 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada