ಮಹಾರಾಷ್ಟ್ರದಲ್ಲಿ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಭೀಕರ ಎನ್ ಕೌಂಟರ್ ನಡೆದಿದ್ದು, ಈ ಘಟನೆಯಲ್ಲಿ ಕನಿಷ್ಠ ಇಪ್ಪತ್ತಾರು (26) ಮಂದಿ ನಕ್ಸಲರು ಪೊಲೀಸರು ಹತ್ಯೆಗೈದಿದ್ದಾರೆ.
ಗಡ್ಚಿರೋಲಿ ಜಿಲ್ಲೆಯ ಗ್ಯಾರಪಟ್ಟಿಯ ಕಾಡುಗಳಲ್ಲಿ ಇಂದು ಮಹಾರಾಷ್ಟ್ರ ಪೊಲೀಸರ ಸಿ-60 ಘಟಕದೊಂದಿಗೆ ನಡೆದ ಎನ್ ಕೌಂಟರ್ʼನಲ್ಲಿ 26 ನಕ್ಸಲೀಯರನ್ನ ನಿರ್ಮೂಲನೆ ಮಾಡಲಾಗಿದೆ.
ದಟ್ಟ ಅಡವಿಗೆ ಸಿ-60 ಪೊಲೀಸ್ ಕಮಾಂಡೋ ಪಡೆಯ ಹೋಗಿ ಸತತ 24 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿದ್ದಾರೆ. ಕಮಾಂಡೋಗಳ ಬುಲೆಟ್ಗಳಿಗೆ ನಕ್ಸಲ್ಗಳ ಎದೆ ಸೀಳಿದ್ದು ಇದರಿಂದ ಬರೋಬ್ಬರಿ 26 ನಕ್ಸಲರು ನೆಲಕ್ಕುರುಳಿದ್ದಾರೆ.
ಹೆಚ್ಚುವರಿ ಎಸ್ ಪಿ ಸೌಮ್ಯ ಮುಂಡೆ ನೇತೃತ್ವದಲ್ಲಿ, ಸಿ-60 ಪೊಲೀಸ್ ಕಮಾಂಡೋ ಪಡೆ, ಮರ್ಡಿಂಟೋಲಾ ಅರಣ್ಯ ಪ್ರದೇಶದ ಕೊರ್ಚಿಯಲ್ಲಿ ಕೂಂಬಿಂಗ್ ನಡೆಸ್ತಿತ್ತು. ಈ ವೇಳೆ ಕಮಾಂಡೋ ಪಡೆಗೆ ಎದುರಾದ 26 ನಕ್ಸಲರ ಶಸ್ತ್ರಸಜ್ಜಿತ ತಂಡದಲ್ಲಿ ನಕ್ಸಲ್ ನಾಯಕ ಮಿಲನ್ ದೀಪಕ್ ತೇಲ್ತುಂಡೆ ಕೂಡ ಇದ್ದ. ತಕ್ಷಣ ಅಲರ್ಟ್ ಆದ ಕಮಾಂಡೋಸ್ ನಕ್ಸಲರನ್ನ ಸುತ್ತುವರಿದ ಗುಂಡಿನ ಮಳೆಗರೆಯಿತು. 24 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ 26 ನಕ್ಸಲರನ್ನ ಹೊಡೆದುರುಳಿಸಿದ ಸಿ-60 ಪೊಲೀಸ್ ಕಮಾಂಡೋ ಮೇಲುಗೈ ಸಾಧಿಸಿದೆ.
ಈ ಎನ್ಕೌಂಟರ್ನಲ್ಲಿ ಭೀಮಾ ಕೋರೆಗಾಂವ್ ಆರೋಪಿ ಮಿಲಿಂದ್ ತೇಲ್ತುಂಬ್ಡೆ ಕೂಡ ಎನ್ಕೌಂಟ್ ಆಗಿದ್ದಾನೆ. ಭೀಮಾ ಕೋರೆಗಾಂವ್ ಹಿಂಸಾಚಾರ ಕೇಸ್ನಲ್ಲಿ ಈತ ಪ್ರಮುಖ ಆರೋಪಿ ಆಗಿದ್ದ. ಈತನ ಎನ್ಕೌಂಟರ್ಗೆ 50 ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು.
ಈ ಕಾರ್ಯಚರಣೆ ವೇಳೆ ನಾಲ್ವರು ಪೋಲಿಸರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.