ತಾಲಿಬಾನ್ ಉಗ್ರ ಸಂಘಟನೆಯಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡು ದೇಶಗಳು ವಿಚಲಿತವಾದಂತೆ ಕಾಣುತ್ತಿವೆ. ತಾಲಿಬಾನ್ ಏನಾದರು ಭಾರತದತ್ತ ಸಾಗಿದರೆ ನಾವು ವೈಮಾನಿಕ ದಾಳಿ ನಡೆಸಲು ಸಿದ್ದವಾಗಿದ್ದೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ ತಮ್ಮ ವಿರೋಧಿಗಳ ವಿರುದ್ದ ತೀವ್ರ ವಾಗ್ದಾಳಿಯನ್ನ ನಡೆಸಿದ್ದಾರೆ.
ಇಂದು ಭಾರತ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶವು ಸದೃಡವಾಗಿದೆ ಯಾವ ದೇಶವು ಸಹ ಭಾರತದ ಮೇಲೆ ಕಣ್ಣೆತ್ತಿ ನೋಡುವ ಧೈರ್ಯವನ್ನು ಮಾಡುತ್ತಿಲ್ಲ.
ಉತ್ತರ ಪ್ರದೇಶ ರಾಜ್ಯ ಬಿಎಸ್ಪಿ ಘಟಕದ ಅಧ್ಯಕ್ಷ ಓಂ ಪ್ರಕಾಶ್ ರಾಜ್ಭರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಯೋಗಿ ಆದಿತ್ರನಾಥ . ರಾಜ್ಭರ್ ಅವರ ಚಿಂತನೆಯ ಪ್ರಕ್ರಿಯೆ ಅವರ ಕುಟುಂಬದ ಅಭಿವೃದ್ದಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ.
ತಂದೆ ಸಂಸದರಾಗಬೇಕು ಎಂದು ಬಯಸಿದ್ದರೆ ಒಬ್ಬ ಮಗ ಶಾಸಕ, ಇನ್ನೊಬ್ಬ ಮಗ ವಿಧಾನಪರಿಷತ್ ಸದಸ್ಯನಾಗಲು ಬಯಸಿದ್ದರು. ಇಂತಹವರು ಗೊಡ್ಡು ಬೆದರಿಕೆಗಳನ್ನು ಹಾಕುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ರಾಜ್ಭರ್ ಹೆಸರನ್ನು ಉಲ್ಲೇಖಿಸದೆ ಮಾತಡಿದ ಆದಿತ್ಯನಾಥ ʻನನ್ನ ಸಂಪುಟದಲ್ಲಿ ರಾಜ್ಭರ್ ಸಮುದಾಯದ ಇಬ್ಬರು ಸಚಿವರಿದ್ದರು. ಸಂಪುಟ ಸಭೆಯಲ್ಲಿ ಮಹಾರಾಜ ಸುಹೇಲ್ದೇವ್ ಗೌರವಾರ್ಥ ಸ್ಮಾರಕ ನಿರ್ಮಾಣವನ್ನು ಸಚಿವರೊಬ್ಬರು ವಿರೋಧಿಸಿದರು. ಆದರೆ, ರಾಜ್ಭರ್ ಅಲ್ಲಿ ಭವ್ಯವಾದ ಕಟ್ಟಡವನ್ನ ಬಯಸಿದ್ದರು ಎಂದು ಹೇಳಿದ್ದಾರೆ.
“ಇಂದು, ಬಹ್ರೈಚ್ನಲ್ಲಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಬಿಜೆಪಿ ಸರ್ಕಾರವು ಬಹ್ರೈಚ್ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಮಹಾರಾಜ ಸುಹೇಲ್ದೇವ್ ಹೆಸರಿಟ್ಟಿದೆ. ವಿರೋಧ ಪಕ್ಷಗಳು ಮಹಾರಾಜ ಸುಹೇಲ್ದೇವ್ಗಾಗಿ ಏನು ಮಾಡಿದೆ?” ಎಂದು ವಿರೋಧ ಪಕ್ಷಗಳಿಗೆ ಯೋಗಿ ಪ್ರಶ್ನಿಸಿದ್ದಾರೆ.
ಮಹಮ್ಮದ್ ಘೋರಿ ಮತ್ತು ಘಾಜಿಯ ಅನುಯಾಯಿಗಳು ರಾಜ ಸುಹೇಲ್ದೇವ್ರವರವ ಸ್ಮಾರಕವನ್ನ ನಿರ್ಮಿಸಿದರೆ ಜನರು ಮಹಮ್ಮದ್ ಘೋರಿ ಮತ್ತು ಘಾಜಿಯನ್ನು ಮರೆತುಬಿಡುತ್ತಾರೆ. ರಾಜಕೀಯವಾಗಿ ಬ್ಲ್ಯಾಕ್ಮೇಲ್ ಮಾಡುತ್ತಿರುವವರನ್ನು ಜನರು ಮರೆತು ಬಿಡುತ್ತಾರೆ ಅದಕ್ಕಾಗಿಯೇ ಅವರುಗಳು ಸ್ಮಾರಕ ನಿರ್ಮಾಣವನ್ನ ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷ, ಬಿಎಸ್ಪಿ, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಯೋಗಿ, ಅಭಿವೃದ್ದಿಗು ಇವರುಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಶ್ರೀ ರಾಮನ ಭಕ್ತರನ್ನು ಹತ್ಯೆ ಮಾಡಿದವರಿಗೆ ದೇಶದ ಜನರಲ್ಲಿ ಕ್ಷಮೆ ಕೇಳುವ ಧೈರ್ಯವಿದೆಯೇ ಎಂದು ಸಮಾಜವಾದಿ ಪಕ್ಷವನ್ನು ಪ್ರಶ್ನಿಸಿದ್ದಾರೆ.