• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮಾರುಕಟ್ಟೆಯಲ್ಲಿ ನಕಲಿ ಲಸಿಕೆ : ಅಸಲಿ ಲಸಿಕೆ ಪತ್ತೆಹಚ್ಚುವುದು ಹೇಗೆ?

ಕರ್ಣ by ಕರ್ಣ
September 6, 2021
in ಕರ್ನಾಟಕ
0
ಮಾರುಕಟ್ಟೆಯಲ್ಲಿ ನಕಲಿ ಲಸಿಕೆ : ಅಸಲಿ ಲಸಿಕೆ ಪತ್ತೆಹಚ್ಚುವುದು ಹೇಗೆ?
Share on WhatsAppShare on FacebookShare on Telegram

ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ನಕಲಿ ಲಸಿಕೆಗಳು ಮಾರಾಟವಾಗುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯೇ ಇಂಥ ನಕಲಿ ಲಸಿಕೆಗಳನ್ನ ಗುರುತಿಸಿ ಎಚ್ಚರಿಸಿದೆ. ಭಾರತದಲ್ಲೂ ಕೋವಿಶೀಲ್ಡ್ ಲಸಿಕೆ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಇಲ್ಲೂ ನಕಲಿ ಕೋವಿಶೀಲ್ಡ್ ವ್ಯಾಕ್ಸಿನ್ಗಳು ಮಾರಾಟ ಆಗುತ್ತಿರಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈಜ ಲಸಿಕೆ ಯಾವುದು, ನಕಲಿ ಲಸಿಕೆ ಯಾವುದು ಎಂಬುದನ್ನು ಪತ್ತೆಹಚ್ಚಲು ಕೇಂದ್ರ ಆರೋಗ್ಯ ಇಲಾಖೆಯು ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದೆ. ರಾಜ್ಯ ಸರ್ಕಾರಗಳಿಗೆ ಈ ಮಾರ್ಗಸೂಚಿಗಳನ್ನ ಕಳುಹಿಸಿಕೊಡಲಾಗಿದೆ.

ADVERTISEMENT

ಭಾರತದಲ್ಲಿ ಮೂರು ಲಸಿಕೆಗಳನ್ನ ಬಳಸಲು ಸದ್ಯಕ್ಕೆ ಅನುಮತಿ ನೀಡಲಾಗಿದೆ. ಸೀರಂ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೋವಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳನ್ನ ಬಳಸಲಾಗುತ್ತಿದೆ. ಈ ಮೂರು ಲಸಿಕೆಗಳನ್ನ ಗುರುತಿಸಲು ಲೇಬಲ್ ವಿವರ, ಬಣ್ಣ ಇತ್ಯಾದಿ ಅಂಶಗಳನ್ನ ಒಳಗೊಂಡ ಕೆಲ ಅಂಶಗಳನ್ನ ಪಟ್ಟಿ ಮಾಡಲಾಗಿದೆ.

“ಕೋವಿಶೀಲ್ಡ್ನ ಡೂಪ್ಲಿಕೇಟ್ ಲಸಿಕೆಗಳನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ. ಭಾರತ ಸರ್ಕಾರ ಇದನ್ನು ತನಿಖೆ ನಡೆಸುತ್ತಿದೆ. ಹಾಗೊಂದು ವೇಳೆ ನಕಲಿ ವ್ಯಾಕ್ಸಿನ್ ಮಾರಾಟವಾಗುತ್ತಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಕಳೆದ ತಿಂಗಳೇ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದರು.

ಅಸಲಿ ಕೋವಿಶೀಲ್ಡ್ ಲಸಿಕೆ ಪತ್ತೆಹಚ್ಚುವುದು ಹೇಗೆ.? :

• ಲಸಿಕೆ ಬಾಟಲ್ನ ಲೇಬಲ್ನ ಅಂಚಿನಲ್ಲಿ ದಟ್ಟ ಹಸಿರು ಶೇಡ್ ಬಣ್ಣ ಇರುತ್ತದೆ. ಅಲೂಮಿನಿಯಮ್ ಫ್ಲಿಪ್ ಆಫ್ ಸೀಲ್ ಸಂಪೂರ್ಣ ದಟ್ಟ ಹಸಿರು ಬಣ್ಣ ಹೊಂದಿರುತ್ತದೆ.

• ಒರಿಜಿನಲ್ ವ್ಯಾಕ್ಸಿನ್ನಲ್ಲಿ ಕೋವಿಶೀಲ್ಡ್ನ ಟ್ರೇಡ್ಮಾರ್ಕ್ ಸಮೇತ ಬ್ರ್ಯಾಂಡ್ ಹೆಸರು ನಮೂದಾಗಿರುತ್ತದೆ.

• ವಿಶೇಷ ಬಿಳಿ ಶಾಹಿಯಲ್ಲಿ ಅಕ್ಷರಗಳನ್ನ ಮುದ್ರಿಸಲಾಗಿರುತ್ತದೆ. ಜೆನೆರಿಕ್ ಹೆಸರಿನ ಅಕ್ಷರದ ಫಾಂಟ್ ಅನ್ನು ಅನ್-ಬೋಲ್ಡ್ ಮಾಡಲಾಗಿರುತ್ತದೆ.

• ಸೀರಂ ಇನ್ಸ್ಟಿಟ್ಯೂಟ್ನ ಲೋಗೋವನ್ನು ವಿಶೇಷ ಕೋನ ಮತ್ತು ಸ್ಥಾನದಲ್ಲಿ ಮುದ್ರಿಸಲಾಗಿರುತ್ತದೆ. ಇದನ್ನು ತಜ್ಞರು ಗುರುತಿಸಬಲ್ಲರು.

• ಇಡೀ ಲೇಬಲ್ಗೆ ವಿಶೇಷ ಹನಿಕೂಂಬ್ ಎಫೆಕ್ಟ್ ಕೊಡಲಾಗಿರುತ್ತದೆ. ಇದು ಒಂದು ನಿರ್ದಿಷ್ಟ ಕೋನದಿಂದ ಮಾತ್ರ ಕಾಣಿಸುತ್ತದೆ.

ಅಸಲಿ ಕೋವ್ಯಾಕ್ಸಿನ್ ಲಸಿಕೆ ಪತ್ತೆಹಚ್ಚುವುದು ಹೇಗೆ.? :

• ಲೇಬಲ್ ಮೇಲೆ ಯುವಿ ಹೆಲಿಕ್ಸ್ ಇರುತ್ತದೆ. ಇದು ಅಲ್ಟ್ರಾ ವಯಲೆಟ್ (ಅತಿನೇರಳೆ ಬೆಳಕು) ಲೈಟ್ನಿಂದ ಮಾತ್ರ ಗೋಚರಿಸುತ್ತದೆ.

• ಲೇಬಲ್ನಲ್ಲಿ COVAXIN ಹೆಸರಿನ ಅಕ್ಷರಗಳು ಬಹಳ ಸೂಕ್ಷ್ಮವಾಗಿ ಬರೆಯಲ್ಪಟ್ಟಿರುತ್ತವೆ. ಮೇಲ್ನೋಟಕ್ಕೆ ಇವು ಡಾಟ್ಗಳಂತೆ ಕಾಣಿಸುತ್ತವೆ.

• ಕೋವ್ಯಾಕ್ಸಿನ್ ಹೆಸರಿಗೆ ಹೋಲೋಗ್ರಾಫಿಕ್ ಎಫೆಕ್ಟ್ ಕೊಡಲಾಗಿರುತ್ತದೆ.

ಅಸಲಿ ಸ್ಪುಟ್ನಿಕ್ ವಿ ಲಸಿಕೆ ಪತ್ತೆ ಹಚ್ಚುವುದೇಗೆ.? :

• ರಷ್ಯಾದ ಎರಡು ತಯಾರಕರಿಂದ ಪ್ರತ್ಯೇಕವಾಗಿ ಸ್ಪುಟ್ನಿಕ್ ವ್ಯಾಕ್ಸಿನ್ಗಳನ್ನ ತರಿಸಲಾಗುತ್ತಿದೆ. ಹೀಗಾಗಿ ಈ ಲಸಿಕೆ ಎರಡು ಲೇಬಲ್ಗಳಲ್ಲಿ ಲಭ್ಯ ಇರುತ್ತದೆ. ಆದರೆ, ತಯಾರಕರ ಹೆಸರು ಬಿಟ್ಟು ಉಳಿದೆಲ್ಲಾ ವಿವರ ಏಕರೀತಿಯಲ್ಲಿ ಇರುತ್ತದೆ.

• ಐದು ಆಂಪೂಲ್ ಪ್ಯಾಕ್ ಕಾರ್ಟನ್ನ ಹಿಂಬದಿ ಮತ್ತು ಮುಂಬದಿಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಲೇಬಲ್ ಇರುತ್ತದೆ. ಇನ್ನುಳಿದ ಬದಿಗಳಲ್ಲಿ ರಷ್ಯನ್ ಭಾಷೆಯಲ್ಲಿ ಲೇಬಲ್ ಮುದ್ರಿತವಾಗಿರುತ್ತದೆ.

Tags: Covid 19ಕರೋನಾಕೋವಿಡ್-19ಕೋವಿಶೀಲ್ಡ್ಮಾರುಕಟ್ಟೆವಿಶ್ವ ಆರೋಗ್ಯ ಸಂಸ್ಥೆಸೀರಂ ಇನ್ಸ್ಟಿಟ್ಯೂಟ್
Previous Post

ಟ್ರಾಫಿಕ್ ವಿವಾದಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ರಾಜಪುರದಲ್ಲಿ SFI, TMC ಘರ್ಷಣೆ: ಹಲವಾರು ಮಂದಿಗೆ ಗಾಯ

Next Post

ಬೆಲೆ ಏರಿಕೆ ವಿಚಾರದಲ್ಲೂ ಬಿಜೆಪಿ ಪಾಲಿಟಿಕ್ಸ್; ಹೈಕಮಾಂಡ್ ಆದೇಶದಂತೆ ಬಾಯಿಗೆ ಬಂದತೆ ಹೇಳಿಕೆ ನೀಡುತ್ತಿರುವ ಕೇಸರಿ ನಾಯಕರು

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
Next Post
ಬೆಲೆ ಏರಿಕೆ ವಿಚಾರದಲ್ಲೂ ಬಿಜೆಪಿ ಪಾಲಿಟಿಕ್ಸ್; ಹೈಕಮಾಂಡ್ ಆದೇಶದಂತೆ ಬಾಯಿಗೆ ಬಂದತೆ ಹೇಳಿಕೆ ನೀಡುತ್ತಿರುವ ಕೇಸರಿ ನಾಯಕರು

ಬೆಲೆ ಏರಿಕೆ ವಿಚಾರದಲ್ಲೂ ಬಿಜೆಪಿ ಪಾಲಿಟಿಕ್ಸ್; ಹೈಕಮಾಂಡ್ ಆದೇಶದಂತೆ ಬಾಯಿಗೆ ಬಂದತೆ ಹೇಳಿಕೆ ನೀಡುತ್ತಿರುವ ಕೇಸರಿ ನಾಯಕರು

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada