• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ತೋಟ ಕಡಿದ ವನ್ಯಜೀವಿ ವಲಯಾಧಿಕಾರಿ: ಶರಾವತಿ ಕಣಿವೆಯಲ್ಲಿ ಮತ್ತೆ ಸಂಘರ್ಷ!

Any Mind by Any Mind
August 22, 2021
in ಕರ್ನಾಟಕ
0
ತೋಟ ಕಡಿದ ವನ್ಯಜೀವಿ ವಲಯಾಧಿಕಾರಿ: ಶರಾವತಿ ಕಣಿವೆಯಲ್ಲಿ ಮತ್ತೆ ಸಂಘರ್ಷ!
Share on WhatsAppShare on FacebookShare on Telegram

ಮಲೆನಾಡಿನಲ್ಲಿ ಒಂದು ಕಡೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗಳ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳಿಗೆ ಇನ್ನಿಲ್ಲದ ಜನಪರ ಕಾಳಜಿ ಉಕ್ಕಿ ಹರಿಯತೊಡಗಿದೆ. ಮತ್ತೊಂದು ಕಡೆ ಅಭಯಾರಣ್ಯ, ಮೀಸಲು ಅರಣ್ಯದ ಹೆಸರಿನಲ್ಲಿ ಅರಣ್ಯ ಇಲಾಖೆ ಬಡ ರೈತರ ಬದುಕಿನ ಮೇಲೆ ಗರಗಸವಿಡತೊಡಗಿದೆ.

ADVERTISEMENT

ಅದರಲ್ಲೂ ಜನ ವಿರೋಧಿ ಅರಣ್ಯ ಕಾಯ್ದೆಗಳು ಮತ್ತು ತಲೆಮಾರುಗಳು ಮುಳುಗಡೆ ಸಂತ್ರಸ್ತರ ನಡುವಿನ ಸಂಘರ್ಷದ ನೆಲೆಯಾಗಿರುವ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯಲ್ಲಿ ಇದೀಗ ಸಂಘರ್ಷ ತಾರಕಕ್ಕೇರಿದೆ.

ಒಂದು ಕಡೆ ಅರಣ್ಯ ಇಲಾಖೆಯ ಅಭಯಾರಣ್ಯ, ಮೀಸಲು ಅರಣ್ಯ, ಡೀಮ್ಡ್ ಫಾರೆಸ್ಟ್ ಮತ್ತಿತರ ಕಾನೂನುಗಳ ಕಾರಣದಿಂದಾಗಿ ವಿದ್ಯುತ್, ರಸ್ತೆ, ಶಾಲೆ ಮತ್ತು ಮೊಬೈಲ್ ನೆಟ್ವರ್ಕ್ ನಂತಹ ಮೂಲಭೂತ ಸೌಕರ್ಯಗಳಿಂದಲೇ ವಂಚಿತವಾಗಿರುವ ನೂರಾರು ಹಳ್ಳಿಗಳಿರುವ ಶರಾವತಿ ನದಿ ಕಣಿವೆಯಲ್ಲಿ ಇದೀಗ, ‘ನೋ ನೆಟ್ವರ್ಕ್, ನೋ ವೋಟಿಂಗ್’ ಅಭಿಯಾನ ಕಾವೇರಿದೆ. ಮತ್ತೊಂದು ಕಡೆ, ಅದೇ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಅದೇ ಶರಾವತಿ ಕಣಿವೆಯಲ್ಲಿ ನೂರಾರು ವರ್ಷಗಳಿಂದ ಬದುಕು ನಡೆಸುತ್ತಿರುವ ಬಡಪಾಯಿ ರೈತರ ಮೇಲೆ ಪ್ರಹಾರ ಆರಂಭಿಸಿದ್ದಾರೆ.

ತಾಲೂಕು ಕೇಂದ್ರ ಸಾಗರದಿಂದ ಸುಮಾರು 70-80 ಕಿ.ಮೀ ದೂರದಲ್ಲಿರುವ ದಟ್ಟ ಕಾಡಿನ ನಡುವಿನ ಈ ಕುಗ್ರಾಮಗಳಲ್ಲಿ ದಿಢೀರನೇ, ಯಾವುದೇ ತೆರವು ನೋಟೀಸ್ ನೀಡದೆ, ಎಚ್ಚರಿಕೆ ನೀಡದೆ, ಮಾಹಿತಿ ನೀಡದೆ, ಪೊಲೀಸರನ್ನು ಕರೆದುಕೊಂಡು ಒಂಟಿ ಮನೆಗಳ ರೈತರ ಮೇಲೆ ದಾಳಿ ನಡೆಸಲಾಗುತ್ತಿದೆ. ಒಂಟಿ ಮನೆಯ ಸುತ್ತಮುತ್ತ ಒಂದೆರಡು ಎಕರೆ ಜಮೀನು ಸಾಗುವಳಿ ಮಾಡಿಕೊಂಡು ಕನಿಷ್ಟ 60-70 ವರ್ಷಗಳಿಂದ ಬದುಕುತ್ತಿರುವ ಕುಟುಂಬಗಳನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು, ದಾಳಿ ನಡೆಸಿ ಅವರ ಅಡಿಕೆ ತೋಟ, ಬಾಳೆ ತೋಟಗಳನ್ನು ಕಡಿದು ನಾಶ ಮಾಡಲಾಗುತ್ತಿದೆ. ಜೊತೆಗೆ, ಬೆಳೆ ನಾಶ ತಡೆಯಲು ಬಂದ ಅವರ ಮೇಲೆ ಪೊಲೀಸರನ್ನು ಬಿಟ್ಟು ಹೆದರಿಸಲಾಗುತ್ತಿದೆ.

ಕಳೆದ ಹದಿನೈದು ದಿನಗಳಲ್ಲಿ ಭಾನುಕುಳಿ ಪಂಚಾಯ್ತಿ ವ್ಯಾಪ್ತಿಯ ಕಣಪಗಾರು ಮತ್ತು ಆಸುಪಾಸಿನ ಕುಗ್ರಾಮಗಳಲ್ಲೇ ಇಂತಹ ಮೂರ್ನಾಲ್ಕು ಪ್ರಕರಣಗಳು ನಡೆದಿವೆ. ಕಣಪಗಾರು ಹಳ್ಳಿಯ ಬೋಳಪ್ಪ ಮತ್ತು ನಾರಾಯಣಪ್ಪ ಲಚ್ಚಮ್ಮಯ್ಯ ಎಂಬುವರ ಮನೆಗಳ ಮೇಲೆ ನಾಲ್ಕಾರು ದಿನಗಳ ಅಂತರದಲ್ಲಿ ದಾಳಿ ನಡೆಸಿದ ಕಾರ್ಗಲ್ ವನ್ಯಜೀವಿ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆ ರೈತರಿಗೆ ಯಾವುದೇ ನೋಟೀಸ್ ಕೊಡದೆ, ಅವರಿಗೆ ಮಂಜೂರಾದ ಕಂದಾಯ ಜಮೀನಿನಲ್ಲಿ ಬೆಳೆದಿದ್ದ ತಲಾ ನೂರಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಒಂದು, ಎರಡು ಎಕರೆ ಜಮೀನು ಹೊಂದಿರುವ ಈ ಕಡುಬಡವರು, ನಾಲ್ಕೈದು ವರ್ಷಗಳ ಹಿಂದೆ, ತಲೆಮಾರುಗಳಿಂದ ತಮ್ಮ ಸ್ವಾಧೀನದಲ್ಲಿರುವ ಜಮೀನಿನಲ್ಲಿ ಅಡಿಕೆ ನೆಟ್ಟು ಬೆಳೆಸಿದ್ದರು. ಆದರೆ, ಇದೀಗ ಇಲಾಖೆಯವರು ದಿಢೀರನೇ ನುಗ್ಗಿ ತೋಟ ನಾಶ ಮಾಡಿದ್ದಾರೆ. ಜೊತೆಗೆ ಆ ಕೃತ್ಯವನ್ನು ತಡೆಯಲು ಹೋದ ತಮ್ಮ ಮೇಲೆ ಕೇಸು ಹಾಕಿ ಜೈಲಿಗೆ ಕಳಿಸುವ ಬೆದರಿಕೆ ಹಾಕಿದ್ದಾರೆ ಎಂದು ರೈತರು ಗೋಳಿಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಅದೇ ಗ್ರಾಮದ ದೇವೇಂದ್ರ ಎಂಬ ಅಮಾಯಕ ರೈತನ ಜಮೀನಿನ ಮೇಲೆ ಕೂಡ ಹೀಗೆ ದಾಳಿ ಮಾಡಿದ್ದ ವನ್ಯಜೀವಿ ವಲಯದವರು, ರೈತರನ್ನು ಹೆದರಿಸಿ ಬೆದರಿಸಿ, ಅವರು ನೆಟ್ಟಿದ್ದ ಹೊಸ ಅಡಿಕೆ ತೋಟದ ಸಸಿಗಳನ್ನು ಪೂರ್ತಿಯಾಗಿ ಅವರಿಂದಲೇ ಕೀಳಿಸಿ ಹಾಕಿ ಹೋಗಿದ್ದರು. ಜೊತೆಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ನಿಮ್ಮ ಮನೆಮಠ ಎಲ್ಲವನ್ನೂ ಕೆಡವಿ, ಇಲ್ಲಿಂದಲೇ ನಿಮ್ಮನ್ನು ಎತ್ತಂಗಡಿ ಮಾಡುತ್ತೇವೆ ಎಂದು ಬೆದರಿಸಿ ಹೋಗಿದ್ದರು ಎಂದು ರೈತರು ನೋವು ತೋಡಿಕೊಂಡಿದ್ದಾರೆ.

ಕಣಪಗಾರು, ಉರುಳುಗಲ್ಲು, ಚೀಕನಹಳ್ಳಿ, ಸಾಲ್ಕೊಡ್ಲು, ಹೆಬ್ಬಯ್ಯನಕೆರೆ ಸೇರಿದಂತೆ ಕೇವಲ ಭಾನುಕುಳಿ ಪಂಚಾಯ್ತಿ ವ್ಯಾಪ್ತಿಯೊಂದರಲ್ಲೇ ಏಳೆಂಟು ಕುಗ್ರಾಮಗಳಲ್ಲಿ ಬಹುತೇಕ ಶರಾವತಿ ನದಿಯ ಮೊದಲ ಅಣೆಕಟ್ಟು ಹಿರೇಭಾಸ್ಕರದಲ್ಲಿ ಮುಳುಗಡೆಯಾದವರು, ಆ ಬಳಿಕ ಮತ್ತೆ ಎರಡನೇ ಅಣೆಕಟ್ಟು ಲಿಂಗನಮಕ್ಕಿಯಲ್ಲಿ ಮುಳುಗಡೆಯಾಗಿ ಎತ್ತಂಗಡಿಯಾದವರೇ ಹೆಚ್ಚಿದ್ದಾರೆ. ಅವರಿಗೆ ಇಂದಿಗೂ ಬಹುತೇಕ ಒಂದು ಶತಮಾನದಿಂದ ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕು ಸಿಕ್ಕಿಲ್ಲ. ಮನೆ ಕಟ್ಟಲು ಕೂಡ ಇದೀಗ ವನ್ಯಜೀವಿ ವಲಯ ಅಧಿಕಾರಿಗಳು ಬಿಡುತ್ತಿಲ್ಲ. ರಸ್ತೆಯಂತೂ ಇಲ್ಲವೇ ಇಲ್ಲ. ವಿದ್ಯುತ್ ಇಲ್ಲ. ಮೊಬೈಲ್ ನೆಟ್ವರ್ಕ್ ಇಲ್ಲ. ಅಂಗನವಾಡಿ, ಶಾಲೆ ಇಲ್ಲ. ಆಸ್ಪತ್ರೆ ಸೌಲಭ್ಯವಿಲ್ಲ.

ಹೀಗೆ “ಇಂದಿಗೂ ಇತರೆ ಮುಂದುವರಿದ ಗ್ರಾಮಗಳಿಗೆ ಹೋಲಿಸಿದರೆ ಸರಿಸುಮಾರು ಒಂದು ಶತಮಾನ ಕಾಲ ಹಿಂದುಳಿದ ಸ್ಥಿತಿಯಲ್ಲೇ ಅಂಗೈ ಅಗಲದ ಜಾಗದಲ್ಲಿ ಭತ್ತ, ಅಡಿಕೆ ಬೆಳೆದುಕೊಂಡು ಬದುಕು ಸಾಗಿಸುತ್ತಿರುವ, ನಾಡಿಗೆ ಬೆಳಕು ಕೊಡಲು ಬದುಕು ತ್ಯಾಗ ಮಾಡಿದ ಆ ಅಮಾಯಕರ ಮೇಲೆ ನಿರಂತರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಅಲ್ಲಿನ ಜನರಿಗೆ ಯಾವುದೇ ಮೂಲಸೌಕರ್ಯ ಸಿಗದಂತೆ ಅಡ್ಡಗಾಲು ಹಾಕುತ್ತಿದ್ದಾರೆ. ಇದೀಗ ಇರುವ ತುಂಡು ಭೂಮಿಯ ತೋಟಗಳನ್ನು ಕಡಿದು ರೈತರು ತಾವಾಗಿಯೇ ಬರಿಗೈಯಲ್ಲಿ ಆ ಜಾಗ ತೊರೆದು ಓಡಿಹೋಗುವಂತೆ ಬೆದರಿಸುವ ಅಮಾನುಷ ಕೃತ್ಯವನ್ನು ಇಲಾಖೆ ಮಾಡುತ್ತಿದೆ. ಇಲಾಖೆಯ ಇಂತಹ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ ಸೋಮವಾರ (ಆ.23) ಕಾರ್ಗಲ್ ವನ್ಯಜೀವಿ ವಲಯ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ” ಎಂದು ಭಾನುಕುಳಿ ಪಂಚಾಯ್ತಿ ಅಧ್ಯಕ್ಷ ಸೋಮರಾಜ್ ಜೈನ್ ಹೇಳಿದ್ದಾರೆ.

ರೈತರು ಈಗಾಗಲೇ ವರ್ಷಗಳ ಹಿಂದೆಯೇ ಬಗರ್ ಹುಕುಂ ಅರ್ಜಿ ಸಲ್ಲಿಸಿದ್ದಾರೆ. ಕೆಲವರಿಗೆ ಹತ್ತಾರು ವರ್ಷಗಳ ಹಿಂದೆಯೇ ಬಗರ್ ಹುಕುಂ ಸಾಗುವಳಿ ಚೀಟಿ ಕೂಡ ನೀಡಲಾಗಿದೆ. ಅಲ್ಲದೆ ಅರಣ್ಯ ಹಕ್ಕು ಕಾಯ್ದೆಯಡಿ ಕೂಡ ಸಲ್ಲಿಸಿರುವ ಅರ್ಜಿಗಳು ಇನ್ನೂ ಬಾಕಿ ಇವೆ. ಈ ಎಲ್ಲಾ ವಿಷಯ ತಿಳಿದಿದ್ದರೂ ಜನರನ್ನು ಹೆದರಿಸಿ, ಬೆದರಿಸಿ ಒಕ್ಕಲೆಬ್ಬಿಸುವ ಏಕೈಕ ಉದ್ದೇಶದಿಂದ ವನ್ಯಜೀವಿ ವಲಯದ ಅಧಿಕಾರಿಗಳು ಜನರ ಮೇಲೆ ಹೀಗೆ ದಾಳಿ ನಡೆಸುತ್ತಿದ್ದಾರೆ ಎಂಬುದು ಅವರ ಆರೋಪ.

ಈಗಾಗಲೇ ದಾಳಿಗೊಳಗಾದ ರೈತರು  ಅರಣ್ಯಾಧಿಕಾರಿಗಳ ವಿರುದ್ದ ಕಾರ್ಗಲ್ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯ ಭಾನುಕುಳಿ ಪಂಚಾಯ್ತಿಗೂ ದೂರು ಸಲ್ಲಿಸಿದ್ದಾರೆ. ಈ ನಡುವೆ ಸ್ಥಳೀಯ ಶರಾವತಿ ಕಣಿವೆ ಅಭಯಾರಣ್ಯ ವಿರೋಧಿ ಜನ ಹೋರಾಟ ಸಂಘಟನೆಯ ನೇತೃತ್ವದಲ್ಲಿ ಭಾನುಕುಳಿ ಗ್ರಾಮದಿಂದ ಕಾರ್ಗಲ್ ವರೆಗೆ ಪಾದಯಾತ್ರೆ ಮತ್ತು ವನ್ಯಜೀವಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಈ ಹೋರಾಟಕ್ಕೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಕೂಡ ಬೆಂಬಲ ನೀಡಿದ್ದು, ಶರಾವತಿ ಕಣಿವೆಯಲ್ಲಿ ಮತ್ತೊಂದು ಸುತ್ತಿನ ಹೋರಾಟದ ಕೂಗು ಮೊಳಗಲಿದೆ. ಕಾಡಿನ ಹೆಸರಿನಲ್ಲಿ ಜನರ ಮೇಲೆ ನಡೆಯುವ ದಬ್ಬಾಳಿಕೆ ವಿರೋಧಿಸಿ ಜನ ಸಂಘರ್ಷ ಆರಂಭವಾಗಲಿದೆ

Tags: ಅರಣ್ಯ ಹಕ್ಕು ಕಾಯ್ದೆಕಣಪಗಾರುಕಾರ್ಗಲ್ಬಗರ್ ಹುಕುಂಭಾನುಕುಳಿವನ್ಯಜೀವಿ ಕಾಯ್ದೆಶರಾವತಿ ಅಭಯಾರಣ್ಯಶರಾವತಿ ಕಣಿವೆಶಿವಮೊಗ್ಗಸೋಮರಾಜ್ ಜೈನ್
Previous Post

ತಾಲಿಬಾನ್: ಅತಂತ್ರದಲ್ಲಿ ಮಹಿಳಾ ಸ್ವಾತಂತ್ರ್ಯ

Next Post

ಗಣೇಶ ಚತುರ್ಥಿ ಹಬ್ಬಕ್ಕೆ ಕೋವಿಡ್ ನಿರ್ಬಂಧ ಹೇರಿದರೆ ನಾವು ಸುಮ್ಮನಿರಲ್ಲ- ಬಸನಗೌಡ ಪಾಟೀಲ್‌ ಯತ್ನಾಳ್‌

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post

ಗಣೇಶ ಚತುರ್ಥಿ ಹಬ್ಬಕ್ಕೆ ಕೋವಿಡ್ ನಿರ್ಬಂಧ ಹೇರಿದರೆ ನಾವು ಸುಮ್ಮನಿರಲ್ಲ- ಬಸನಗೌಡ ಪಾಟೀಲ್‌ ಯತ್ನಾಳ್‌

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada