• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮೋದಿ ಸರ್ಕಾರದ ʻಆದಾಯ ತೆರಿಗೆ ಕಾಯ್ದೆʼ ಮಸೂದೆ ವಿಚಾರದಲ್ಲಿ ಬಹಿರಂಗವಾಗಿ ಕಿತ್ತಾಡಿಕೊಂಡ RSS ಹಾಗೂ BJP ನಾಯಕರು !

Any Mind by Any Mind
August 8, 2021
in ದೇಶ
0
ಮೋದಿ ಸರ್ಕಾರದ ʻಆದಾಯ ತೆರಿಗೆ ಕಾಯ್ದೆʼ ಮಸೂದೆ ವಿಚಾರದಲ್ಲಿ ಬಹಿರಂಗವಾಗಿ ಕಿತ್ತಾಡಿಕೊಂಡ RSS ಹಾಗೂ BJP ನಾಯಕರು !
Share on WhatsAppShare on FacebookShare on Telegram

ಬಿಜೆಪಿ ಹಾಗೂ RSS ನ ಇಬ್ಬರು ನಾಯಕರು ಟ್ವಿಟರ್‌ನಲ್ಲಿ ಮೋದಿ ಸರ್ಕಾರದ ವಿವಾದಾತ್ಮಕ ತೆರಿಗೆ ಕಾಯ್ದೆ ಮಸೂದೆ ವಿಚಾರವಾಗಿ ಕಿತ್ತಾಡಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ಥಿಕ ವಹಿವಾಟುಗಳನ್ನು ನೋಡಿಕೊಳ್ಳುವ ಸ್ವದೇಶಿ ಜಾಗರಣ್ ಮಂಚ್(SJM) ಸಹ ಸಂಚಾಲಕ ಅಶ್ವನಿ ಮಹಾಜನ್ ಮತ್ತು ಬಿಜೆಪಿ ಹಿರಿಯ ನಾಯಕ ವಿಜಯ್ ಚೌಥೈವಾಲೆ ನಡುವೆ ಮಾತಿನ ಸಮರ ನಡೆದಿದೆ. ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ಮೋದಿ ಸರ್ಕಾರದ ನಿರ್ಧಾರದ ಸುತ್ತ ಈ ಇಬ್ಬರು ನಾಯಕರ ನಡುವೆ ವಾಗ್ವಾದ ಜರುಗಿದೆ.

ADVERTISEMENT
New Delhi, Feb 10 (ANI): Prime Minister Narendra Modi replies in Lok Sabha to the Motion of Thanks on the President’s Address during the Budget Session of Parliament in New Delhi on Wednesday. (ANI Photo/ LSTV)

ಈ ಬಗ್ಗೆ ಮೊದಲು ಟ್ವೀಟ್ ಮಾಡಿದ ಅಶ್ವನಿ ಮಹಾಜನ್, ಈ ನಿರ್ಧಾರ ಸರ್ಕಾರದ ಆದಾಯ ನಷ್ಟಕ್ಕೆ ಕಾರಣವಾಗಲಿದೆ ಮತ್ತು ವಿದೇಶಿ ನೇರ ಹೂಡಿಕೆಯು (FDI) ಅಪಾಯ ಎದುರಿಸಬೇಕಾಗುತ್ತದೆ’’ ಎಂದಿದ್ದಾರೆ. ಇದರ ಜೊತೆಗೆ, ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯಿಂದ ಒತ್ತಡಕ್ಕೆ ಒಳಗಾಗಿರುವ ಸರ್ಕಾರಕ್ಕೆ ಬೇರೆ ದಾರಿಯಿಲ್ಲ. ಆದರೆ ಇದರಿಂದ ಸರ್ಕಾರ ಮತ್ತು ಸಾರ್ವಜನಿಕರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಆಗಲಿದೆ. ವಿದೇಶಿ ಹೂಡಿಕೆಯಿಂದಾಗುವ ಅಡ್ಡ ಪರಿಣಾಮಗಳಿಗೆ ಇದೊಂದು ಉತ್ತಮ ಉದಾಹರಣೆ ಎಂದು ಮಹಾಜನ್ ಟ್ವೀಟ್ ಮಾಡಿದ್ದಾರೆ.

It is true that under pressure from international arbitration, government had no other option, but the title should be Relief to thieves – Thousands of Crores of Rupees Loss to Government and Public. A great example of disadvantages of foreign investment. pic.twitter.com/wzaKdiK33D

— ASHWANI MAHAJAN (@ashwani_mahajan) August 6, 2021

Dear Shri @ashwani_mahajan , so are you demanding total ban on FDI? https://t.co/Qln9SvOCLz

— Dr Vijay Chauthaiwale (Modi ka Parivar) (@vijai63) August 6, 2021

ಮಹಾಜನ್ ಟ್ವೀಟ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ವಿಜಯ್ ಚೌಥೈವಾಲೆ, ನಿಮ್ಮ ಪ್ರಶ್ನೆ ನೀವು ಎಷ್ಟರ ಮಟ್ಟಿಗೆ ದೇಶದ ಬಗ್ಗೆ ಕಾಳಜಿ ಹೊಂದಿದ್ದೀರಿ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಒಟ್ಟಾರೆಯಾಗಿ ನೀವು ವಿದೇಶಿ ಹೂಡಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿ ಎನ್ನುತ್ತಿದ್ದೀರಾ ಎಂದು ಮಹಾಜನ್ ಅನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಮಹಾಜನ್,  ಸರ್ಕಾರದ ನಿರ್ಧಾರಗಳನ್ನು ಪರಮಾರ್ಶೆ ಮಾಡಲು ಯಾಕೆ ಸಾಧ್ಯವಿಲ್ಲ.? ಪಾಲಿಸಿಯ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಮಾತನಾಡುವುದು ಅಪರಾಧವೇ.? ಎಂದು ಅವರು ಟ್ವಿಟರ್ನಲ್ಲಿ ಮರು ಪ್ರಶ್ನಿಸಿದ್ದಾರೆ.

Sir ji, read the tweet. Is it a crime to talk about advantages and disadvantages of a policy? https://t.co/UeibCj3xeP

— ASHWANI MAHAJAN (@ashwani_mahajan) August 6, 2021

Everything that is not criminal may not be in larger national interest, a point you repeatedly fail to acknowledge. https://t.co/aJuGzdaa4B

— Dr Vijay Chauthaiwale (Modi ka Parivar) (@vijai63) August 6, 2021

ಇದಕ್ಕೆ ಮತ್ತೆ ಉತ್ತರ ನೀಡಿದ ಬಿಜೆಪಿ ನಾಯಕ ಚೌಥೈವಾಲೆ, ದೇಶದ ಹಿತಾಸಕ್ತಿಗೆ ಒಳಪಡುವ ಎಲ್ಲವೂ ಅಪರಾಧವಾಗಿರುವುದಿಲ್ಲ. ನೀವು ಪದೇ ಪದೇ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿಯೇ ಎಡವುತ್ತಿದ್ದೀರಿ ಎಂದು ಚಾಟಿ ಬೀಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾಜನ್, ಬನ್ನಿ ಹಾಗದರೆ ಚರ್ಚೆ ಮಾಡೋಣ ಎಂದು ಬಹಿರಂಗ ಸವಾಲು ಎಸೆದರು. ನೀವು ನಿಮ್ಮ ‘ಶ್ರೇಷ್ಠ’ ನಂಬಿಕೆಗಳ ಬಗ್ಗೆ ಏಕೆ ಚರ್ಚೆಗೆ ಬರುವುದಿಲ್ಲ.? ಎಂದು ಚೌಥೈವಾಲೆ ಅನ್ನು ಕುಟುಕಿದ್ದಾರೆ. ಇದಕ್ಕೆ ಈವರೆಗೆ ಬಿಜೆಪಿ ಹಿರಿಯ ನಾಯಕ ವಿಜಯ್ ಚೌಥೈವಾಲೆ ಯವುದೇ  ಪ್ರತಿಕ್ರಿಯೆ ನೀಡಿಲ್ಲ.

Everything that is not criminal may not be in larger national interest, a point you repeatedly fail to acknowledge. https://t.co/aJuGzdaa4B

— Dr Vijay Chauthaiwale (Modi ka Parivar) (@vijai63) August 6, 2021

Shri @vijai63 why don’t you come for a debate about your ‘great’ beliefs? https://t.co/Lup1gUIzKi

— ASHWANI MAHAJAN (@ashwani_mahajan) August 6, 2021

ವಿವಾದಾತ್ಮಕ ಆದಾಯ ತೆರಿಗೆ ಕಾಯ್ದೆಯ ಹಿನ್ನೋಟ :

ಹಿಂದಿನ ಯುಪಿಎ ಸರ್ಕಾರ 2012ರಲ್ಲಿ  ವಿವಾದಾತ್ಮಕ ತೆರಿಗೆ ತಿದ್ದುಪಡಿಗಳನ್ನು ತೆಗೆದುಹಾಕುವ ನಿರ್ಧಾರ ಮಾಡಿತ್ತು. ಇದೀಗ ಅಂಥದ್ದೇ ತಿದ್ದುಪಡಿಗಳಿಗೆ ಮುಂದಾಗಿರುವ ಮೋದಿ ಸರ್ಕಾರವು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ. ಮೋದಿ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ಈ ಆದಾಯ ತೆರಿಗೆ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಅಗತ್ಯವಿಲ್ಲ. ಏಕೆಂದರೆ ಇದೊಂದು ಹಣಸಕಾಸಿಗೆ ಸಂಬಂಧಿಸಿದ ಕಾಯ್ದೆಯಾಗಿದ್ದು, ಕೇಂದ್ರ ಸರ್ಕಾರ ಲೋಕಸಭೆಯಲ್ಲೇ ಇದಕ್ಕೆ ಅಂಗೀಕಾರ ನೀಡಿದೆ.

ಲೋಕಸಭೆಯಲ್ಲಿ ಮಸೂದೆ ಮಂಡಿಸಿದ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕಳೆದ ಕೆಲವು ವರ್ಷಗಳಲ್ಲಿ ಹಣಕಾಸು ಮತ್ತು ಮೂಲಸೌಕರ್ಯ ವಲಯದಲ್ಲಿ ಪ್ರಮುಖ ಸುಧಾರಣೆಗಳನ್ನು ಆರಂಭಿಸಲಾಗಿದೆ, ಇದು ದೇಶದಲ್ಲಿ ಹೂಡಿಕೆಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ. ಆದಾಗ್ಯೂ, ಈ ಪೂರ್ವನಿಯೋಜಿತ ಸ್ಪಷ್ಟೀಕರಣ ಮತ್ತು ಕೆಲವು ಸಂದರ್ಭಗಳಲ್ಲಿ ಸೃಷ್ಟಿಯಾದ ಬೇಡಿಕೆಯು ಸಂಭಾವ್ಯ ಹೂಡಿಕೆದಾರರಲ್ಲಿ ಈ ಬಗ್ಗೆ ತಳಮಳ ಉಂಟುಮಾಡಿದೆ ಎಂದರು.

(ವರದಿ: ಮಂಜುನಾಥ್‌. ಬಿ)

Previous Post

ಹಿಂದುತ್ವದ ಹಿತಾಸಕ್ತಿಯೂ ಜಾತಿಯ ಅನಿವಾರ್ಯತೆಯೂ

Next Post

NEP-2020 ಕುರಿತ ಆದೆಶ ತಕ್ಷಣ ಹಿಂಪಡೆದು, ವಿಸ್ತೃತ ಚರ್ಚೆ ನಡೆಸಿದ ನಂತರ ಅನುಷ್ಠಾನಗೊಳಿಸಿ: ಸಿದ್ದರಾಮಯ್ಯ ಆಗ್ರಹ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
NEP-2020 ಕುರಿತ ಆದೆಶ ತಕ್ಷಣ ಹಿಂಪಡೆದು, ವಿಸ್ತೃತ ಚರ್ಚೆ ನಡೆಸಿದ ನಂತರ ಅನುಷ್ಠಾನಗೊಳಿಸಿ: ಸಿದ್ದರಾಮಯ್ಯ ಆಗ್ರಹ

NEP-2020 ಕುರಿತ ಆದೆಶ ತಕ್ಷಣ ಹಿಂಪಡೆದು, ವಿಸ್ತೃತ ಚರ್ಚೆ ನಡೆಸಿದ ನಂತರ ಅನುಷ್ಠಾನಗೊಳಿಸಿ: ಸಿದ್ದರಾಮಯ್ಯ ಆಗ್ರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada