• Home
  • About Us
  • ಕರ್ನಾಟಕ
Monday, November 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಬಿಸಿಲ ಬೇಗೆಯಲಿ ಬೆಂದ ರೈತ ಮಹಿಳೆಯರು ರೈತ ಹೋರಾಟದ ಪ್ರಮುಖ ಬಿಂದು

by
March 9, 2021
in Uncategorized, ದೇಶ
0
ಬಿಸಿಲ ಬೇಗೆಯಲಿ ಬೆಂದ ರೈತ ಮಹಿಳೆಯರು ರೈತ ಹೋರಾಟದ ಪ್ರಮುಖ ಬಿಂದು
Share on WhatsAppShare on FacebookShare on Telegram

ಸಮಾಜದಲ್ಲಿ ನಡೆಯುವ ಹೋರಾಟದಲ್ಲಿ ಮಹಿಳೆಯರ ಧ್ವನಿ ಕೂಡ ಪ್ರಮುಖವಾಗಿದೆ. ಶೋಷಣೆಯ ವಿರುದ್ಧ ಎಚ್ಚೆತ್ತು. ಪುರುಷನಿಗೆ ಸರಿಸಮಾನಳಾಗಿ ಅನ್ಯಾಯ,ಸಮಸ್ಯೆಗಳ ವಿರುದ್ಧ ಮಹಿಳೆಯರು ಮುಖ್ಯವಾಹಿನಿಗೆ ಬಂದು ಹೋರಾಡಿರುವುದಕ್ಕೆ ಸಾಕಷ್ಟು ಊದಾಹರಣೆಗಳಿವೆ. ಇದೀಗ ನೂರು ದಿನಗಳಿಗೂ ಹೆಚ್ಚು ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ರೈತ ಮಹಿಳೆಯರದ್ದು ಪ್ರಮುಖ ಪಾತ್ರವಿದೆ.

ADVERTISEMENT

ದೇಶದ ಕೃಷಿಕ್ಷೇತ್ರಕ್ಕೆ ಮಹಿಳೆಯರು ಗಮನಾರ್ಹ ಕೊಡುಗೆ ನೀಡಿದ್ದು, ಪುರುಷನಂತೆ ಬಿಸಿಲ ಬೇಗೆಯಲಿ ಕೃಷಿಭೂಮಿಯಲ್ಲಿ ಬೆವರು ಹರಿಸಿ ಪುರುಷನಷ್ಟೆ ಶ್ರಮವಹಿಸಿ ದುಡಿಯುವುದರಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ. ಮೌಢ್ಯತೆಯಿಂದ ಹೊರಬಂದು ನಾಲ್ಕು ಗೋಡೆಗೆ ಸೀಮಿತವಾದ ಮಹಿಳೆ ದಬ್ಬಾಳಿಕೆಯನ್ನು ಮಟ್ಟಿನಿಂತ್ತಿದ್ದಾಳೆ. ಇದಕ್ಕೆ ಉದಾಹರಣೆ ಮನೆ ಮಠಗಳನ್ನು ತೊರೆದು ದೆಹಲಿಯ ಗಡಿಭಾಗಗಳಲ್ಲಿ ಪುರುಷ ರೈತರೊಂದಿಗೆ ಮಹಿಳಾ ರೈತರು ನಿರಂತರ ಹೋರಾಟದಲ್ಲಿ ಭಾಗಿಯಾಗುತ್ತಿರುವುದು.

ಮಳೆಗಾಳಿ ಚಳಿಯೆನ್ನದೆ ಸ್ವಂತ ಸ್ಥಳವನ್ನು ತೊರೆದು, ಪರುಷನೊಂದಿಗೆ ರೈತ ಮಹಿಳೆಯೂ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದರ ಜೊತೆಗೆ ವಿಚಾರಗಳನ್ನು ಅರಿತು ಮಾಧ್ಯಮಗಳ ಮುಂದೆ ಪ್ರಬುದ್ಧವಾದ ಹೇಳಿಕೆ ನೀಡಿರುವುದು ಆಧುನಿಕ ಸಮಾಜದಲ್ಲಿ ಮಹಿಳಾ ಹೋರಾಟದ ಧ್ವನಿಗೆ ಮತ್ತಷ್ಟು ಬಲಸಿಕ್ಕಂತಾಗಿದೆ.

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾದಿನ ಅಂಗವಾಗಿ ಭಾರತೀಯ ಕಿಸಾನ್ ಯೂನಿಯನ್ ರೈತ ಪ್ರತಿಭಟನೆಯಲ್ಲಿ ಮಹಿಳಾ ರೈತರ ಕಾರ್ಯ ಮತ್ತು ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸುವ ಸಲುವಾಗಿ ದೆಹಲಿಯ ಗಡಿಭಾಗಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ, ಆಧುನಿಕ ಸಮಾಜದಲ್ಲಿ ಹೆಚ್ಚು ಮಹಿಳೆಯರನ್ನು ಒಂದುಗೂಡಿಸಿ ಮುಕ್ತವಾಗಿ ಅಭಿಪ್ರಾಯ ಹಂಚಿಕೆಗೆ ಅವಕಾಶ ಮಾಡಿಕೊಟ್ಟ ಕೀರ್ತಿ ಈ ರೈತ ಚಳವಳಿಗೆ ಸಲ್ಲುತ್ತೆ.

ವಿಶ್ವದಾದ್ಯಂತ ಸದ್ದು ಮಾಡಿತು ರೈತ ಚಳವಳಿಯಲ್ಲಿ ಮಹಿಳೆಯ ಧ್ವನಿ

ಕೃಷಿಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ವಿಶ್ವದ ಪ್ರಮುಖ ಮಹಿಳಾ ಕಾರ್ಯಕರ್ತರನ್ನು ಗಮನಸೆಳೆದಿದೆ. ಉದಾಹರಣೆಗೆ ಪೋಪ್‌ ಗಾಯಕಿ ರಿಹನ್ನಾ, ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್‌, ಕಾನೂನು ಕಾರ್ಯಕರ್ತೆ ಮೀನಾ ಹ್ಯಾರಿಸ್‌, ಹಾಲಿವುಡ್‌ ನಟಿ ಸುಸಾನ ಸರಂಡನ್‌, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ಮಿಚೆಲ್‌ ಬ್ಯಾಚೆಲೆಟ್‌ ಹಾಗು ಯುಕೆ ಯ ಗ್ರೀನ್‌ ಪಾರ್ಟಿ ಪಾರ್ಲಿಮೆಂಟ್‌ ಸದಸ್ಯೆ ಕ್ಯಾರೋಲಿನ್‌ ಲ್ಯೂಕಾಸ್‌ ಸೇರಿದಂತೆ ರಾಷ್ಟ್ರೀಯ ಹಾಗು ಜಾಗತೀಕ ಮಟ್ಟದಲ್ಲಿ ಮಹಿಳಾ ಸಂಘಸಂಸ್ಥೆಗಳು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿವೆ.

ಸಮಾಜದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ನಿರಂತರ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರು ತಮ್ಮ ಸಮಸ್ಯೆಗಳ ವಿರುದ್ಧ ಹೋರಾಡುವುದರ ಜೊತೆಗೆ ಜಾಗತೀಕ ಮಟ್ಟದಲ್ಲಿ ವಿಶೇಷ ಗಮನಸೆಳೆದಿರುವ ರೈತರ ಆಂದೋಲನ ಸೇರಿದಂತೆ ಇತರೆ ಚಳವಳಿಯಲ್ಲಿ ಸಮಾಜದ ಕಾಳಜಿಯನ್ನು ಮುಂದಿಟ್ಟುಕೊಂಡು ಅನ್ಯಾಯದ ವಿರುದ್ಧ ಧ್ವನಿಯೆತ್ತಿರುವುದು ಗಮನಾರ್ಹವಾಗಿದೆ.

ಚಳವಳಿಯಲ್ಲಿ ಗಮನ ಸೆಳೆದ ದೇಶದ ಇಬ್ಬರು ಮಹಿಳಾ ಕಾರ್ಯಕರ್ತೆಯರು

ರೈತ ಹೋರಾಟಕ್ಕೆ ನೋದೀಪ್‌ ಕೌರ್‌ ಮತ್ತು ದಿಶಾ ರವಿ ಅವರ ಬೆಂಬಲ ನಿರ್ದಿಷ್ಟ ಮಹತ್ವವನ್ನು ಪಡೆದುಕೊಂಡಿದೆ. ನೋದೀಪ್‌ ಕೌರ್‌ ಕೈಗಾರಿಕಾ ವಲಯದಲ್ಲಿ ಮಹಿಳಾ ಮತ್ತು ಪುರುಷ ಕಾರ್ಮಿಕರ ಶೋಷಣೆಯ ವಿರುದ್ಧದ ಹೋರಾಟವನ್ನು ಸಂಘಟಿಸಿರುವುದರ ಜೊತೆಗೆ ದೆಹಲಿಯ ಟಿಕ್ರಿ,ಗಾಝೀಪುರ, ಗಡಿಗಳಲ್ಲಿ ರೈತರು ನಡೆಸುತ್ತಿರುವ ನಿರಂತರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾ ಬಂದಿದ್ದರು. ಮತ್ತೊಂದೆಡೆ ರೈತ ಚಳವಳಿಯನ್ನು ಬೆಂಬಲಿಸುವಲ್ಲಿ ಹೆಚ್ಚು ಸುದ್ದಿಯಾಗಿದ್ದು, ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ, ಈ ಮಹಿಳಾ ಧ್ವನಿಗಳು ಸರ್ಕಾರವನ್ನು ನಡುಗಿಸುವಲ್ಲಿ ಯಶಸ್ವಿಯಾಗಿದ್ದವು, ಆಳುವ ವರ್ಗ ಧ್ವನಿಯನ್ನು ಅಡಗಿಸಲು ಕಾನೂನು ಸುವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಹೋರಾಟಗಾರ್ತಿಯರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಜೈಲುಪಾಲು ಮಾಡಿದ್ದರು. ಈ ವಿಚಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಮಹತ್ವ ಪಡೆದುಕೊಂಡಿದ್ದೆ.

ಇಲ್ಲಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನೋದೀಪ್‌ ಕೌರ್‌ ಸಂಘಟಿಸಿದ ಕಾರ್ಮಿಕ ಹಾಗು ರೈತರ ನಡುವಿನ ಮೈತ್ರಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಇದಕ್ಕೆ ಬಂಧನವೆಂಬ ಅಸ್ತ್ರವನ್ನು ಬಳಸಿದರು ಕೂಡ ಮತ್ತೆ ಜಾಗತೀಕ ಮಟ್ಟದಲ್ಲಿ ಮಹಿಳಾ ಧ್ವನಿಗಳು ಸರ್ಕಾರದ ವಿರುದ್ಧ ತಿರುಗಿನಿಂತವು ಇದಕ್ಕೆ ಉದಾಹರಣೆ ನೋದೀಪ್‌ ಕೌರ್‌ ಬಂಧನವನ್ನು ಖಂಡಿಸಿ ಅಮೇರಿಕಾದ ಮೀನಾ ಹ್ಯಾರಿಸ್‌ ಹೇಳಿಕೆ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಬೆಂಬಲವನ್ನು ಹೆಚ್ಚಿಸಿತ್ತು.

ದಿಶಾ ರವಿ ಮತ್ತು ನೋದೀಪ್‌ಕೌರ್‌ ಅವರ ಹೋರಾಟವು ದೇಶದಲ್ಲಿ ಹೊಸ ತಲೆಮಾರಿನ ಮಹಿಳಾ ಕಾರ್ಯಕರ್ತರ ಹೊರಹೊಮ್ಮುವಿಕೆಯನ್ನು ತೋರಿಸುತ್ತದೆ. ಮತ್ತು ಕಿರಿಯ ವಯಸ್ಸಿನ ಜಾಗತಿಕ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್‌ ಅವರ ಕ್ರಿಯಾಶೀಲತೆ ಹೆಚ್ಚು ಮಹಿಳಾ ಹೋರಾಟಗಾರರನ್ನು ಸೃಷ್ಟಿಸುವಲ್ಲಿಯೂ ಸಹಕಾರಿಯಾಗಿದೆ.

ಹಿಂದಿನಿಂದಲೂ ಕೃಷಿ ಸಮುದಾಯದಲ್ಲಿ ಮಹಿಳೆಯರ ಪಾತ್ರ ದೊಡ್ಡ ಮಟ್ಟದಲ್ಲಿದ್ದು, ಪುರುಷನಿಗಿಂತ ಹೆಚ್ಚು ಕೆಲಸ ಮಾಡಿದ್ದರು, ಅವರಿಗೆ ಸಮಾಜದಲ್ಲಿ ಮಾನ್ಯತೆ ಸಿಗುವುದು ಕಡಿಮೆಯಾಗಿತ್ತು. ಆಧುನಿಕ ಸಮಾಜದಲ್ಲಿ ಆ ಪದ್ಧತಿ ಬದಲಾಗಿದೆ. ಹೋರಾಟಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ರೈತ ಚಳವಳಿಯಲ್ಲಿ ಪುರುಷ ರೈತರು ಮಹಿಳಾ ದಿನದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಮಹಿಳೆಯರಿಗಾಗಿಯೇ ವೇದಿಕೆ ಮೀಸಲಿಟಿದ್ದು ಉತ್ತಮ ಬೆಳವಣೆಗೆಯಾಗಿದೆ. ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಪ್ರಜಾಪ್ರಭುತ್ವದ ತತ್ವವನ್ನು ಬಲಗೊಳಿಸಿದ ರೈತ ಹೋರಾಟ ರೈತ ಮಹಿಳೆಯ ಶ್ರಮವನ್ನು ಗುರುತಿಸುವುದರ ಜೊತೆಗೆ ಮಾನವೀಯತೆ, ಸಮಾನತೆಯ ಮರೆತ ಸಮಾಜಕ್ಕೆ ಪ್ರಜಾಪ್ರಭುತ್ವದ ತತ್ವಗಳನ್ನು ಪರಿಚಯಿಸುವುದರಲ್ಲಿ ಆಧುನಿಕ ಭಾರತದ ರೈತ ಚಳವಳಿ ಪ್ರಮುಖ ಪಾತ್ರವಹಿಸಿದೆ.

Previous Post

ಅಧಿಕಾರ ಉಳಿಸಲಿರುವ ಮಮತಾ, ಬಿಜೆಪಿಗೆ 100 ಕ್ಕೂ ಹೆಚ್ಚು ಸ್ಥಾನ: ಟೈಮ್ಸ್‌ ನೌ ಸಮೀಕ್ಷೆ

Next Post

ಪಶ್ಚಿಮ ಬಂಗಾಳದ 8 ಹಂತದ ಚುನಾವಣೆ ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ ಅರ್ಜಿ ವಜಾ

Related Posts

Top Story

DCM DK Shivakumar: ಕೆಜೆ ಜಾರ್ಜ್ ರವರನ್ನು ಬೇಟಿ ಮಾಡಿ ನಾಯಕತ್ವ ಬದಲಾವಣೆಯ ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್

by ಪ್ರತಿಧ್ವನಿ
November 24, 2025
0

ನಾಯಕತ್ವ ಬದಲಾವಣೆ ಸಂಬಂಧ ಕರ್ನಾಟಕ ಕಾಂಗ್ರೆಸ್​​ನಲ್ಲಿ ( Congress) ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಿದ್ದರಾಮಯ್ಯ ಬಣ, ಡಿಕೆ ಶಿವಕುಮಾರ್ (DK Shivakumar)ಬಣ ನಾಯಕರಿಂದ ಹೈಕಮಾಂಡ್ ಭೇಟಿ ಬಳಿಕ...

Read moreDetails
Political News Karnataka

ಡಿಸ್ಟಿಲರಿಗಳಿಗೆ ಪತ್ರ: ಸಿಎಂಗೆ ಈಗ ಜ್ಞಾನೋದಯ ; ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಜೋಶಿ ಕಿಡಿ

November 23, 2025

ಈ ವ್ಯಕ್ತಿಯನ್ನು ಹಣಕಾಸು ಮಂತ್ರಿ ಮಾಡಿದ್ದು ನಾನು: ಹೆಚ್.ಡಿ. ದೇವೇಗೌಡ..!!

November 22, 2025
ಮೆಕ್ಕೆಜೋಳ ಖರೀದಿ ವಿಷಯದಲ್ಲಿ ಕೇಂದ್ರ  ಮೇಲೆ ಗೂಬೆ ಕೂರಿಸ್ತಿದಿಯಾ ಕರ್ನಾಟಕ ಸರ್ಕಾರ?

ಮೆಕ್ಕೆಜೋಳ ಖರೀದಿ ವಿಷಯದಲ್ಲಿ ಕೇಂದ್ರ ಮೇಲೆ ಗೂಬೆ ಕೂರಿಸ್ತಿದಿಯಾ ಕರ್ನಾಟಕ ಸರ್ಕಾರ?

November 22, 2025

ಮೀನುಗಾರಿಕಾ ವಿಶ್ವ ವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ: ಸಿ.ಎಂ.ಸಿದ್ದರಾಮಯ್ಯ ಘೋಷಣೆ

November 22, 2025
Next Post
ಪಶ್ಚಿಮ ಬಂಗಾಳದ 8 ಹಂತದ ಚುನಾವಣೆ ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ ಅರ್ಜಿ ವಜಾ

ಪಶ್ಚಿಮ ಬಂಗಾಳದ 8 ಹಂತದ ಚುನಾವಣೆ ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ ಅರ್ಜಿ ವಜಾ

Please login to join discussion

Recent News

Daily Horoscope: ಇಂದು ಈ ರಾಶಿಯವರು ಮುಟ್ಟಿದೆಲ್ಲಾ ಚಿನ್ನ..!
Top Story

Daily Horoscope: ಇಂದು ಈ ರಾಶಿಯವರು ಮುಟ್ಟಿದೆಲ್ಲಾ ಚಿನ್ನ..!

by ಪ್ರತಿಧ್ವನಿ
November 24, 2025
Top Story

DCM DK Shivakumar: ಕೆಜೆ ಜಾರ್ಜ್ ರವರನ್ನು ಬೇಟಿ ಮಾಡಿ ನಾಯಕತ್ವ ಬದಲಾವಣೆಯ ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್

by ಪ್ರತಿಧ್ವನಿ
November 24, 2025
ಸಿಎಂ ಬದಲಾವಣೆ ಚರ್ಚೆ ನಡುವೆ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಲಕ್ಷ್ಮೀ ಹೆಬ್ಬಾಳ್ಕರ್
Top Story

ಸಿಎಂ ಬದಲಾವಣೆ ಚರ್ಚೆ ನಡುವೆ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಲಕ್ಷ್ಮೀ ಹೆಬ್ಬಾಳ್ಕರ್

by ಪ್ರತಿಧ್ವನಿ
November 23, 2025
ಸಿಎಂ ಕುರ್ಚಿ ಕದನ: ಕೊನೆಗೂ ಮೌನ ಮುರಿದ ಮಲ್ಲಿಕಾರ್ಜುನ ಖರ್ಗೆ
Top Story

ಸಿಎಂ ಕುರ್ಚಿ ಕದನ: ಕೊನೆಗೂ ಮೌನ ಮುರಿದ ಮಲ್ಲಿಕಾರ್ಜುನ ಖರ್ಗೆ

by ಪ್ರತಿಧ್ವನಿ
November 23, 2025
ಗೃಹ ಸಚಿವ ಪರಮೇಶ್ವರ್‌ ಸಿಎಂ ಆಗಲಿ : ದಲಿತ ಕಾರ್ಡ್‌ ಉರುಳಿಸಿದ ಸಚಿವ ಜಾರಕಿಹೊಳಿ..
Top Story

ಗೃಹ ಸಚಿವ ಪರಮೇಶ್ವರ್‌ ಸಿಎಂ ಆಗಲಿ : ದಲಿತ ಕಾರ್ಡ್‌ ಉರುಳಿಸಿದ ಸಚಿವ ಜಾರಕಿಹೊಳಿ..

by ಪ್ರತಿಧ್ವನಿ
November 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಈ ರಾಶಿಯವರು ಮುಟ್ಟಿದೆಲ್ಲಾ ಚಿನ್ನ..!

Daily Horoscope: ಇಂದು ಈ ರಾಶಿಯವರು ಮುಟ್ಟಿದೆಲ್ಲಾ ಚಿನ್ನ..!

November 24, 2025

DCM DK Shivakumar: ಕೆಜೆ ಜಾರ್ಜ್ ರವರನ್ನು ಬೇಟಿ ಮಾಡಿ ನಾಯಕತ್ವ ಬದಲಾವಣೆಯ ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್

November 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada