• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದಿಗೂ ಹಿಂದೂಗಳಾಗುವುದಿಲ್ಲ: ಜಾರ್ಖಂಡ್ ಸಿಎಂ

by
February 23, 2021
in ದೇಶ
0
ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದಿಗೂ ಹಿಂದೂಗಳಾಗುವುದಿಲ್ಲ: ಜಾರ್ಖಂಡ್ ಸಿಎಂ
Share on WhatsAppShare on FacebookShare on Telegram

ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದೂ ಹಿಂದೂಗಳಾಗುವುದಿಲ್ಲ, ಈ ಕುರಿತು ಯಾವುದೇ ಗೊಂದಲಗಳಿರಬಾರದು ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಹೇಳಿದ್ದಾರೆ. ಸ್ವತಃ, ಓರ್ವ ಆದಿವಾಸಿಯಾಗಿರುವ ಸೊರೆನ್‌, ಆದಿವಾಸಿಗಳು ಯಾವತ್ತಿಗೂ ಪ್ರಕೃತಿ ಆರಾಧಕರು, ಅದಕ್ಕಾಗಿಯೇ ಅವರನ್ನು ಸ್ಥಳೀಯ ಜನರೆಂದು ಸಂಬೋಧಿಸಲಾಗುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಹಾರ್ವರ್ಡ್‌ ವಿಶ್ವವಿದ್ಯಾಲಯದ 18 ನೇ ಭಾರತೀಯ ವಾರ್ಷಿಕದಲ್ಲಿ ಮಾತನಾಡಿದ ಅವರು, ನಮ್ಮ ಜಾರ್ಖಂಡಿನಲ್ಲಿ 32 ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿವೆ. ಆದರೆ ಇಲ್ಲಿ ನಮ್ಮ ʼಸ್ಥಳೀಯʼ ಸಂಸ್ಕೃತಿ, ಭಾಷೆಗಳಿಗೆ ಉತ್ತೇಜನ ನೀಡಲು ನಮಗೆ ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

“ನಮ್ಮ ರಾಜ್ಯದ ವತಿಯಿಂದ ಈ ಬಾರಿ ಜನಗಣತಿಗೆ ಆದಿವಾಸಿ ಕಾಲಂ ಪ್ರತ್ಯೇಕವಾಗಿ ಸೇರಿಸಬೇಕೆಂಬ ಕೋರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಇಡಲಾಗಿದೆ. ಆದಿವಾಸಿ ಸಂಪ್ರದಾಯ, ಸಂಸ್ಕೃತಿ, ಅಸ್ಮಿತೆಗೆ ಇದು ಸುರಕ್ಷತೆ ಒದಗಿಸಬಲ್ಲದು. ಆದಿವಾಸಿಗಳು ಹಿಂದೂಗಳಲ್ಲ, ಅವರು ಎಂದೂ ಹಿಂದೂಗಳಾಗುವುದಿಲ್ಲ, ಜನಗಣತಿ ಕಾಲಮ್‌ನಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌, ಜೈನ್‌ ಅಥವಾ ಇನ್ನೇನೆ ಬರೆದರೂ ಅವರು ಆದಿವಾಸಿಗಳಾಗಿಯೇ ಉಳಿಯುತ್ತಾರೆ. ಕೇಂದ್ರ ಸರ್ಕಾರ ʼಇತರರುʼ ಎಂಬ ಕಾಲಂ ಇಟ್ಟು ಹೊಂದಿಸಲು ಮಾತ್ರ ನೋಡುತ್ತಿದೆ.” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ʼಕಾನನ್‌ ನಹೀ, ಪರ್ಯಟನ್‌ʼ ಎಂಬ ಇತ್ತೀಚಿನ ಘೋಷಣೆಯ ಕುರಿತು ಮಾತನಾಡಿದ ಅವರು, ಜಾರ್ಖಂಡ್‌ ಮುಖ್ಯವಾಗಿ ಖನಿಜ ಸಂಪತ್ತಿನ ನಾಡು. ಖನಿಜಗಳ ಗಣಿಗಾರಿಕೆ ನಡೆಸುವ ಯಾವ ಪ್ರದೇಶವೂ ಉತ್ತಮ ಸ್ಥಿತಿಯಲ್ಲಿಲ್ಲ. ಹಾಗಾಗಿ ಗಣಿಗಾರಿಕೆಗಿಂತ ಪ್ರವಾಸೋದ್ಯಮವನ್ನು ಅಭಿವೃದ್ಧಿಯ ಹೊಸ ಕ್ರಮವಾಗಿ ನೋಡುವ ಉದ್ದೇಶ ಈ ಸ್ಲೋಗನ್‌ ಹಿಂದೆ ಇದೆ, ಆದಿವಾಸಿಗಳು ದೇವರಾಗಿ, ಪೂಜ್ಯಭಾವದಿಂದ ನೋಡುವ ಕಾಡುಗಳನ್ನು ಕೇವಲ ಖನಿಜ, ಗಣಿಗಳ ದೃಷ್ಟಿಯಲ್ಲಿ ಕಾಣಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದವರನ್ನು ನಿರ್ಲಕ್ಷಿಸಲಾಗುತ್ತಿದೆ ಹಾಗೂ ಅವಗಣಿಸಲಾಗುತ್ತಿದೆ. ಈ ಮನಸ್ಥಿತಿ ಇನ್ನೂ ಬದಲಾಗಿಲ್ಲ. ಆದಿವಾಸಿ/SC/ST ಜನರಿಗೆ ʼನೀವು ಅರ್ಹರಲ್ಲ, ಸಮರ್ಥರಲ್ಲʼ ಎಂದು ಹೇಳುವುದನ್ನು ಇಂದಿಗೂ ಕೇಳುತ್ತಿದ್ದೇನೆ. ನಾನೀಗ ಮುಖ್ಯಮಂತ್ರಿಯಾಗಿದ್ದೇನೆ, ಒಬ್ಬ ಆದಿವಾಸಿ ಮುಖ್ಯಮಂತ್ರಿಯಾಗುವುದು ಸುಲಭದ ಮಾತಲ್ಲ ಎಂದು ತನ್ನದೇ ಉದಾಹರಣೆಯನ್ನು ಅವರು ನೀಡಿದ್ದಾರೆ.

“ಸಂವಿಧಾನದಲ್ಲಿರುವ ಸುರಕ್ಷತೆಯ ಹೊರತಾಗಿಯೂ, ಆದಿವಾಸಿಗಳು ತಮ್ಮ ಹಕ್ಕನ್ನು ಪಡೆಯಲಾಗುವುದಿಲ್ಲ, ಅವರನ್ನು ಪುರಾತನ ಕಾಲದಿಂದಲೂ ಕೆಳಕ್ಕೆ ತಳ್ಳಲಾಗಿದೆ, ಇಂದು ಸಹ ಅದೇ ಮನಸ್ಥಿತಿಯಾಗಿದೆ. ಅವರನ್ನು ಕೀಳಾಗಿ ನೋಡಲಾಗುತ್ತದೆ, ಇದು ಕಳವಳಕಾರಿ ವಿಷಯ ಎಂದು ಅವರು ಹೇಳಿದ್ದಾರೆ.

ಜಾರ್ಖಂಡ್ ರಾಜ್ಯವು ರೂಪುಗೊಂಡು 20 ವರ್ಷಗಳಾಗಿವೆ ಆದರೆ ಜಾರ್ಖಂಡ್ ಇನ್ನೂ ತಲುಪಬೇಕಾದ ಸ್ಥಳವನ್ನು ತಲುಪಿಲ್ಲ, ಆದಿವಾಸಿಗಳ ಅಭಿವೃದ್ಧಿಗಾಗಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

Previous Post

ಜಿಲೆಟಿನ್‌ ಸ್ಫೋಟ: ಸರ್ಕಾರ ಮಾಧ್ಯಮದ ಮುಂದೆ ತಾತ್ಕಾಲಿಕ ಹೇಳಿಕೆ ಕೊಡದೆ ಕಠಿಣ ಕ್ರಮಕೈಗೊಳ್ಳಲಿ -ಹೆಚ್‌ಡಿಕೆ

Next Post

ಕೇರಳಿಗರಿಗೆ ಪ್ರವೇಶ ನಿಷೇಧಿಸಿಲ್ಲ: ಪಿಣರಾಯಿ ಪತ್ರಕ್ಕೆ ಸುಧಾಕರ್ ಪ್ರತಿಕ್ರಿಯೆ

Related Posts

ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..
Top Story

ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

by ಪ್ರತಿಧ್ವನಿ
May 1, 2026
0

ಬೆಳಗಾವಿ : ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ₹2162ರಿಂದ ₹3153ಕ್ಕೆ ಏರಿಸಿರುವುದು, ಒಟ್ಟು ₹991ರ ಭಾರೀ ಏರಿಕೆ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರವಾಗಿದೆ ಎಂದು ಮಹಿಳಾ ಮತ್ತು...

Read moreDetails
ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

May 1, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post
ಕೇರಳಿಗರಿಗೆ ಪ್ರವೇಶ ನಿಷೇಧಿಸಿಲ್ಲ: ಪಿಣರಾಯಿ ಪತ್ರಕ್ಕೆ ಸುಧಾಕರ್ ಪ್ರತಿಕ್ರಿಯೆ

ಕೇರಳಿಗರಿಗೆ ಪ್ರವೇಶ ನಿಷೇಧಿಸಿಲ್ಲ: ಪಿಣರಾಯಿ ಪತ್ರಕ್ಕೆ ಸುಧಾಕರ್ ಪ್ರತಿಕ್ರಿಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada