• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಿಹಾರದಲ್ಲಿ ಜೆಡಿಯು ಸ್ಥಾನ ಕುಸಿತಕ್ಕೆ ಎಲ್‌ಜೆಪಿ ಕಾರಣವೇ?

by
November 16, 2020
in ದೇಶ
0
ಬಿಹಾರದಲ್ಲಿ ಜೆಡಿಯು ಸ್ಥಾನ ಕುಸಿತಕ್ಕೆ ಎಲ್‌ಜೆಪಿ ಕಾರಣವೇ?
Share on WhatsAppShare on FacebookShare on Telegram

ಜಿದ್ದಾ ಜಿದ್ದಿನ ಸ್ಪರ್ದೆ ಏರ್ಪಟ್ಟಿದ್ದ ಬಿಹಾರ ವಿಧಾನ ಸಭಾ ಚುನಾವಣಾ ಕಣದಲ್ಲಿ ಎಲ್ಲ ಪಕ್ಷಗಳೂ ಶಕ್ತಿ ಮೀರಿ ಅಧಿಕಾರ ಹಿಡಿಯಲು ಹಣಾಹಣಿ ನಡೆಸಿದವು. ಈ ಬಾರಿಯ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರಂತೂ ಆಡಳಿತಾರೂಢ ಜನತಾದಳ (ಯು) ನ್ನು ಸೋಲಿಸುವುದಕ್ಕೆ ಭಾರೀ ಶಕ್ತಿ ವ್ಯಯಿಸಿದರು. ಬಹುಷ ಅವರಿಗೆ ತಮ್ಮ ಪಕ್ಷ ದ ಅಭ್ಯರ್ಥಿಗಳು ಗೆಲ್ಲುವುದಕ್ಕಿಂತ ಜನತಾದಳವನ್ನು ಸೋಲಿಸುವುದೇ ಗುರಿ ಆಗಿದ್ದಂತೆ ಭಾಸವಾಗಿತ್ತು.

ADVERTISEMENT

ಈ ಬಾರಿ ಜೆಡಿಯು ಕೇವಲ 43 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರ ಸಫಲವಾಗಿದ್ದು, ಇದು 2015 ರಲ್ಲಿ ಪಡೆದಿದ್ದ 71 ಸ್ಥಾನಗಳಿಗೆ ಹೋಲಿಸಿದರೆ 28 ಸ್ಥಾನ ಕಡಿಮೆ ಗಳಿಸಿದೆ. ತಮ್ಮ ಪಕ್ಷದ ಸೋಲಿನ ಕಾರಣವನ್ನು ಹೇಳಿದ ನಿತೀಶ್ ಕುಮಾರ್ ಅವರು ಕೆಲವರು ಮತದಾರರಲ್ಲಿ ಗೊಂದಲವನ್ನು ಮಾಡಲು ಪ್ರಯತ್ನಿಸಿದರು; ಹಾಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ತಮ್ಮ ರಾಜಕೀಯ ವಿರೋಧಿಯನ್ನು ನೇರವಾಗಿ ಹೆಸರಿಸದ ನಿತೀಶ್ ಕುಮಾರ್ ಅವರು ಸ್ಪಷ್ಟವಾಗಿ ಚಿರಾಗ್ ಪಾಸ್ವಾನ್ ಮತ್ತು ಅವರ ಲೋಕ ಜನಶಕ್ತಿ ಪಕ್ಷದ ಬಗ್ಗೆಯೇ ಹೇಳಿರುವುದು ಸ್ಪಷ್ಟವಾಗುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

NDA ಮಿತ್ರ ಪಕ್ಷವೇ ಆಗಿರುವ LJP ವಿರುದ್ದ ಎನ್ಡಿಏ ಕ್ರಮ ಕೈಗೊಳ್ಳುವುದೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿತೀಶ್ ಅವರು ಇದನ್ನು ಬಿಜೆಪಿಯೇ ತೀರ್ಮಾನಿಸಬೇಕು ಎಂದು ಹೇಳಿದರು. ಏಕೆಂದರೆ LJPಯು NDA ಮೈತ್ರಿಕೂಟದಿಂದ ಹೊರ ಬಂದಿದೆ. ಇದಕ್ಕೂ ಮುನ್ನ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಯು ವಕ್ತಾರ ಕೆ ಸಿ ತ್ಯಾಗಿ ಅವರು LJPಯು ಕನಿಷ್ಟ 25 ರಿಂದ 30 ಸ್ಥಾನಗಳಲ್ಲಿ ನಮಗೆ ಬರಬೇಕಾದ ಮತಗಳನ್ನು ವಿಭಜಿಸಿತು. ಇದು ಸ್ಪರ್ದೆ ಮಾಡದಿದ್ದರೆ ನಮಗೆ ಕನಿಷ್ಟ 80 ಸ್ಥಾನಗಳಿಗೂ ಹೆಚ್ಚು ಸ್ಥಾನ ಬರುತಿತ್ತು ಎಂದು ಹೇಳಿದರು.

ಇಲ್ಲಿ ಉದ್ಭವಿಸುವ ಪ್ರಶ್ನೆಗಳೇನೆಂದರೆ ಚಿರಾಗ್ ಪಾಸ್ವಾನ್ ಅವರೇ ಜೆಡಿಯುನ ಮತಗಳಿಕೆಯ ಕುಸಿತಕ್ಕೆ ಕಾರಣರೇ? ಮತದಾರರು ಗೊಂದಲಕ್ಕೀಡಾಗಿ LJP ಅಭ್ಯರ್ಥಿಗಳಿಗೆ ಮತ ನೀಡಿದರೆ? ಒಂದು ವೇಳೆ LJP ಸ್ಪರ್ಧಿಸದಿದ್ದರೆ ಮತದಾರರು ಜೆಡಿಯು ಅಭ್ಯರ್ಥಿಗಳಿಗೆ ಮತ ನೀಡುತಿದ್ದರೆ ಎಂಬುದಾಗಿದೆ. ಆದರೆ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಜೆಡಿಯು ನಾಯಕ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರು ಕುಸಿದಿರುವ ತಮ್ಮ ಜನಪ್ರಿಯತೆ ಮತ್ತು ವಿಫಲ ಆಡಳಿತವನ್ನು ಮರೆ ಮಾಚಲು ಈ ರೀತಿಯ ಆರೋಪ ಮಾಡಿರುವುದು ತಿಳಿಯುತ್ತದೆ.
ಏಕೆಂದರೆ ಕನಿಷ್ಟ 32 ಕ್ಷೇತ್ರಗಳಲ್ಲಿ LJP ಅಭ್ಯರ್ಥಿಗಳು ಜೆಡಿಯು ಅಭ್ಯರ್ಥಿಗಳು ಪರಾಭವಗೊಂಡ ಮತಗಳಿಗಿಂತ ಹೆಚ್ಚು ಮತಗಳನ್ನು ಗಳಿಸಿದ್ದಾರೆ.

ಚುನಾವಣೆಯಲ್ಲಿ ವರದಿಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿದ ಹಿರಿಯ ಪತ್ರಕರ್ತ ಕನ್ಹಯ್ಯ ಭೆಲಾರಿ, ಅವರು ನೀತೀಶ್ ಅವರ ವೈಫಲ್ಯಕ್ಕೆ ಚಿರಾಗ್ ಅವರನ್ನು ದೂಷಿಸುವುದು ಸರಳ ಅಪ್ರಾಮಾಣಿಕತೆ ಎಂದು ಹೇಳುತ್ತಾರೆ. ಕೋವಿಡ್ 19 ಸಂದರ್ಭವನ್ನು ಚೆನ್ನಾಗಿ ನಿರ್ವಹಿಸದಿರುವುದು, 30 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರ ವಾಪಾಸ್ ಬಂದಿರುವುದು, ಆಡಳಿತದ ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕಾರಣದಿಂದ ನಿತೀಶ್ ವಿರೋಧಿ ಮತದಾರರನ್ನು ತಮ್ಮ ಪಕ್ಷ LJP‌ ಗೆ ಮತ ಚಲಾಯಿಸುವಂತೆ ಕೇಳುತಿದ್ದರು. LJPಗೆ ಮತ ಹಾಕಿದವರು ನಿತೀಶ್ ವಿರುದ್ಧ ಮತ ಚಲಾಯಿಸುವ ಧೃಢ ನಿಶ್ಚಯಕ್ಕಿಂತ ಬದಲಿಗೆ ಗೊಂದಲ’ದಿಂದ ಹಾಗೆ ಮಾಡಿದ್ದಾರೆ ಎಂದು ನಂಬಲು ಯಾವುದೇ ಕಾರಣಗಳಿಲ್ಲ ಎಂದು ಅವರು ಹೇಳಿದರು.

ತಮ್ಮ ಪ್ರಚಾರದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರು ತಮ್ಮ ಮಂತ್ರಿ ಸಹೋದ್ಯೋಗಿಯಾಗಿ ತಮ್ಮ ಜೀವನದ ಕೊನೆಯವರೆಗೂ ಇದ್ದರು ಎಂದು ಶ್ಲಾಘಿಸಿದರು. ಆದಾಗ್ಯೂ, ಚಿರಾಗ್ ಅವರ ಬಂಡಾಯದ ಬಗ್ಗೆ ಮೋದಿ ಮೌನ ವಹಿಸಿದ್ದರು. ತನ್ನನ್ನು ತಾನು “ಹನುಮಾನ್” ಎಂದು ಘೋಷಿಸಿಕೊಂಡಿದ್ದ ಚಿರಾಗ್, ಆಡಳಿತ ವಿರೋಧಿ ಮನೋಭಾವದ ಪ್ರಭಾವವನ್ನು ತಗ್ಗಿಸಲು ಕೆಲಸ ಮಾಡಿದ್ದು, ಅದು ನಿರ್ದಿಷ್ಟವಾಗಿ ನಿತೀಶ್ ವಿರುದ್ಧವಾಗಿತ್ತು ಎಂಬುದು ಮೋದಿಯವರ ವಿಶ್ಲೇಷಣೆ ಆಗಿದೆ ಎನ್ನಲಾಗಿದೆ. ಈ ನಡುವೆ ಜೆಡಿಯು LJP ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕೆಂದು NDA ಯನ್ನು ಬಲವಾಗಿ ಒತ್ತಾಯಿಸುವ ಪರಿಸ್ಥಿತಿಯಲ್ಲೂ ಇಲ್ಲ ಏಕೆಂದರೆ ಅದು ವಿಧಾನಸಭೆಯಲ್ಲಿ ಕಡಿಮೆ ಸ್ಥಾನ ಪಡೆದಿದೆ. ಇದರಿಂದಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮೇಲೆ ಒತ್ತಡ ಹೇರಲು ಆಗುತ್ತಿಲ್ಲ .

ಈ ನಡುವೆ ಚಿರಾಗ್ ಅವರ LJP ಪಕ್ಷವು ಸುಮಾರು 25 ಲಕ್ಷ ಮತಗಳನ್ನು ಗಳಿಸಿದೆ. ಚಿರಾಗ್ ಅವರು ಭವಿಷ್ಯದಲ್ಲಿ ಉತ್ತಮ ರಾಜಕೀಯ ಜೀವನವನ್ನು ಹೊಂದಿದ್ದಾರೆ. ಪಕ್ಷವು ದಲಿತರಲ್ಲಿ ಮತ್ತು ವಿಶೇಷವಾಗಿ ಪಾಸ್ವಾನ್ ಜಾತಿಯವರ ಬೆಂಬಲವನ್ನು ಹೊರತುಪಡಿಸಿ, ಈ ಚುನಾವಣೆಯು ಮೇಲ್ಜಾತಿಯ ಗುಂಪುಗಳ ಬೆಂಬಲವನ್ನು ಪಡೆಯಲು ಪಕ್ಷಕ್ಕೆ ಸಾಧ್ಯವಾಗಿದೆ ಎಂಬುದನ್ನು ತೋರಿಸಿದೆ. ಚಿರಾಗ್ ಅವರ ನಿಲುವಿನಲ್ಲಿ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಹೆಜ್ಜೆ ಗುರುತುಗಳನ್ನೆ ಅನುಸರಿಸುವುದು ಮತ್ತು ಮತ್ತು ಜೆಡಿ (ಯು) ಹರಡಿದ ಅಪ ಪ್ರಚಾರಕ್ಕೆ ಕಿವಿಗೊಡದಿರುವುದು ಭವಿಷ್ಯವನ್ನು ಉತ್ತಮಗೊಳಿಸಿದೆ. ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಕಳಪೆ ಸಾಧನೆಯನ್ನು ಮರೆ ಮಾಚಲು ನಿತೀಶ ಕುಮಾರ್ ಉಪಯೋಗಿಸಿದ ತಂತ್ರ ಅಲ್ಪಕಾಲಿಕವಾಗಿದೆ. ಏಕೆಂದರೆ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆ ಈಗಲೂ ಪ್ರಬಲವಾಗಿದೆ. NDA ಶಾಸಕರು ನಿತೀಶ್ ಕುಮಾರ್ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡುವುದು ಸಹಜವಾಗಿದ್ದು ಅವರು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದೂ ಖಚಿತವಾಗಿದೆ.

ಆದರೆ ಅವರ ರಾಜಕೀಯ ಜೀವನವು ವಯಸ್ಸಾದಂತೆ ಮುಗಿಯುತ್ತಾ ಬಂದಿದೆ. ಸೀಮಾಂಚಲ್ನಲ್ಲಿ ನಡೆದ ತಮ್ಮ ಕೊನೆಯ ಚುನಾವಣಾ ರ್ಯಾಲಿಯಲ್ಲಿ ಅವರು ಮತದಾರರಿಗೆ ಹೇಳಿದ್ದು ಹೀಗೆ : “ಯೇ ಮೇರಾ ಆಂಟಿಮ್ ಚುನವ್ ಹೈ (ಇದು ನನ್ನ ಕೊನೆಯ ಚುನಾವಣೆ)”. ನಿತೀಶ್ ಅವರು ಯಾವಾಗಲೂ ಮಾತನಾಡುವ ಮುನ್ನ ಸಾಕಷ್ಟು ಆಲೋಚಿಸಿ ಮಾತಾಡುತ್ತಾರೆ.

Tags: ಜೆಡಿಯುಬಿಹಾರ
Previous Post

ಹೈಕಮಾಂಡ್ ಪಾಲಿಗೆ ಇನ್ನಷ್ಟು ಕಗ್ಗಂಟಾಗುತ್ತಿದೆ ಸಚಿವ ಸಂಪುಟ ಬಿಕ್ಕಟ್ಟು

Next Post

ಮಡಿಕೇರಿ: ಹೈಕೋರ್ಟ್‌ ಮೆಟ್ಟಿಲೇರಿದ ʼಕಸದ ಗುಡ್ಡʼ ಸಮಸ್ಯೆ

Related Posts

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 
Top Story

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 

by Chetan
June 20, 2025
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi) ನಿನ್ನೆ (ಜೂನ್.19) 55ನೇ ವರ್ಷಕ್ಕೆ ಕಾಲಿಟ್ಟಿದ್ದು,ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗೆ  ಅಭಿಮಾನಿಗಳು ತಮ್ಮ...

Read moreDetails
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ಮಡಿಕೇರಿ: ಹೈಕೋರ್ಟ್‌ ಮೆಟ್ಟಿಲೇರಿದ ʼಕಸದ ಗುಡ್ಡʼ ಸಮಸ್ಯೆ

ಮಡಿಕೇರಿ: ಹೈಕೋರ್ಟ್‌ ಮೆಟ್ಟಿಲೇರಿದ ʼಕಸದ ಗುಡ್ಡʼ ಸಮಸ್ಯೆ

Please login to join discussion

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 
Top Story

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

June 20, 2025
ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada