• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೇಶದ ಈರುಳ್ಳಿ ರಫ್ತು ನಿಷೇಧ; ಉದ್ದೇಶಿತ ಕೃಷಿ ಸುಧಾರಣಾ ಮಸೂದೆ ವಿರುದ್ದವಾಗಿದೆಯೇ?

by
September 21, 2020
in ದೇಶ
0
ದೇಶದ ಈರುಳ್ಳಿ ರಫ್ತು ನಿಷೇಧ; ಉದ್ದೇಶಿತ ಕೃಷಿ ಸುಧಾರಣಾ ಮಸೂದೆ ವಿರುದ್ದವಾಗಿದೆಯೇ?
Share on WhatsAppShare on FacebookShare on Telegram

ನಮ್ಮ ದೇಶದ ಪ್ರತೀ ಮನೆಯಲ್ಲಿ ನಿತ್ಯವೂ ಬಳಸುವ ಆಹಾರ ವಸ್ತು ಈರುಳ್ಳಿ ಅಗಿದ್ದು ಇದರ ದರ ಏರಿದರೆ ಗ್ರಾಹಕರು ತತ್ತರಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಈರುಳ್ಳಿ ದರ ಏರಿಕೆ ಚುನಾವಣೆಗಳ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ. ಇದೀಗ ದೇಶದಲ್ಲಿ ಎಲ್ಲೆಡೆ ಈರುಳ್ಳಿ ದರ ಗಗನ ಮುಖಿ ಆಗಿದ್ದು ಇನ್ನೆ ಕೆಲ ವಾರಗಳಲ್ಲೇ ಕೆಜಿಯೊಂದಕ್ಕೆ 80 ರೂಪಾಯಿ ತಲುಪಿದರೂ ಆಶ್ಚರ್ಯವೇನಿಲ್ಲ.

ADVERTISEMENT

ಕಳೆದ ಜೂನ್ 5 ರಂದು ಕೇಂದ್ರ ಸರ್ಕಾರ ಕೋವಿಡ್ 19 ಲಾಕ್ ಡೌನ್ ಸಡಿಲಿಕೆ ಮಾಡಿದ್ದು ಇದರ ಬೆನ್ನಲ್ಲೇ ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯನ್ನು ಘೋಷಿಸಿದೆ. ಈ ಕ್ರಮವು ದೇಶದ ಜನತೆಯಿಂದ ಬೆಂಬಲ ವ್ಯಕ್ತವಾಯಿತು. ಏಕೆಂದರೆ ಈ ಕ್ರಮವು ಅಗತ್ಯ ವಸ್ತು ಕಾಯ್ದೆಯ ಕಠಿಣ ನಿಬಂಧನೆಗಳನ್ನು ಸರಾಗಗೊಳಿಸುವಂತೆ ಸರ್ಕಾರ ನಿರ್ಧರಿಸಿದೆ ಎಂದು ಹೇಳುತ್ತದೆ. ಯುದ್ಧ, ಕ್ಷಾಮ, ಅಸಾಧಾರಣ ಬೆಲೆ ಏರಿಕೆ ಅಥವಾ ಗಂಭೀರ ನೈಸರ್ಗಿಕ ವಿಪತ್ತಿನಂತಹ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಕೇಂದ್ರ ಸರ್ಕಾರವು ಕೆಲವು ಆಹಾರ ಪದಾರ್ಥಗಳ ಸರಬರಾಜನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಇದರ ಅರ್ಥ. ಸಾಮಾನ್ಯ ಪರಿಸ್ಥಿತಿಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆಯ ನಿಯಂತ್ರಣದಲ್ಲಿ ಹಸ್ತಕ್ಷೇಪ ಮಾಡದಿರುವ ನೀತಿ ಹೊಂದಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಯನ್ನು 2020 ರ ಸೆಪ್ಟೆಂಬರ್ 15 ರಂದು ಲೋಕಸಭೆಯು ಅಂಗೀಕರಿಸಿತು. ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಹಲವಾರು ಪಕ್ಷಗಳಿಗೆ ಸೇರಿದ ಸದಸ್ಯರು ತಿದ್ದುಪಡಿ ಮಸೂದೆಯನ್ನು ವಿರೋದಿಸಿದರಲ್ಲದೆ ಹೊರಬಂದು ಕೃಷಿ ಮಾರುಕಟ್ಟೆಗಳನ್ನು ಖಾಸಗಿ ನಿಯಂತ್ರಣಕ್ಕೆ ಒಪ್ಪಿಸಲಾಗಿದೆ ಎಂದು ಆರೋಪಿಸಿದರು ಮತ್ತು ರಫ್ತು ನಿರ್ಬಂಧವನ್ನೂ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವರು ಈ ತಿದ್ದುಪಡಿಯು ಹೆಚ್ಚಿನ ಸ್ಪರ್ಧೆಯನ್ನು ತರುವ ಮೂಲಕ ರೈತರಿಗೆ ಪ್ರಯೋಜನವನ್ನು ಆಗುತ್ತದೆ ಮತ್ತು ಇದು ಸುಗ್ಗಿಯ ನಂತರದ ಹೂಡಿಕೆಯನ್ನು ಕೂಡ ಆಕರ್ಷಿಸಲಿದೆ ಎಂದರು . ತಿದ್ದುಪಡಿ ಕಾಯ್ದೆಯ ಮಂಡನೆಗೂ ಕೇವಲ ಒಂದು ದಿನ ಮೊದಲು ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧವನ್ನು ಹೇರಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬೇಗನೆ ಹಾಳಾಗುವ ವಸ್ತುಗಳ ಚಿಲ್ಲರೆ ಬೆಲೆಯಲ್ಲಿ ಕಳೆದ 12 ತಿಂಗಳ ಅವಧಿಯಲ್ಲಿ ಶೇಕಡಾ 100 ಹೆಚ್ಚಳವಾಧರೆ ಮತ್ತು ಬೇಗನೆ ಹಾಳಾಗದ ವಸ್ತುಗಳ ಕಳೆದ 5 ವರ್ಷಗಳ ಸರಾಸರಿ ಬೆಲೆಯಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾದರೆ ಮಾತ್ರ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸಲು ತಿದ್ದುಪಡಿ ಕಾಯ್ದೆ ಅನುಮತಿಸುತ್ತದೆ. ವಸ್ತುಗಳ ದರ ಈ ಮಿತಿಯನ್ನು ತಲುಪಿದರೂ ಮತ್ತು ದಾಸ್ತಾನು ಮಿತಿಗಳನ್ನು ವಿಧಿಸಿದರೂ ಸಹ, ಅವು ಯಾವುದೇ ಕೃಷಿ ಉತ್ಪನ್ನಗಳ ಸಂಸ್ಕರಣೆ ಅಥವಾ ಮೌಲ್ಯ ಸರಪಳಿಗೆ ಅನ್ವಯಿಸುವಂತಿಲ್ಲ. ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಿದೆ. . ಆದಾಗ್ಯೂ, ಸಂಸ್ಕರಣಾ ಘಟಕದ ಸ್ಥಾಪಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸ್ಟಾಕ್ ಅನ್ನು ಇರಿಸಿಕೊಳ್ಳಲು ಸಂಸ್ಕರಣೆಗಾರರಿಗೆ ಅನುಮತಿ ಇಲ್ಲ.

ಅದರಂತೆಯೇ ರಫ್ತುದಾರರಿಗೆ ಸ್ಟಾಕ್ ಹೊಂದುವ ಮಿತಿಯಿಂದ ವಿನಾಯಿತಿ ನೀಡಬೇಕಿತ್ತು. ಈಗ ಈರುಳ್ಳಿ ರಫ್ತು ನಿಷೇಧಕ್ಕೆ ಸಂಭಂದಿಸಿದಂತೆ ಮಹಾರಾಷ್ಟ್ರದ ಅತೀ ದೊಡ್ಡ ಉತ್ಪಾದನಾ ಜಿಲ್ಲೆಯಾದ ನಾಸಿಕ್ ಮತ್ತು ಅತೀ ದೊಡ್ಡ ಬಳಕೆ ಕೇಂದ್ರವಾದ ದೆಹಲಿಯ ಉದಾಹರಣೆಯನ್ನು ತೆಗೆದುಕೊಳ್ಳುವ ಮೂಲಕ ನಾವು ಸರ್ಕಾರದ ನಿಲುವನ್ನು ವಿಶ್ಲೇಷಿಸಬೇಕಿದೆ. ಕಳೆದ 12 ತಿಂಗಳಲ್ಲಿ, ದೆಹಲಿಯಲ್ಲಿ ಈರುಳ್ಳಿಯ ಚಿಲ್ಲರೆ ಬೆಲೆ 2019 ರ ಸೆಪ್ಟೆಂಬರ್ನಲ್ಲಿ ಪ್ರತಿ ಕೆಜಿಗೆ 58 ರೂ.ನಿಂದ 2019 ರ ಡಿಸೆಂಬರ್ನಲ್ಲಿ 100 ರೂ.ಗೆ ಏರಿದೆ. ನಂತರ ಅವು 2020 ರ ಮೇ ತಿಂಗಳಲ್ಲಿ ಪ್ರತಿ ಕೆ.ಜಿ.ಗೆ 21 ರೂ.ಗೆ ಇಳಿದವು. ಸರಾಸರಿ ತಿಂಗಳ ಅಂತ್ಯ ಹಿಂದಿನ 12 ತಿಂಗಳುಗಳಲ್ಲಿ (ಸೆಪ್ಟೆಂಬರ್ 2019 ರಿಂದ ಆಗಸ್ಟ್ 2020 ರವರೆಗೆ) ಚಿಲ್ಲರೆ ಬೆಲೆ ಪ್ರತಿ ಕೆ.ಜಿ.ಗೆ 44.83 ರೂ ಆಗಿತ್ತು. ಸೆಪ್ಟೆಂಬರ್ 1 ರಿಂದ 2020 ರ ಸೆಪ್ಟೆಂಬರ್ 14 ರವರೆಗೆ ದೆಹಲಿಯಲ್ಲಿ ಬೆಲೆ ಕೆಜಿಗೆ 25 ರೂ.ನಿಂದ 64 ಕೆ.ಜಿ.ಗೆ ಏರಿದೆ. ಆದರೆ ರಫ್ತು ನಿಷೇಧ ಹೇರಿದಾಗ, ದೆಹಲಿಯ ಚಿಲ್ಲರೆ ಬೆಲೆ ಹಿಂದಿನ 12 ತಿಂಗಳಲ್ಲಿ ಸರಾಸರಿ ಚಿಲ್ಲರೆ ಬೆಲೆಗಿಂತ ಕಡಿಮೆಯಿತ್ತು ಎಂಬುದು ಸ್ಪಷ್ಟವಾಗುತ್ತದೆ. ದೆಹಲಿಯ ಚಿಲ್ಲರೆ ಬೆಲೆಯ ಐದು ವರ್ಷಗಳ ಸರಾಸರಿ (ಸೆಪ್ಟೆಂಬರ್ 2015 ರಿಂದ ಆಗಸ್ಟ್ 2020) ಪ್ರತಿ ಕೆ.ಜಿ.ಗೆ 31.71 ರೂ. ಹೀಗಾಗಿ, 2020 ರ ಆಗಸ್ಟ್ 31 ರಂದು ಪ್ರತಿ ಕೆಜಿಗೆ 25 ರೂ.ಗಳ ಬೆಲೆ ಹಿಂದಿನ ಐದು ವರ್ಷಗಳ ಸರಾಸರಿ ಬೆಲೆಗಿಂತ ಕಡಿಮೆಯಾಗಿದೆ.

ಈರುಳ್ಳಿ ಉತ್ಪಾದಿಸುವ ಜಿಲ್ಲೆಯಾದ ನಾಸಿಕ್ನಲ್ಲಿ ಸಗಟು ದರವನ್ನು ನೋಡಿದಾಗ ಈ ಮಾರುಕಟ್ಟೆ ಬೆಲೆಗಳು ರೈತರು ಪಡೆದ ಬೆಲೆಗಳನ್ನು ತಿಳಿಸುತ್ತವೆ. ಇಲ್ಲಿ ಈರುಳ್ಳಿ ಬೆಲೆ 2019 ರ ಸೆಪ್ಟೆಂಬರ್ನಲ್ಲಿ ಪ್ರತಿ ಕೆ.ಜಿ.ಗೆ 32.67 ರೂ. ಆಗಿತ್ತು. ಅವು ನವೆಂಬರ್ನಲ್ಲಿ ಪ್ರತಿ ಕೆ.ಜಿ.ಗೆ 51.53 ರೂ.ಗೆ ಏರಿತು ಮತ್ತು ನಂತರ ಜುಲೈ 2020 ರಲ್ಲಿ ಪ್ರತಿ ಕೆ.ಜಿ.ಗೆ 5.47 ರೂ.ಗೆ ಕುಸಿಯಿತು. ಲಾಕ್ ಡೌನ್ ಸಂದರ್ಭದಲ್ಲಿ ರೈತರಿಗೆ . ಪ್ರತಿ ಕೆ.ಜಿ.ಗೆ 7 ರಿಂದ 8 ರೂಗಳಷ್ಟು ಧಾರಣೆ ಸಿಕ್ಕಿದೆ. . ಹಿಂದಿನ 12 ತಿಂಗಳುಗಳಲ್ಲಿ, ಸೆಪ್ಟೆಂಬರ್ 2019 ರಿಂದ ಆಗಸ್ಟ್ 2020 ರ ನಡುವೆ ಸರಾಸರಿ ಕೆ.ಜಿ.ಗೆ 21.05 ರೂ. ಸಿಕ್ಕಿದ್ದರೆ ಸೆಪ್ಟೆಂಬರ್ 1 ರಿಂದ 2020 ರ ಸೆಪ್ಟೆಂಬರ್ 14 ರವರೆಗೆ ನಾಸಿಕ್ನಲ್ಲಿ ಸಗಟು ಬೆಲೆ ಪ್ರತಿ ಕೆ.ಜಿ.ಗೆ 13.33 ರೂ.ನಿಂದ 18.67 ರೂ.ಗೆ ಏರಿತು. ಹಿಂದಿನ 5 ವರ್ಷಗಳಲ್ಲಿ (ಸೆಪ್ಟೆಂಬರ್ 2015 ರಿಂದ ಆಗಸ್ಟ್ 2020 ರವರೆಗೆ) ಸರಾಸರಿ ಸಗಟು ಬೆಲೆ ಪ್ರತಿ ಕೆ.ಜಿ.ಗೆ ಕೇವಲ 12.09 ರೂ. ಆದ್ದರಿಂದ, ಸೆಪ್ಟೆಂಬರ್ 14, 2020 ರಂದು, ರಫ್ತು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಾಗ, ನಾಸಿಕ್ನಲ್ಲಿನ ಸಗಟು ಬೆಲೆ ಕಳೆದ ಐದು ವರ್ಷಗಳಲ್ಲಿ ಸರಾಸರಿ ಸಗಟು ಬೆಲೆಯ 54.4% ಆಗಿತ್ತು. ಆದಾಗ್ಯೂ, ತೋಟಗಾರಿಕಾ ಉತ್ಪನ್ನಗಳ ಚಿಲ್ಲರೆ ಬೆಲೆ ಹಿಂದಿನ 12 ತಿಂಗಳುಗಳಲ್ಲಿ ಅಥವಾ ಹಿಂದಿನ ಐದು ವರ್ಷಗಳಲ್ಲಿ, ಯಾವುದು ಕಡಿಮೆ ಇದ್ದರೂ, ಬೆಲೆ ನಿಯಂತ್ರಿಸಲು ಈ ಸುಗ್ರೀವಾಜ್ಞೆಯು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಆದ್ದರಿಂದ, ಈರುಳ್ಳಿಯ ಚಿಲ್ಲರೆ ಬೆಲೆಯು 2020 ರ ಅಗತ್ಯ ಸರಕುಗಳ ತಿದ್ದುಪಡಿ ಸುಗ್ರೀವಾಜ್ಞೆಗೆ ಅನುಗುಣವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಇದಕ್ಕಾಗಿಯೇ 1992 ರ ವಿದೇಶಿ ವ್ಯಾಪಾರ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ಸಹಾಯ ಮಾಡುವ ಮೂಲಕ ಈರುಳ್ಳಿ ರಫ್ತು ಮಾಡುವುದನ್ನು ಸರ್ಕಾರ ನಿಷೇಧಿಸಿತು. ದೇಶದ ಮೂರನೇ ಒಂದು ಭಾಗದಷ್ಟು ಈರುಳ್ಳಿಯನ್ನು ಮಹಾರಾಷ್ಟ್ರ ಉತ್ಪಾದಿಸುತ್ತದೆ. ಇದು 2019-20ರಲ್ಲಿ 117 ಲಕ್ಷ ಟನ್ ಈರುಳ್ಳಿ ಉತ್ಪಾದಿಸಿದ್ದು, . ಇದರಲ್ಲಿ ಸುಮಾರು 100 ಲಕ್ಷ ಟನ್ ರಬಿ ಬೆಳೆಯಲ್ಲಿ ಉತ್ಪಾದನೆಯಾಗುತ್ತದೆ ಮತ್ತು ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಬೇಡಿಕೆಯನ್ನು ಪೂರೈಸಲು ಇದನ್ನು ಸಂಗ್ರಹಿಸಲಾಗುತ್ತದೆ. ಈರುಳ್ಳಿ ಶೇಖರಣಾ ಸಾಮರ್ಥ್ಯದ ಸೃಷ್ಟಿಗೆ ಸರ್ಕಾರ ರೈತರಿಗೆ ಅನುದಾನ ನೀಡುತ್ತಿದ್ದು, ಸಬ್ಸಿಡಿ ಯೋಜನೆಗಳಡಿ ಸುಮಾರು 15 ಲಕ್ಷ ಟನ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. . ವ್ಯಾಪಾರಿಗಳು ಮತ್ತು ರೈತರು ಇನ್ನೂ 8 ಲಕ್ಷ ಟನ್ ಸಂಗ್ರಹವನ್ನು ಹೊಂದಿದ್ದಾರೆ. ರಬಿ ಈರುಳ್ಳಿಯನ್ನು 4-6 ತಿಂಗಳುಗಳವರೆಗೆ ಅದೂ ಮಳೆಗಾಲದಲ್ಲಿ ಸುರಕ್ಷಿತವಾಗಿ ಶೇಖರಿಸಿಡಲು 22 ಲಕ್ಷ ಟನ್ ಸಾಮರ್ಥ್ಯವು ಸಾಕಷ್ಟು ಅಸಮರ್ಪಕವಾಗಿದೆ ಎಂಬುದು ಸ್ಪಷ್ಟವಾಗಿದೆ.

ಈ ವರ್ಷ ಕೂಡ ಆಂಧ್ರ , ಕರ್ನಾಟಕ, ಗುಜರಾತ್, ಮತ್ತು ಮಹಾರಾಷ್ಟ್ರದಲ್ಲಿ ಆಗಸ್ಟ್ನಲ್ಲಿ ಭಾರಿ ಮಳೆಯಿಂದಾಗಿ ತಡವಾದ ಖಾರಿಫ್ ಬೆಳೆಗಳು ಹಾನಿಗೊಳಗಾದವು. ಸಂಗ್ರಹಿಸಿದ ಈರುಳ್ಳಿಗೂ ಹಾನಿಯಾಗಿದೆ. ಸೆಪ್ಟೆಂಬರ್ ಮೊದಲ ಹದಿನೈದು ದಿನಗಳಲ್ಲಿ ಬೆಲೆ ಹೆಚ್ಚಳಕ್ಕೆ ಇದು ಕಾರಣವಾಗಿತ್ತು. ಲಾಕ್ ಡೌನ್ ಸಮಯದಲ್ಲಿ ರೈತರು ತಮ್ಮ ನಷ್ಟವನ್ನು ಶೇಖರಣಾ ನಷ್ಟ ಮತ್ತು ಕಡಿಮೆ ಬೆಲೆಯಿಂದ ಮರುಪಡೆಯಲು ಸಾಧ್ಯವಾಗುವ ಸಮಯ ಇದು. ಭಾರತದ ಈರುಳ್ಳಿ ರಫ್ತಿಗೆ ಮಹಾರಾಷ್ಟ್ರದ ಕೊಡುಗೆ ಸುಮಾರು 80% ಮತ್ತು ಆದ್ದರಿಂದ ಹಠಾತ್ ನಿಷೇಧದಿಂದ ಈರುಳ್ಳಿ ಬೆಳೆದ ರೈತರು ಹೆಚ್ಚು ತೊಂದರೆಗೀಡಾಗಿದ್ದಾರೆ. ಮೂರು ಸುಗ್ರೀವಾಜ್ಞೆಗಳ ಮೂಲಕ ಭಾರತದ ಕೃಷಿ ಕ್ಷೇತ್ರವನ್ನು ಹೆಚ್ಚು ಸ್ಪರ್ಧೆಗೆ ತೆರೆದುಕೊಳ್ಳುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚು ಧಾರಣೆ ಪಡೆಯುವ ಆಯ್ಕೆಗಳನ್ನು ಹೊಂದಿರುತ್ತಾರೆ. ಎಪಿಎಂಸಿಗಳ ಒಳಗೆ ಮತ್ತು ಹೊರಗೆ ತೆರಿಗೆ ವಿಧಿಸುವ ವ್ಯತ್ಯಾಸಗಳು ಹಸಿರು ಕ್ರಾಂತಿಯ ಅವಧಿಯಲ್ಲಿ ನಿರ್ಮಿಸಲಾದ ಮಂಡಿ ಪರಿಸರ ವ್ಯವಸ್ಥೆಯನ್ನು ನಾಶಮಾಡುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಅಗತ್ಯ ಸರಕುಗಳು (ತಿದ್ದುಪಡಿ ಆರ್ಡಿನೆನ್ಸ್, 2020) ಭಾರತದ ಕೃಷಿ ನೀತಿ ಆಡಳಿತಕ್ಕೆ ಸ್ಥಿರತೆ ಮತ್ತು ಧೃಡತೆಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ದರಿಂದ, ಈ ಕಾನೂನು ರೂಪಿಸುವ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸುವ ಮೊದಲೇ, ಈರುಳ್ಳಿ ರಫ್ತು ಮೇಲಿನ ಈ ನಿಷೇಧವು ರೈತರು, ಹೆಚ್ಚಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಆಹಾರ ಹಣದುಬ್ಬರವನ್ನು ನಿಯಂತ್ರಿಸುವ ಹೊಣೆಯಲ್ಲಿಯೂ ಪಾಲುದಾರರಾಗಬೇಕಿದೆ ಎಂದು ಸ್ಪಷ್ಟವಾಗಿದೆ. ಡಾ.ಅಶೋಕ್ ಗುಲಾಟಿ ನೇತೃತ್ವದ ಒಇಸಿಡಿ-ಐಸಿಆರ್ಐಆರ್ ಅಧ್ಯಯನವು ರಫ್ತು ನಿಷೇಧ, ಕನಿಷ್ಠ ರಫ್ತು ಬೆಲೆಗಳು, ಸ್ಟಾಕ್ ಮಿತಿಗಳು, ಚಲನೆಯ ನಿರ್ಬಂಧಗಳು ಇತ್ಯಾದಿ ರೈತರ ಮೇಲೆ ಸೂಚ್ಯ ತೆರಿಗೆ ಯ ಒಂದು ರೂಪವಾಗಿದೆ ಎಂದು ದಾಖಲಿಸಿದೆ. 2000-01 ರಿಂದ 2016-17ರ ಅವಧಿಯಲ್ಲಿ, ಅಂತಹ ‘ತೆರಿಗೆ’ ವಾರ್ಷಿಕ 2.65 ಲಕ್ಷ ಕೋಟಿ ರೂ. (2017-18 ಬೆಲೆಯಲ್ಲಿ) ಎಂದು ಅಂದಾಜಿಸಲಾಗಿದೆ. ಹೀಗಾಗಿ, ಹದಿನೇಳು ವರ್ಷಗಳ ಅವಧಿಗೆ ರೈತರಿಗೆ 45 ಲಕ್ಷ ಕೋಟಿ ರೂ. ತೆರಿಗೆ ವಿಧಿಸಲಾಗಿದ್ದು ಬೇರೆ ಯಾವುದೇ ದೇಶವು ತನ್ನ ರೈತರಿಗೆ ಈ ಮಟ್ಟಿಗೆ ತೆರಿಗೆ ವಿಧಿಸಿಲ್ಲ ಎಂದು ಅಧ್ಯಯನವು ತಿಳಿಸಿದೆ. ಸಂಸತ್ತಿನ ಮೊದಲು ಮೂರು ಕೃಷಿ ಮಸೂದೆಗಳು ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ದೊರಕಿಸುವ ಉದ್ದೇಶ ಹೊಂದಿವೆ ಎಂದು ಹೇಳಲಾಗಿದೆ. ಆದಾಗ್ಯೂ, ಈರುಳ್ಳಿ ರಫ್ತು ನಿಷೇಧದಂತಹ ಕ್ರಮಗಳು ಮಸೂದೆಯ ಉದ್ದೇಶಕ್ಕೆ ವಿರುದ್ದವಾಗಿರುವುದು ಸ್ಪಷ್ಟವಾಗಿದೆ.

Previous Post

ವಿಧಾನ ಮಂಡಲ ಅಧಿವೇಶನ: ಕರೊನಾ ನೆಪದಲ್ಲಿ ಪಲಾಯನ ಮಾಡಲು ಯತ್ನಿಸುತ್ತಿರುವ BSY, ಬಿಡಲೊಲ್ಲದ ಸಿದ್ದರಾಮಯ್ಯ

Next Post

APMC ನಾಶವಾದರೆ ಪೂರ್ಣ ಕೃಷಿಕ್ಷೇತ್ರ ಮಣ್ಣುಪಾಲು- ಸಿದ್ದರಾಮಯ್ಯ

Related Posts

ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ
Top Story

ದುರಂತದ ಮಧ್ಯೆಯೂ ರಾಜಕೀಯ! ವಯನಾಡ್‌ನಿಂದ ಮಣಿಪುರದವರೆಗೆ ವಾಗ್ಯುದ್ಧ

by ಪ್ರತಿಧ್ವನಿ
July 14, 2026
0

ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಯಾವುದೇ ಘಟನೆ ನಡೆದರೂ ಅದು ಕೊನೆಯದಾಗಿ ಪಡೆದುಕೊಳ್ಳುವುದು ರಾಜಕೀಯ ಸ್ವರೂಪವನ್ನು. ಅಭಿವೃದ್ಧಿಯಾಗಲಿ, ಹಗರಣವಾಗಲಿ, ದುರ್ಘಟನೆಯಾಗಲಿ ಏನೇ ನಡೆದರೂ ಕೂಡ ಕೊನೆಯಲ್ಲಿ ರಾಜಕೀಯ ಪಕ್ಷಗಳ...

Read moreDetails
ಮತದಾನ–ಶಾಸನಬದ್ಧ ಹಕ್ಕು ಮಾತ್ರ ಆಗಿರಕೂಡದು

ಮತದಾನ–ಶಾಸನಬದ್ಧ ಹಕ್ಕು ಮಾತ್ರ ಆಗಿರಕೂಡದು

July 14, 2026
ಲೈಂಗಿ** ಕಿರುಕುಳ ಕೇಸ್‌: ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ಶಾಕ್

ಲೈಂಗಿ** ಕಿರುಕುಳ ಕೇಸ್‌: ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ಶಾಕ್

July 13, 2026
ವಿಯೆಟ್ನಾಂನಲ್ಲಿ ಬೋಟ್ ದುರಂತ: 15 ಭಾರತೀಯ ಪ್ರವಾಸಿಗರ ದುರ್ಮ**

ವಿಯೆಟ್ನಾಂನಲ್ಲಿ ಬೋಟ್ ದುರಂತ: 15 ಭಾರತೀಯ ಪ್ರವಾಸಿಗರ ದುರ್ಮ**

July 12, 2026
Boat Tragedy In Vietnam

BREAKING NEWS : ದೋಣಿ ಮುಳುಗಿ 15 ಭಾರತೀಯರ ದುರ್ಮರಣ : ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ್ದವರು ಮಸಣಕ್ಕೆ..

July 11, 2026
Next Post
APMC ನಾಶವಾದರೆ ಪೂರ್ಣ ಕೃಷಿಕ್ಷೇತ್ರ ಮಣ್ಣುಪಾಲು- ಸಿದ್ದರಾಮಯ್ಯ

APMC ನಾಶವಾದರೆ ಪೂರ್ಣ ಕೃಷಿಕ್ಷೇತ್ರ ಮಣ್ಣುಪಾಲು- ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada