• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮುಸ್ಲಿಂ ರಾಮಭಕ್ತ ಅಯೋಧ್ಯೆಗೆ ಕಾಲಿಡದಂತೆ ಆಗ್ರಹಿಸಿ ಆರಂಭವಾಯ್ತು ಟ್ವಿಟರ್ ಟ್ರೆಂಡ್

by
July 28, 2020
in ದೇಶ
0
ಮುಸ್ಲಿಂ ರಾಮಭಕ್ತ ಅಯೋಧ್ಯೆಗೆ ಕಾಲಿಡದಂತೆ ಆಗ್ರಹಿಸಿ ಆರಂಭವಾಯ್ತು ಟ್ವಿಟರ್ ಟ್ರೆಂಡ್
Share on WhatsAppShare on FacebookShare on Telegram

ಶತಮಾನಗಳಷ್ಟು ಹಳೆಯದಾದ ಬಾಬರಿ ಮಸೀದಿ ಕಟ್ಟಿರುವುದು ಸಹಸ್ರಮಾನಗಳ ಹಿಂದಿನ ಶ್ರೀರಾಮನ ಜನ್ಮಭೂಮಿಯ ಮೇಲೆಯೆಂಬ ವಿವಾದಕ್ಕೆ 18 ನೇ ಶತಮಾನಕ್ಕಿಂತಲೂ ಹಿಂದಿನ ಇತಿಹಾಸವಿದೆ. ಶ್ರೀರಾಮ ಜನ್ಮಭೂಮಿ ವಿಚಾರದಲ್ಲಿ ಕೋಮು ಗಲಭೆ ನಡೆದಿದ್ದು 1853ರಲ್ಲಿ ಎಂದು ಕೆಲವು ಉಲ್ಲೇಖಗಳಿವೆ. ಅಯೋಧ್ಯೆಯಲ್ಲಿ 1853 ರಲ್ಲಿ ಹಿಂದೂ ಮುಸ್ಲಿಮರೊಳಗೆ ಕೋಮುಗಲಭೆ ನಡೆಯಲು ಕಾರಣವಾದ ಬಾಬರ್‌ ಮಸೀದಿಯನ್ನು ಬಾಬರ್‌ ಸೂಚನೆ ಮೇರೆಗೆ ಕಟ್ಟಿಸಿದ್ದು, ಆಗಿನ ಮೊಘಲ್‌ ದಂಡಾಧಿಕಾರಿ ಮೀರ್‌ ಬಖಿ.

ಈ ರಾಮಜನ್ಮಭೂಮಿ ವಿವಾದ, ಸುಮಾರು ಎರಡುವರೆ ಶತಮಾನಗಳ ಕಾಲ ಭಾರತದಲ್ಲಿ ಹಲವಾರು ಕೋಮುಗಲಭೆಗಳಿಗೆ ಕಾರಣೀಭೂತವಾಗಿದ್ದಲ್ಲದೆ, ಮುಖ್ಯವಾಗಿ ಬಿಜೆಪಿ ರಾಷ್ಟ್ರವ್ಯಾಪಿ ಹರಡಲು ಮುಖ್ಯ ಕಾರಣಗಳಲ್ಲೊಂದಾಯ್ತು. 1992 ರಲ್ಲಿ ಅಡ್ವಾಣಿ ನೇತೃತ್ವದಲ್ಲಿ ನಡೆದ ರಥಯಾತ್ರೆ, ಅದರ ಹಿನ್ನಲೆಯಲ್ಲಿ ನಡೆದ ಬಾಬರೀ ಮಸೀದಿ ಧ್ವಂಸ ಬಳಿಕವಂತೂ ದೇಶವಿಡೀ ಹೊತ್ತು ಉರಿಯಿತು. ಉಭಯ ಧರ್ಮೀಯರಲ್ಲಿ ಆಗಾಧವಾದ ಬಿರುಕಿಗೆ ಕಾರಣವಾಯಿತು.

ಧಾರ್ಮಿಕ ಪ್ರತಿಷ್ಟೆಯ ಹಾಗೂ ಅಸ್ತಿತ್ವದ ಪ್ರಶ್ನೆಯಾಗಿ ಉಳಿದು ಬಿಟ್ಟ ಬಾಬರಿ ಪ್ರಕರಣದಲ್ಲಿ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಹೆಚ್ಚಿನ ಒತ್ತು ನೀಡಿ ರಾಮಮಂದಿರ ಮಾಡಲು ಸುಪ್ರೀಂ ಕೋರ್ಟ್‌ ತೀರ್ಪು ಹೊರಡಿಸಿತು. ಅಲ್ಲಿ ರಾಮಮಂದಿರ ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಉತ್ಸುಕತೆ ತೋರುತ್ತಿದೆ. ಆಗಸ್ಟ್‌ 5 ಕ್ಕೆ ಭೂಮಿ ಪೂಜೆಯೂ ನಡೆಯಲಿದೆ.

ಸದ್ಯಕ್ಕೆ ಸಾಕಷ್ಟು ಸುದ್ದಿಯಲ್ಲಿರುವಂತಹ ರಾಮ ಜನ್ಮಭೂಮಿಯನ್ನು ಪೂಜ್ಯ ಭಾವದಿಂದ ಕಾಣುವಂತಹ ಮುಸ್ಲಿಂ ವ್ಯಕ್ತಿಯೊಬ್ಬರಿದ್ದಾರೆ ಅವರು ಶ್ರೀರಾಮನ ಭಕ್ತ ಕೂಡಾ. ಹೆಸರು ಮಹಮದ್‌ ಫೈಝ್‌ ಖಾನ್.‌ ಅವರೇ ಹೇಳುವಂತೆ ಅವರೊಬ್ಬ ಅಪ್ರತಿಮ ರಾಮಭಕ್ತ. ಚಂಡೀಘಡ್‌ ಚಾಂಧ್‌ಖುರಿಯಿಂದ (ಶ್ರೀರಾಮನ ತಾಯಿ ಕೌಸಲ್ಯೆ ಗ್ರಾಮ) ಮಣ್ಣನ್ನು ಅಯೋಧ್ಯೆಯ ರಾಮಮಂದಿರ ಭೂಮಿಪೂಜೆಗೆ ಭಕ್ತಿಯಿಂದ ಸಾಗಿಸುತ್ತಿದ್ದಾರೆ. ಅದೂ 800 ಕಿಮೀ. ಬರಿಗಾಲಿನಲ್ಲೇ ನಡೆದು.

ಫೈಝ್‌ ಖಾನ್‌ರಿಗೆ ಬೆಂಬಲಕೋರಿದ ಹಾರೈಕೆ

ಶ್ರೀರಾಮನನ್ನು “ಇಮಾಮ್‌-ಎ-ಹಿಂದ್”‌(ಭಾರತದ ನಾಯಕ) ಎಂದು ಸಂಬೋಧಿಸಿದ ಅವಿಭಜಿತ ಭಾರತದ ಖ್ಯಾತ ಉರ್ದು ಕವಿ ಅಲ್ಲಾಮ ಇಕ್ಬಾಲ್‌ರ (ಪಾಕಿಸ್ತಾನದ ರಾಷ್ಟ್ರೀಯ ಕವಿ) ಕವಿತೆ ಸಾಲೊಂದನ್ನು ಉಲ್ಲೇಖಿಸಿ, ನಾವು ಮೂಲದಲ್ಲಿ ಹಿಂದೂಗಳು, ಶ್ರೀರಾಮ ನಮ್ಮ ಪೂರ್ವಜ ಎಂದು ತಾನು ನಂಬುವುದಾಗಿ ಫೈಝ್‌ ಖಾನ್‌ ANI ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಅಲ್ಲದೆ 15,000 ಕಿಮೀ ನಡೆದು ಹಲವು ದೇವಸ್ಥಾನಗಳಿಗೆ ಭೇಟಿ ನೀಡಿರುವುದಾಗಿಯೂ, ಅಲ್ಲೇ ತಂಗಿರುವುದಾಗಿಯೂ ಎಲ್ಲೂ ತನ್ನ ಧರ್ಮದ ಕಾರಣದಿಂದ, ಹೆಸರಿನ ಕಾರಣದಿಂದ ವಿರೋಧ ಎದುರಿಸಿಲ್ಲ ಎಂದು ಹೇಳಿದ್ದಾರೆ.

ಫೈಝ್‌ರ ಶ್ರೀ ರಾಮನ ಮೇಲಿರುವ ಭಕ್ತಿಗೆ ಹಲವು ರಾಮಭಕ್ತರು ಅಭಿನಂದನೆ ಸಲ್ಲಿಸಿದ್ದಾರೆ, ಶ್ಲಾಘಿಸಿದ್ದಾರೆ. ಅಯೋಧ್ಯೆಗೆ ಸ್ವಾಗತಿಸಿದ್ದಾರೆ. ಹಲವು ರಾಷ್ಟ್ರೀಯ ಸುದ್ದಿಸಂಸ್ಥೆಗಳು ಇವರ ಕುರಿತು ವರದಿ ಕೂಡಾ ಪ್ರಸಾರ ಮಾಡಿವೆ. ಪೈಝ್‌ಖಾನ್‌ರಿಗೆ ನಿನ್ನೆಯವರೆಗೂ ದೊರೆಯುತ್ತಿದ್ದ ಅಭೂತಪೂರ್ವ ಬೆಂಬಲಗಳೆಲ್ಲವೂ ಏಕಾಏಕಿ ನಿಂತಿದೆ. ಇಂದು ಅವರ ಅಯೋಧ್ಯೆ ಭೇಟಿಯ ಬೆಂಬಲಕ್ಕಿಂತಲೂ ವಿರೋಧ ಹೆಚ್ಚಾಗುತ್ತಿದೆ.

ಫೈಝ್‌ ಖಾನ್‌ ರಾಮಮಂದಿರ ಭೂಮಿಪೂಜೆಗೆ ಬರಬಾರದೆಂದು ಟ್ವೀಟರಿನಲ್ಲಿ ಟ್ರೆಂಡ್‌ ಆಗುತ್ತಿದೆ. #GOBACKFAIZKHAN ಎಂಬ ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಸುಮಾರು ಒಂದು ಲಕ್ಷ ಟ್ವೀಟ್‌ಗಳು ಟ್ವಿಟರಿನಲ್ಲಿ ಟ್ರೆಂಡ್‌ ಆಗಿವೆ. ಅಯೋಧ್ಯೆಗೆ ಫೈಝ್‌ಖಾನ್‌ ಬರಬಾರದೆಂದೂ, ಹಿಂತಿರುಗಿ ಹೋಗಬೇಕೆಂದೂ ಇವರು ಬಯಸುತ್ತಿದ್ದಾರೆ. ರಾಮಜನ್ಮಭೂಮಿಗೆ ರಾಮನ ತಾಯಿ ಕೌಸಲ್ಯೆ ತವರಿನ ಮಣ್ಣು ಹೊತ್ತುಕೊಂಡು ಅದಮ್ಯ ಉತ್ಸಾಹದೊಂದಿಗೆ 800 ಕಿಮೀ ಕಾಲ್ನಡಿಗೆ ಯಾತ್ರೆ ಆರಂಭಿಸಿದ ಫೈಝ್‌ ಖಾನ್‌ ರಾಮಮಂದಿರ ಭೂಮಿಪೂಜೆಯಲ್ಲಿ ಭಾಗಿಯಾಗುತ್ತಾರಾ? ವಿರೋಧಗಳಿಗೆ ಹೆದರಿ ಹಿಂತಿರುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

#GoBackFaizKhan
Crores of Hindus sacrificed their lives to protect the Land of Ram Janmabhumi from Muslim.
Hindus have been fighting legally in court for their Lord's.
No Muslim sacrificed their life for that. pic.twitter.com/0mVlZwhXM2

— Shivam (@SRsweet11) July 28, 2020


ADVERTISEMENT
Tags: ಅಯೋಧ್ಯೆಬಾಬರಿ ಮಸೀದಿರಾಮಜನ್ಮಭೂಮಿರಾಮಭೂಮಿರಾಮಮಂದಿರ
Previous Post

ಸದಾವತ್ಸಲೆ ಜಪ ಮಾಡುತ್ತಲೇ ಪರಿಸರ ನಾಶಕ್ಕೆ ಹೂಡಿದ ಅಸ್ತ್ರ ಇಐಎ ತಿದ್ದುಪಡಿ!

Next Post

ಕಮಲ ಕೋಟೆ ಬೇಧಿಸಲು ಸೇನೆ ಕಟ್ಟಿದ ಡಿ ಕೆ ಶಿವಕುಮಾರ್..!

Related Posts

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 
Top Story

ಹ್ಯಾಪಿ ಬರ್ತ್ ಡೇ ರಾಹುಲ್ ಗಾಂಧಿ..! – ರಾಗಾ ಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ ! 

by Chetan
June 20, 2025
0

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul gandhi) ನಿನ್ನೆ (ಜೂನ್.19) 55ನೇ ವರ್ಷಕ್ಕೆ ಕಾಲಿಟ್ಟಿದ್ದು,ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜೊತೆಗೆ  ಅಭಿಮಾನಿಗಳು ತಮ್ಮ...

Read moreDetails
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
Next Post
ಕಮಲ ಕೋಟೆ ಬೇಧಿಸಲು ಸೇನೆ ಕಟ್ಟಿದ ಡಿ ಕೆ ಶಿವಕುಮಾರ್..!

ಕಮಲ ಕೋಟೆ ಬೇಧಿಸಲು ಸೇನೆ ಕಟ್ಟಿದ ಡಿ ಕೆ ಶಿವಕುಮಾರ್..!

Please login to join discussion

Recent News

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 
Top Story

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

by Chetan
June 20, 2025
Top Story

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೇರಪ್ರಸಾರ

by ಪ್ರತಿಧ್ವನಿ
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada