• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕನ್ನಡದಲ್ಲಿ ‘ಮಾಲ್ಗುಡಿ ಡೇಸ್‘; ಮುಖ್ಯವಾಹಿನಿಗೆ ಡಬ್ಬಿಂಗ್

by
May 4, 2020
in ಕರ್ನಾಟಕ
0
ಕನ್ನಡದಲ್ಲಿ ‘ಮಾಲ್ಗುಡಿ ಡೇಸ್‘; ಮುಖ್ಯವಾಹಿನಿಗೆ ಡಬ್ಬಿಂಗ್
Share on WhatsAppShare on FacebookShare on Telegram

ಒಂಬತ್ತು ವರ್ಷದ ಹಿಂದಿನ ಮಾತು. ವಾಹಿನಿಯೊಂದು ಒಂದು ಗಂಟೆ ಅವಧಿಯ ‘ಝಾನ್ಸಿ ರಾಣಿ ಲಕ್ಷ್ಮೀಬಾಯಿ’ ಹಿಂದಿ ಕಾರ್ಯಕ್ರಮದ ಕನ್ನಡ ಡಬ್ಬಿಂಗ್ ಅವತರಣಿಕೆಯನ್ನು ಪ್ರಸಾರ ಮಾಡಿತ್ತು. ಆಗ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‍ನ ಮೂವತ್ತಕ್ಕೂ ಹೆಚ್ಚು ಸದಸ್ಯರು ವಾಹಿನಿ ಕಚೇರಿಗೆ ನುಗ್ಗಿ ಪ್ರತಿಭಟಿಸಿದ್ದರು. ಘಟನೆಯಲ್ಲಿ ಕಂಪ್ಯೂಟರ್, ಪೀಠೋಪರಣಗಳಿಗೆ ಹಾನಿಯಾಗಿ ಪೊಲೀಸರ ಮಧ್ಯ ಪ್ರವೇಶವಾಗಿತ್ತು. ಪರಸ್ಪರ ಒಪ್ಪಂದದ ಮೇರೆಗೆ ವಾಹಿನಿ ದೂರು ವಾಪಸು ತೆಗೆದುಕೊಂಡಿತ್ತು. ಅಲ್ಲಿಂದ ಮುಂದೆ ಆಗಿಂದಾಗ್ಗೆ ಟೀವಿ ವಾಹಿನಿಗಳು ಮತ್ತು ಟೆಲಿವಿಷನ್ ಅಸೋಸಿಯೇಷನ್ ಮಧ್ಯೆ ಮುಸುಕಿನ ಗುದ್ದಾಟಗಳಾಗುತ್ತಲೇ ಇದ್ದವು.

ADVERTISEMENT

ಕನ್ನಡದಲ್ಲಿ ಡಬ್ಬಿಂಗ್ ಪರ-ವಿರೋಧದ ಹೋರಾಟ ಏಳೆಂಟು ದಶಕಗಳಷ್ಟು ಹಳೆಯದು. ದಶಕದ ಹಿಂದಿನವರೆಗೂ ಇಲ್ಲಿ ಅನಧಿಕೃತ ಡಬ್ಬಿಂಗ್ ವಿರೋಧಿ ನಿಲುವಿತ್ತು. ಡಬ್ಬಿಂಗ್ ಪರವಾಗಿ ದೊಡ್ಡ ದನಿ ಶುರುವಾಗಿದ್ದು 2006ರ ನಂತರ. ಇತ್ತೀಚಿನ ಏಳೆಂಟು ವರ್ಷಗಳಲ್ಲಿನ ಪರ-ವಿರೋಧದ ಹೋರಾಟಗಳು ಕೋರ್ಟ್ ಮೆಟ್ಟಿಲೇರಿದ್ದೂ ಆಯ್ತು. ನ್ಯಾಯಾಲಯದ ಛೀಮಾರಿಯ ನಂತರ ಇದೀಗ ಡಬ್ಬಿಂಗ್ ವಿರೋಧಿ ನಿಲುವು ಸಂಪೂರ್ಣ ಅಡಗಿದೆ. ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದೀಚೆಗೆ ಕೆಲವು ದೊಡ್ಡ ಬಜೆಟ್‍ನ ಪರಭಾಷಾ ಸ್ಟಾರ್ ಹೀರೋಗಳ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ತೆರೆಕಂಡವು. ಈ ಡಬ್ಬಿಂಗ್ ಸಿನಿಮಾಗಳು ಟೀವಿ ವಾಹಿನಿಯಲ್ಲೂ ಪ್ರಸಾರವಾದವು. ಇದೀಗ ಹಿಂದಿ ಧಾರಾವಾಹಿ ‘ಮಾಲ್ಗುಡಿ ಡೇಸ್’ನ ಕನ್ನಡ ಅವತರಣಿಕೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕನ್ನಡದ ಖಾಸಗಿ ಮನರಂಜನಾ ವಾಹಿನಿಯಲ್ಲಿ ಅಧಿಕೃತವಾಗಿ ಪ್ರಸಾರವಾಗುತ್ತಿರುವ ಮೊದಲ ದೊಡ್ಡ ಸರಣಿಯಿದು. ಈ ಬೆಳವಣಿಗೆ ಕನ್ನಡ ಕಿರುತೆರೆ ಉದ್ಯಮದ ಮೇಲೆ ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ತರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

“ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಹಿಂದಿ ಸರಣಿಯ ಡಬ್ಬಿಂಗ್ ಅವತರಣಿಕೆ ಇದೇ ತಿಂಗಳ 11ರಿಂದ ನಮ್ಮ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದು ನಮ್ಮ ಕನಸಿನ ಯೋಜನೆಯಾಗಿತ್ತು. ಲಾಕ್‍ಡೌನ್‍ನಿಂದಾಗಿ ಪ್ರಸಾರ ಕೊಂಚ ತಡವಾಯ್ತು. ಇದೀಗ ವಾರಕ್ಕೆ ಐದು ದಿನ ಧಾರಾವಾಹಿ ಪ್ರಸಾರವಾಗಲಿದೆ. ಜನಪ್ರಿಯ ಧಾರಾವಾಹಿಯನ್ನು ಖಂಡಿತ ಪ್ರೇಕ್ಷಕರು ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ನಮ್ಮದು” ಎನ್ನುತ್ತಾರೆ ಜೀ ವಾಹಿನಿ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು. ‘ಮಾಲ್ಗುಡಿ ಡೇಸ್’ನ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಮಾಸ್ಟರ್ ಮಂಜುನಾಥ್ ಕೂಡ ಕನ್ನಡ ಅವತರಣಿಕೆ ಕುರಿತು ಉತ್ಸುಕರಾಗಿದ್ದಾರೆ. ಸರಣಿಯ ಮೊದಲ ಸೀಸನ್ ಪ್ರಸಾರವಾಗಿದ್ದು 1986ರಲ್ಲಿ. ಟೀವಿ ಸೆಟ್‍ಗಳು ಮೇಲ್ಮಧ್ಯಮ ವರ್ಗದವರಲ್ಲಷ್ಟೇ ಇದ್ದ ಕಾಲವದು. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ಸರಣಿ ಪ್ರೇಕ್ಷಕರಿಗೆ ತಲುಪಿರಲಿಲ್ಲ. ಇತ್ತೀಚೆಗೆ ಸ್ಟ್ರೀಮಿಂಗ್ ಮೀಡಿಯಾದಲ್ಲಿದ್ದ ಡಬ್ಬಿಂಗ್ ಅವತರಣಿಕೆಯನ್ನು ಆಸಕ್ತರು ನೋಡಿ ಮೆಚ್ಚಿದ್ದರು. ಇದೀಗ ವಾಹಿನಿ ಮೂಲಕ ಸರಣಿ ದೊಡ್ಡ ಪ್ರೇಕ್ಷಕ ಬಳಗಕ್ಕೆ ತಲುಪಲಿದೆ. “ಮೊದಲು ನಾನು ಕೂಡ ಡಬ್ಬಿಂಗ್ ವಿರೋಧಿ ನಿಲುವು ಹೊಂದಿದ್ದೆ. ಬದಲಾದ ದಿನಗಳಲ್ಲಿ ನನ್ನ ನಿಲುವು ಸರಿಯಲ್ಲ ಎನಿಸಿತು. ಸರಣಿ ಕನ್ನಡದಲ್ಲಿ ಬರುತ್ತಿರುವುದು ಖುಷಿಯ ಸಂಗತಿ. ಕನ್ನಡಿಗರು ಖಂಡಿತ ಈ ಪ್ರಯೋಗ ಮೆಚ್ಚುತ್ತಾರೆ” ಎನ್ನುತ್ತಾರೆ ಮಂಜುನಾಥ್.

ಕನ್ನಡ ನಾಡಿನಲ್ಲಿ ಡಬ್ಬಿಂಗ್ ಪರವಾಗಿ ಆರಂಭದಿಂದಲೂ ಗಟ್ಟಿ ಧ್ವನಿಯಲ್ಲಿ ಹೋರಾಟ ನಡೆಸಿದ್ದು ಬನವಾಸಿ ಬಳಗ. ಡಬ್ಬಿಂಗ್ ಪರ-ವಿರೋಧದ ಪ್ರತೀ ಚರ್ಚೆಗಳಲ್ಲೂ ಈ ಬಳಗದ ಸದಸ್ಯರು ಮುಂಚೂಣಿಯಲ್ಲಿದ್ದರು. ಸುಮಾರು ಹತ್ತನ್ನೆರೆಡು ವರ್ಷಗಳ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ ಎನ್ನುತ್ತಾರೆ ಬನವಾಸಿ ಬಳಗದ ಆನಂದ್. “ಎಲ್ಲಾ ಭಾಷೆಯ ಕಂಟೆಂಟ್ ಅನ್ನು ಕನ್ನಡದಲ್ಲೇ ವೀಕ್ಷಿಸುವುದು ಕನ್ನಡಿಗರ ಹಕ್ಕು ಎನ್ನುವ ಆಶಯದಲ್ಲೇ ನಾವು ಹೋರಾಟ ನಡೆಸುತ್ತಾ ಬಂದಿದ್ದೇವೆ. ಈ ಹಂತದಲ್ಲಿ ಸಾಕಷ್ಟು ಕಾನೂನು ಹೋರಾಟಗಳೂ ನಡೆದವು. ಡಬ್ಬಿಂಗ್ ವಿರೋಧಿಸಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಕಿರುತೆರೆ ಅಸೋಸಿಯೇಷನ್‍ಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ದಂಡ ವಿಧಿಸಿತು. ಕೆಲವು ಹೋರಾಟಗರರು ವೈಯಕ್ತಿಕವಾಗಿಯೂ ದಂಡ ಕಟ್ಟಿದರು. ಕಾನೂನಿನ ಬೆಂಬಲ ಇದ್ದುದರಿಂದ ನಮ್ಮ ಹೋರಾಟಕ್ಕೆ ಜಯ ಸಿಕ್ಕಿತು” ಎನ್ನುತ್ತಾರೆ ಆನಂದ್.

ಕಿರುತೆರೆ ಹಿರಿಯ ನಟ, ನಿರ್ದೇಶಕ ರವಿಕಿರಣ್ ಹಿಂದೆ ಡಬ್ಬಿಂಗ್ ವಿರೋಧಿ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದವರು. ಈಗಿನ ಬೆಳವಣಿಗೆ ಕುರಿತು ಅವರು ನಿರ್ಲಪ್ತರಾಗಿದ್ದಾರೆ. ಈ ಬೆಳವಣಿಗೆಯಿಂದಾಗಿ ಕನ್ನಡ ಕಿರುತೆರೆ ಉದ್ಯಮ ಮುಂದಿನ ದಿನಗಳಲ್ಲಿ ಸಾಕಷ್ಟು ಆತಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. “ಕನ್ನಡ ಕಿರುತೆರೆ ಉದ್ಯಮ, ಇಲ್ಲಿನ ಕಲಾವಿದರು ಹಾಗೂ ತಂತ್ರಜ್ಞರ ಹಿತಾಸಕ್ತಿ ಮತ್ತು ಕನ್ನಡಿಗರ ಅಭಿರುಚಿ ದೃಷ್ಟಿಯಿಂದ ನಾವು ನಿರಂತರವಾಗಿ ಡಬ್ಬಿಂಗ್ ವಿರೋಧಿ ಹೋರಾಟ ನಡೆಸಿದೆವು. ಕಾನೂನಿನ ತೊಡಕುಗಳ ನಂತರ ಹಿಂದೆ ಸರಿಯಬೇಕಾಯ್ತು. ಡಬ್ಬಿಂಗ್‍ನಿಂದಾಗಿ ಕನ್ನಡ ಕಿರುತೆರೆ ಉದ್ಯಮ ಮುಂದಿನ ದಿನಗಳಲ್ಲಿ ಸಾಕಷ್ಟು ಅಡ್ಡಿ, ಆತಂಕಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದಂತೂ ಸತ್ಯ” ಎನ್ನುವ ರವಿಕಿರಣ್ ಮಾತುಗಳಲ್ಲಿ ಹುರುಳಿಲ್ಲದಿಲ್ಲ. ಡಬ್ಬಿಂಗ್‍ನಿಂದಾಗಿ ಮನರಂಜನಾ ವಾಹಿನಿಗಳಿಗೆ ನೇರವಾಗಿ ಕಂಟೆಂಟ್ ತಯಾರಿಸುವ ಸಮಯ, ಹಣಕಾಸಿನ ರಿಸ್ಕ್ ಕಡಿಮೆಯಾಗಲಿದೆ. ಮತ್ತೊಂದೆಡೆ ಕಿರುತೆರೆಯನ್ನೇ ನಂಬಿಕೊಂಡ ತಂತ್ರಜ್ಞರು ಹಾಗೂ ಕಲಾವಿದರ ಬಳಗದಲ್ಲಿ ಏನೆಲ್ಲಾ ಸ್ಥಿತ್ಯಂತರಗಳಾಗಲಿವೆ ಎನ್ನುವುದನ್ನು ಕಾದು ನೋಡಬೇಕು.

Tags: ‌ ಝೀ ಕನ್ನಡbanavasi balagaMalgudi DaysShankar Nagzee kannadaಬನವಾಸಿ ಬಳಗಮಾಲ್ಗುಡಿ ಡೇಸ್ಶಂಕರ್ ನಾಗ್
Previous Post

ಗುಜರಾತಿನಲ್ಲಿ ಪೋಲಿಸರೊಂದಿಗೆ ಸಂಘರ್ಷಕ್ಕಿಳಿದ ವಲಸೆ ಕಾರ್ಮಿಕರು

Next Post

ಮದ್ಯ ಮಾರಾಟದಿಂದ ಒಂದು ದಿನದಲ್ಲಿ ಆದ ವ್ಯವಹಾರವೆಷ್ಟು ಗೊತ್ತೇ?

Related Posts

Top Story

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

by ಪ್ರತಿಧ್ವನಿ
November 3, 2025
0

ಬಿಹಾರ ಚುನಾವಣಾ ಪ್ರಚಾರದಲ್ಲಿರುವ (Bihar Election) ರಾಹುಲ್‌ ಗಾಂಧಿ (Rahul Gandhi) ಇಂದು ಬೇಗುಸರೈಯ ಹಳ್ಳಿಯ ಕೊಳದಲ್ಲಿ ಮೀನು (Fishing) ಹಿಡಿದು ಸುದ್ದಿಯಾಗಿದ್ದಾರೆ. ತಮ್ಮ ಭಾಷಣವನ್ನು ಮುಗಿಸಿದ...

Read moreDetails

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

November 3, 2025

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

November 3, 2025
ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

November 3, 2025
ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

November 3, 2025
Next Post
ಮದ್ಯ ಮಾರಾಟದಿಂದ ಒಂದು ದಿನದಲ್ಲಿ ಆದ ವ್ಯವಹಾರವೆಷ್ಟು ಗೊತ್ತೇ?

ಮದ್ಯ ಮಾರಾಟದಿಂದ ಒಂದು ದಿನದಲ್ಲಿ ಆದ ವ್ಯವಹಾರವೆಷ್ಟು ಗೊತ್ತೇ?

Please login to join discussion

Recent News

Top Story

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

by ಪ್ರತಿಧ್ವನಿ
November 3, 2025
Top Story

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

by ಪ್ರತಿಧ್ವನಿ
November 3, 2025
ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ
Top Story

ಸಿನಿ ಪ್ರಿಯರಿಗಾಗಿ ʼಫುಲ್ ಮೀಲ್ಸ್ʼ ರೆಡಿ ಎಂದ ಲಿಖಿತ್ ಶೆಟ್ಟಿ: ಮತ್ತೆ ವಿಭಿನ್ನ ಪಾತ್ರದಲ್ಲಿ ಖುಷಿ ರವಿ

by ಪ್ರತಿಧ್ವನಿ
November 3, 2025
Health Care

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

by ಪ್ರತಿಧ್ವನಿ
November 3, 2025
ದರ್ಶನ್‌ ಕೇಸ್‌ :‌ ವಿಚಾರಣೆ ಮುಂದೂಡಿದ ನ್ಯಾಯಾಲಯ
Top Story

ದರ್ಶನ್‌ ಕೇಸ್‌ :‌ ವಿಚಾರಣೆ ಮುಂದೂಡಿದ ನ್ಯಾಯಾಲಯ

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada