• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಗಂಡನಿಗೆ ಜಾಮೀನು ಕೊಡಿಸುವ ಆಮೀಷ ನೀಡಿ ಎರಡು ವರ್ಷ ಅತ್ಯಾಚಾರವೆಸಗಿದ ಕಾಂಗ್ರೆಸ್‌ ಕೌನ್ಸಿಲರ್‌

by
February 25, 2020
in ದೇಶ
0
ಗಂಡನಿಗೆ ಜಾಮೀನು ಕೊಡಿಸುವ ಆಮೀಷ ನೀಡಿ ಎರಡು ವರ್ಷ ಅತ್ಯಾಚಾರವೆಸಗಿದ ಕಾಂಗ್ರೆಸ್‌ ಕೌನ್ಸಿಲರ್‌
Share on WhatsAppShare on FacebookShare on Telegram

ಆರೋಪಿ ಗಂಡನಿಗೆ ಜಾಮೀನು ಕೊಡಿಸ್ತೀನಿ ಎಂದು ಅತ್ಯಾಚಾರ ಎಸಗಿದ ಪಂಜಾಬ್‌ನ ಮೊಹಾಲಿ ನಗರದ ಕೌನ್ಸಿಲರ್‌ ಕೃತ್ಯಕ್ಕೆ ಕಾಂಗ್ರೆಸ್‌ ತಲೆತಗ್ಗಿಸುವಂತಾಗಿದೆ. ಆಮಿಷಗಳನ್ನೊಡ್ದಿ ಅಶಕ್ತ ಮಹಿಳೆಯರನ್ನ ಚಪಲಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ರಾಜಕಾರಣಿಗಳು ಹಾಗೂ ಅಧಿಕಾರಿಗಳಂತೂ ಈ ದೌರ್ಬಲ್ಯವನ್ನ ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾರೆ. ಉದ್ಯೋಗ ಕೊಡುವುದಾಗಿ, ಹಣ ಸಹಾಯ ಮಾಡುವುದಾಗಿ ಸಾಕಷ್ಟು ಮಹಿಳೆಯರನ್ನ ಮಂಚಕ್ಕೆ ಕರೆದಿರುವ ಘಟನೆಗಳು ನಡೆದಿವೆ, ರೇಷನ್‌ ಕಾರ್ಡ್‌ ನೀಡಲು ಮಂಚಕ್ಕೆ ಕರೆದ ದೆಹಲಿ ಆಮ್‌ ಆದ್ಮಿ ಪಕ್ಷದ ನಾಯಕನ ರಾಸಲೀಲೆಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈಗ ಮಾದಕ ವಸ್ತು ಸಾಗಣೆಗಾಗಿ ಜೈಲು ಪಾಲಾಗಿದ್ದ ಸಂತ್ರಸ್ಥೆ ಗಂಡನಿಗೆ ಜಾಮೀನು ಕೊಡಿಸ್ತೀನಿ ಎಂದು ಆಕೆಯನ್ನ ಕಾಮತೃಷೆಗೆ ಬಳಸಿದ ಪಂಜಾಬ್‌ನ ಮೊಹಾಲಿಯ ಕೌನ್ಸಿಲರ್‌ ರಾಜಸ್ಥಾನ ಪೊಲೀಸರ ಅತಿಥಿಯಾಗಿದ್ದಾನೆ.

ADVERTISEMENT

ಪಂಜಾಬ್‌ನ ಮೊಹಾಲಿ ಸೆಕ್ಟರ್‌ 70 ವಾರ್ಡ್‌ನ ಕೌನ್ಸಿಲರ್‌ ಸುರೀಂದರ್‌ ಎಸ್‌ ರಜಪೂತ್‌ ಕಾಂಗ್ರೆಸ್‌ ಮುಖಂಡ, ಮಹಾ ಚಪಲಚನ್ನಿಗರಾಯ, ಈ ಹಿಂದೆ ಅಶ್ಲೀಲ ಹೇಳಿಕೆಗಳಿಗಾಗಿ ಸಾಕಷ್ಟು ಸುದ್ದಿಯಲ್ಲಿದ್ದಾತ. ಈತ ಪಕ್ಕದ ಮನೆಯ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದು, ವಿಡಿಯೋ ಮಾಡಿಕೊಂಡು ಎರಡು ವರ್ಷಗಳ ಕಾಲ ಕಿರುಕುಳ ನೀಡಿದ್ದಾನೆ, ರಾತ್ರೋರಾತ್ರಿ ರಾಜಸ್ಥಾನ ಪೊಲೀಸರು ಈತನ ಮನೆ ಮೇಲೆ ದಾಳಿ ನಡೆಸಿ, ಬಂಧಿಸಿ ಎಳೆದೊಯ್ದಿದ್ದಾರೆ.

ಸುರೀಂದರ್‌ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ ಮೂವತ್ತು ವರ್ಷ ವಯಸ್ಸಿನ ಮಹಿಳೆಯ ಗಂಡ ಟ್ರಾನ್ಸ್‌ಪೋರ್ಟ್‌ ನಡೆಸುತ್ತಿದ್ದ, ಆತನ ಲಾರಿ ರಾಜಸ್ಥಾನದಲ್ಲಿ ಪೊಲೀಸರಿಂದ ತಪಾಸಣೆಗೆ ಒಳಗಾದಾಗ ಲಾರಿಯಲ್ಲಿ ನಿಷೇಧಿತ ಮಾಧಕ ವಸ್ತು ಅಫೀಮ್‌ ಸಿಗುತ್ತೆ, ಆತನನ್ನ ಮಾದಕ ವಸ್ತು ಮಾರಾಟ ನಿಷೇಧ ಕಾನೂನಿನಡಿ ರಾಜಸ್ಥಾನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಪಕ್ಕದ ರಾಜ್ಯದಲ್ಲಿ ಜಾಮೀನು ಪಡೆಯಲು ಮಹಿಳೆಯ ಸಹಾಯಕ್ಕೆ ಕೌನ್ಸಿಲರ್‌ ಸುರೀಂದರ್‌ ಬರುತ್ತಾನೆ, ತನ್ನ ವಾರ್ಡ್‌ ನಿವಾಸಿಯಾಗಿದ್ದರಿಂದ ಸಾಕಷ್ಟು ಪರಿಚಯವೂ ಇತ್ತು. ಜೈಪುರದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಾಕಷ್ಟು ನನಗೆ ಗೊತ್ತಿದೆ, ಅಲ್ಲಿಗೆ ಹೋಗಿ ಮಾತಾಡೋಣ ಎಂದು ಪುಸಲಾಯಿಸಿ ಜೈಪುರಕ್ಕೆ ಕರೆತಂದು ರೂಂ ಮಾಡಿ ಉಳಿಸಿಕೊಳ್ಳುತ್ತಾನೆ, ಅಂದು ರಾತ್ರಿ ಅಮಲು ಬರುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ಥೆ ದೂರಿಕೊಂಡಿದ್ದಾಳ

ಈ ಘಟನೆ ನಡೆದು ಎರಡು ವರ್ಷಗಳಾದರೂ ಮಹಿಳೆಗೆ ಈತ ಸಹಾಯ ಮಾಡಿಲ್ಲ, ಆಕೆಯ ಗಂಡ ಹೊರಗೆ ಬಂದಿರಲಿಲ್ಲ, ಹಾಗೂ ಆಕೆ ಪ್ರಕರಣವನ್ನೂ ದಾಖಲಿಸಿರಲಿಲ್ಲ, ಆರೋಪಿ ಸುರೀಂದರ್‌ ಆಕೆಯ ವಿಡಿಯೋ ಮಾಡಿ ಸತತವಾಗಿ ಕಿರುಕುಳ ನೀಡುತ್ತಿದ್ದ. ಆತ ಪ್ರಭಾವಿ ಕಾಂಗ್ರೆಸ್‌ ನಾಯಕನೂ ಆಗಿದ್ದರಿಂದ ವಾರ್ಡ್‌ನಲ್ಲಿ ಪ್ರಾಪರ್ಟಿ ಡೀಲರ್‌ ವೃತ್ತಿ ಮಾಡುತ್ತಿದ್ದರಿಂದ ಪೊಲೀಸರೂ ಮಹಿಳೆಯ ಸಹಾಯಕ್ಕೆ ಬಂದಿರಲಿಲ್ಲ. ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದರಿಂದ ಮಹಿಳೆ ತನ್ನ ಗಂಡ ಜಾಮೀನಿನ ಮೇಲೆ ಹೊರಬಂದ ಬಳಿಕ ಫೆಬ್ರುವರಿ 20ರಂದು ಜೈಪುರದ ಸದರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ, ಜೈಪುರ ಪೊಲೀಸರು ರಾತ್ರೋರಾತ್ರಿ ಸುರೀಂದರ್‌ ಮನೆ ಮೇಲೆ ದಾಳಿ ಮಾಡಿ ಬಂಧಿಸಿ ಕರೆದೊಯ್ದಿದ್ದು ಪಂಜಾಬ್‌ ಕಾಂಗ್ರೆಸ್‌ಗೂ ಮುಜುಗರ ತಂದಿದೆ. ಸದ್ಯ ಪೊಲೀಸರ ಅತಿಥಿಯಾಗಿರುವ ಕೌನ್ಸಿಲರ್‌ನ ಪ್ರಕರಣದ ದಿಕ್ಕು ಎತ್ತ ಸಾಗುತ್ತೋ, ಸಂತ್ರಸ್ಥೆಗೆ ನ್ಯಾಯ ಸಿಗುತ್ತಾ ನೋಡಬೇಕಿದೆ.

Tags: Congress CounsellorRape Caseಅತ್ಯಾಚಾರಆಮೀಷಕಾಂಗ್ರೆಸ್‌ ಕೌನ್ಸಿಲರ್‌
Previous Post

ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ BSY, ಟ್ರಂಪ್‌  ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿರುವುದೇಕೆ?

Next Post

ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ

ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada