• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೆಹಲಿಯಲ್ಲಿ ಭುಗಿಲೆದ್ದ ಸಿಎಎ ಪರ-ವಿರೋಧಿ ಸಂಘರ್ಷ; ಹಿಂಸಾಚಾರಕ್ಕೆ ಪೊಲೀಸ್ ಬಲಿ

by
February 24, 2020
in ದೇಶ
0
ದೆಹಲಿಯಲ್ಲಿ ಭುಗಿಲೆದ್ದ ಸಿಎಎ ಪರ-ವಿರೋಧಿ ಸಂಘರ್ಷ; ಹಿಂಸಾಚಾರಕ್ಕೆ ಪೊಲೀಸ್ ಬಲಿ
Share on WhatsAppShare on FacebookShare on Telegram

ದೆಹಲಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಲಿಡುವ ಕೆಲವೇ ಕ್ಷಣಗಳ ಮುನ್ನ ಕೆಲವು ಭಾಗದಲ್ಲಿ ಭಾರೀ ಸಂಘರ್ಷ ಭುಗಿಲೆದ್ದಿದ್ದು, ಸಿಎಎ- ಎನ್ ಆರ್ ಸಿ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವಿನ ಹಿಂಸಾಚಾರಕ್ಕೆ ಪೊಲೀಸ್ ಪೇದೆಯೊಬ್ಬರು ಬಲಿಯಾಗಿದ್ದಾರೆ.

ಈಶಾನ್ಯ ದೆಹಲಿಯ ಗೋಕುಲ್ ಪುರಿ ಪ್ರದೇಶದಲ್ಲಿ ಸೋಮವಾರ ಸಂಜೆ ಈ ಘಟನೆ ಸಂಭವಿಸಿದ್ದು, ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಗೋಕುಲ್ ಪುರ, ಭಜನ್ ಪುರ, ಜಫ್ರಾಬಾದ್, ಮೌಜ್ ಪುರ್ ಭಾಗದಲ್ಲಿ ವ್ಯಾಪಕ ಸಂಘರ್ಷದ ವಾತಾವರಣ ಉಂಟಾಗಿದ್ದು, ಪೆಟ್ರೋಲ್ ಬಂಕ್, ರಸ್ತೆಬದಿ ನಿಂತಿದ್ದ ವಾಹನಗಳು, ಅಂಗಡಿಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ.

ಭಾನುವಾರ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೇತೃತ್ವದಲ್ಲಿ ನೂರಾರು ಮಂದಿ ಸಿಎಎ- ಎನ್ ಆರ್ ಸಿ ಪರ ಪ್ರತಿಭಟನೆ ನಡೆಸಿ, ದೆಹಲಿಯ ರಸ್ತೆಗಳನ್ನು ಬಂದ್ ಮಾಡಿರುವ ಸಿಎಎ-ಎನ್ ಆರ್ ಸಿ ವಿರೋಧಿ ಹೋರಾಟಗಾರರನ್ನು ತೆರವುಗೊಳಿಸಿ, ರಸ್ತೆಗಳನ್ನು ಸಂಚಾರಮುಕ್ತಗೊಳಿಸದೇ ಹೋದರೆ, ದೆಹಲಿಯ ಜನ ರಸ್ತೆಗಿಳಿದು ಪ್ರತೀಕಾರ ತೀರಿಸಿಕೊಳ್ಳಲಿದ್ದಾರೆ ಎಂದು ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು. ಅಂತಹ ಬೆದರಿಕೆ ಬೆನ್ನಲ್ಲೇ ಮಧ್ಯಾಹ್ನದ ಹೊತ್ತಿಗೆ ಸಿಎಎ-ಎನ್ ಆರ್ ಸಿ ಪರ ಮತ್ತು ವಿರೋಧಿ ಗುಂಪುಗಳ ನಡುವಿನ ಸಂಘರ್ಷ ಆರಂಭವಾಗಿತ್ತು. ಸೋಮವಾರ ಅದು ಇನ್ನಷ್ಟು ಪ್ರದೇಶಗಳಿಗೆ ವ್ಯಾಪಿಸಿದ್ದು, ಸಂಜೆ ಹೊತ್ತಿಗೆ ಪರಿಸ್ಥಿತಿ ಕೈಮೀರಿತು.

ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರದ ವೀಡಿಯೋಗಳು ವೈರಲ್ ಆಗಿದ್ದು, ಹಲವು ವೀಡಿಯೋಗಳಲ್ಲಿ ಪ್ರತಿಭಟನಾಕಾರರು ಪರಸ್ಪರ ಕಲ್ಲು ತೂರುತ್ತಿರುವುದು, ಬಡಿದಾಡುವುದು, ಪೆಟ್ರೋಲ್ ಬಾಂಬುಗಳನ್ನು ಎಸೆಯುವುದು ಸ್ಪಷ್ಟವಾಗಿ ದಾಖಲಾಗಿದೆ. ಸಿಎಎ ಪರ ಗುಂಪಿನವರು ಕೆಲವರು ಕೇಸರಿ ಬಟ್ಟೆಯನ್ನು ತಲೆಗೆ ಸುತ್ತಿಕೊಂಡಿದ್ದರೆ, ಸಿಎಎ ವಿರೋಧಿಗಳು ಟೊಪ್ಪಿ ಹಾಕಿರುವುದು ಕಾಣುತ್ತಿದೆ. ಮೌಜ್ ಪುರ್ ಮತ್ತು ಚಾಂದ್ ಭಾಗ್ ಪ್ರದೇಶದಲ್ಲಿ ಗುಂಪೊಂದು ಭಾರತ್ ಮಾತಾಕಿ ಜೈ ಹೇಳುತ್ತಾ, ಪೆಟ್ರೋಲ್ ಬಾಂಬುಗಳನ್ನು ಎಸೆಯುವುದು ಕೂಡ ವೀಡಿಯೋಗಳಲ್ಲಿ ಕಂಡುಬಂದಿದೆ.

ಈ ನಡುವೆ, ಕೆಲವು ವೀಡಿಯೋಗಳಲ್ಲಿ, ಸ್ವತಃ ಪೊಲೀಸರು ಜನವಸತಿ ಕಟ್ಟಡಗಳತ್ತ ಕಲ್ಲು ತೂರುವ ದೃಶ್ಯಾವಳಿಗಳೂ ಇವೆ. ದೆಹಲಿ ಪೊಲೀಸರು ಉತ್ತರಪ್ರದೇಶ ಮತ್ತು ಮಂಗಳೂರು ಪೊಲೀಸರ ಮಾರ್ಗದಲ್ಲಿ ಸಾಗುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಜಾಲತಾಣಗಳಲ್ಲಿ ಕೆಲವು ಎತ್ತಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ಕೈಯಲ್ಲಿ ರಿವಾಲ್ವರ್ ಹಿಡಿದ ವ್ಯಕ್ತಿಯೊಬ್ಬ ಗುಂಪಿನತ್ತ ಗುರಿಯಿಟ್ಟು ಬೆದರಿಸುತ್ತಾ ಖಾಲಿ ರಸ್ತೆಯಲ್ಲಿ ಧೀರೋದಾತ್ತವಾಗಿ ಓಡಾಡುವ ದೃಶ್ಯಾವಳಿ ಇದೆ. ಆತನನ್ನು ತಡೆಯಲು ಬಂದ ಪೊಲೀಸ್ ಪೇದೆಯೊಬ್ಬರಿಗೆ ಆತ ನೇರ ಗನ್ ಗುರಿ ಹಿಡಿದು ಬೆದರಿಸುವ ದೃಶ್ಯ ಕೂಡ ಸೆರೆಯಾಗಿದೆ. ಜೊತೆಗೆ ಆತನ ಬೆನ್ನಿಗೆ ಎದುರಾಳಿ ತಂಡದ ಮೇಲೆ ನಿರಂತರ ಕಲ್ಲು ತೂರುವ ಗುಂಪೊಂದು ಹಿಂಬಾಲಿಸಿಕೊಂಡು ಬರುತ್ತಿರುವುದೂ ಕಾಣುತ್ತಿದೆ.

ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ; ದೆಹಲಿ ಪೊಲೀಸರು ಸ್ವತಃ ಹಿಂಸಾಚಾರಕ್ಕೆ ಇಳಿದಿರುವ ದೃಶ್ಯಾವಳಿಗಳು ಆಘಾತಕಾರಿಯಾಗಿವೆ. ಕೆಲವು ಗುಂಪಿನವರು ರಿವಾಲ್ವರ್ ಹಿಡಿದು ರಾಜಾರೋಷವಾಗಿ ಪೊಲೀಸರನ್ನೇ ಬೆದರಿಸಿದರೂ ಕೈಕಟ್ಟಿಕೊಂಡು ನಿಂತಿರುವ ಪೊಲೀಸರು, ಮತ್ತೆ ಕೆಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರಷ್ಟೇ ಅಲ್ಲದೆ, ಜನವಸತಿ ಪ್ರದೇಶಗಳ ಮೇಲೆಯೂ ಕಲ್ಲು ತೂರುವುದು ವೀಡಿಯೋಗಳಲ್ಲಿ ದಾಖಲಾಗಿದೆ.

ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಪೇದೆಯೊಬ್ಬರ ಜೀವಹಾನಿ ಮತ್ತು ಡಿಸಿಪಿಯೊಬ್ಬರು ಗಾಯಗೊಂಡಿರುವ ಘಟನೆಗೆ ಮರುಗುತ್ತಲೇ ಹಲವರು, ಇಡೀ ಹಿಂಸಾಚಾರಕ್ಕೆ ಮೂಲತಃ ಪೊಲೀಸರ ತಾರತಮ್ಯ ಧೋರಣೆಯೇ ಕಾರಣ. ಡಿಸಿಪಿಯೊಬ್ಬರ ಪಕ್ಕದಲ್ಲೇ ನಿಂತುಕೊಂಡು ಭಾನುವಾರ ಕಪಿಲ್ ಮಿಶ್ರಾ, ನಾಳೆ ರಸ್ತೆಗಳಲ್ಲಿ ಇರುವ ಸಿಎಎ-ಎನ್ ಆರ್ ಸಿ ವಿರೋಧಿ ಪ್ರತಿಭಟನಾಕಾರರನ್ನು ಪೊಲೀಸರು ತೆರವು ಮಾಡದೇ ಇದ್ದರೆ, ನಾವೇ ರಸ್ತೆಗಿಳಿಯೋಣ, ರಸ್ತೆಗಳನ್ನು ಮುಕ್ತಗೊಳಿಸೋಣ ಎಂದು ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುವ ಹೇಳಿಕೆ ನೀಡಿದ್ದರೂ, ದೆಹಲಿ ಪೊಲೀಸರು ಆ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ವೇಳೆ, ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆ ನೀಡುವ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಮಿಶ್ರಾ ವಿರುದ್ಧ ಪೊಲೀಸರು ಸೂಕ್ತ ಕ್ರಮಕೈಗೊಂಡಿದ್ದರೆ, ದೆಹಲಿ ಹಿಂಸಾಚಾರಕ್ಕೆ ಅವಕಾಶವೇ ಇರುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನು ಹಲವರು ಟ್ವಿಟರ್ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.

If this isn't a call for violence, then what is? Why has the #DelhiPolice still not arrested Kapil Mishra?#ShahMustResign pic.twitter.com/yr28ET5zQj

— Rajesh Mukarjee (@mrmukarjee) February 24, 2020


ಇದೀಗ ಮುಖ್ಯಪೇದೆ ಸಾವಿಗೆ ಕಾರಣ ಯಾರು ಎಂಬ ಬಗ್ಗೆ ಸಿಎಎ ಪರ ಮತ್ತು ವಿರೋಧಿ ಬಣಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ದ್ವೇಷಕಾರುವ ಆರೋಪಗಳ ಸುರಿಮಳೆ ಆರಂಭವಾಗಿದ್ದು, ಪೇದೆ ಸಾವಿಗೆ ಸಿಎಎ ಪರ ಹೋರಾಟಗಾರರೇ ಕಾರಣ ಎಂದು ಸಿಎಎ ವಿರೋಧಿಗಳು, ಸಿಎಎ ವಿರೋಧಿ ಹೋರಾಟಗಾರರೇ ಕಾರಣವೆಂದು ಪರ ಇರುವವರು ಆರೋಪಿಸತೊಡಗಿದ್ದಾರೆ. ಒಂದೇ ವೀಡಿಯೋವನ್ನು ಎರಡೂ ಕಡೆಯವರು ಶೇರ್ ಮಾಡಿ, ಪರಸ್ಪರರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಅಲ್ಲದೆ, ಪೊಲೀಸ್ ಪೇದೆಯ ಫೋಟೋವನ್ನು ಮುಂದಿಟ್ಟುಕೊಂಡು ಇನ್ನಷ್ಟು ಹಿಂಸಾಚಾರಕ್ಕೆ ಕುಮಕ್ಕು ನೀಡುವ ಪ್ರಯತ್ನಗಳು ಕೂಡ ವ್ಯಾಪಕವಾಗಿ ನಡೆಯುತ್ತಿವೆ.

ಈ ನಡುವೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಯೋಗಿಂದರ್ ಯಾದವ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಜನತೆಗೆ ಶಾಂತಿ ಕಾಪಾಡುವಂತೆ ಕರೆನೀಡುವುದರ ಜೊತೆಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಯುವಂತೆ ದೆಹಲಿ ಪೊಲೀಸ್ ಹೊಣಗಾರಿಕೆ ಹೊತ್ತಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಕೋರಿದ್ದಾರೆ. ಈ ನಡುವೆ, ಕಳೆದ ಒಂದು ತಿಂಗಳಿನಿಂದ ಪದೇ ಪದೇ ದೆಹಲಿಯಲ್ಲಿ ಹಿಂಸಾಚಾರ, ಹತ್ಯೆ, ಬಂದೂಕು ದಾಳಿಗಳು ಮರುಕಳಿಸುತ್ತಿವೆ. ಇಂತಹ ಕಾನೂನುಬಾಹಿರ ಕೃತ್ಯಗಳನ್ನು ತಡೆಯಬೇಕಾದ ಪೊಲೀಸರು, ಸ್ವತಃ ಇಂತಹ ಘಟನೆಗಳಲ್ಲಿ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಆರೋಪ ಹೊತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಗೃಹ ಸಚಿವ ಶಾ ರಾಜೀನಾಮೆ ನೀಡಬೇಕು ಎಂಬ ಕೂಗು ಕೂಡ ಜೋರಾಗಿದೆ.

#SOS Chandbagh: Continuous stone pelting is going, Cars and public properties set on fire by Pro CAA, NRC protestors in #Chandbagh.

Situation is getting worse, violent Mob is roaming all around in broad day light and #DelhiPolice is missing from the scene!!#CAA_NRC_Protests pic.twitter.com/RxJgC5vOqD

— Khushboo khan (@Khushbookhan_) February 24, 2020


ADVERTISEMENT

ಸಂಜೆ ಹೊತ್ತಿಗೂ ಹಿಂಸಾಚಾರ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲವೆನ್ನಲಾಗುತ್ತಿದ್ದು, ಪೊಲೀಸರು ಬಹುತೇಕ ಕಡೆಗಳಲ್ಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಕೆಲವು ಕಡೆ ಒಂದೋ ಪೊಲೀಸರು ಒಂದು ಗುಂಪಿನ ಪರ ನಿಂತು ಮತ್ತೊಂದು ಗುಂಪಿನ ಮೇಲಿನ ದಾಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದಾರೆ; ಇಲ್ಲವೇ ಮೂಕಪ್ರೇಕ್ಷಕರಾಗಿ ಎರಡೂ ಗುಂಪಿನ ನಡುವಿನ ಸಂಘರ್ಷವನ್ನು ನೋಡಿಕೊಂಡು ಸುಮ್ಮನಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಗಲಭೆ ಇಷ್ಟು ಅಲ್ಪ ಅವಧಿಯಲ್ಲಿ ಇಷ್ಟು ವ್ಯಾಪಕವಾಗಿ ಹಬ್ಬಿದೆ. ಬಹುತೇಕ ಈಶಾನ್ಯ ದೆಹಲಿಯಾದ್ಯಂತ ಗಲಭೆ ವ್ಯಾಪಿಸಿದ್ದು, ಆ ಭಾಗದ ಮೆಟ್ರೋ ರೈಲು ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ.

ಸಿಎಎ-ಎನ್ ಆರ್ ಸಿ ಹಿನ್ನೆಲೆಯಲ್ಲಿ ಧಾರ್ಮಿಕ ಸಹಬಾಳ್ವೆಯ ಕುರಿತು, ಧಾರ್ಮಿಕ ಸ್ವಾತಂತ್ರ್ಯದ ಕುರಿತು ತಮ್ಮ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿಯೊಂದಿಗಿನ ತಮ್ಮ ಸೋಮವಾರ ಸಂಜೆಯ ಮಾತುಕತೆ ವೇಳೆ ಪ್ರಸ್ತಾಪಿಸಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ, ವಿಪರ್ಯಾಸವೆಂದರೆ; ಅದೇ ಟ್ರಂಪ್ ದೆಹಲಿಗೆ ಕಾಲಿಡುವ ಹೊತ್ತಿಗಾಗಲೇ ಧರ್ಮಾಧಾರಿತ ತಾರತಮ್ಯದ ಸಿಎಎ-ಎನ್ ಆರ್ ಸಿ ಪರ- ವಿರೋಧಿಗಳ ಸಂಘರ್ಷದ ಬೆಂಕಿ ಭುಗಿಲೆದ್ದಿದೆ.

Tags: Against CAAAmit ShahArvind KejriwalDelhi Violenceಗೃಹ ಸಚಿವ ಅಮಿತ್ ಶಾದೆಹಲಿಸಿಎಂ ಅರವಿಂದ ಕೇಜ್ರಿವಾಲ್ಸಿಎಎ ಪರ-ವಿರೋಧಿ ಸಂಘರ್ಷ
Previous Post

ಭಾರತಕ್ಕೆ ಬರುತ್ತಿವೆ ಆಫ್ರಿಕಾ ಚೀತಾಗಳು; ಯಶ ಕಾಣಲಿದೆಯೇ ಈ ಪ್ರಯೋಗ?

Next Post

So called ʼಗುಜರಾತ್‌ ಮಾಡೆಲ್‌ʼನ ಹಿಂದಿನ ಅಸಲಿಯತ್ತು

Related Posts

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ
Top Story

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

by ಪ್ರತಿಧ್ವನಿ
December 13, 2025
0

ಅರ್ಜೆಂಟೀನಾದ ಫುಟ್‌ಬಾಲ್(Football)  ಮಾಂತ್ರಿಕ ಲೆಜೆಂಡ್‌ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಭೇಟಿ ನೀಡಿದ್ದಾರೆ. ಗೋಟ್ ಇಂಡಿಯಾ ಟೂರ್ 2025 (GOAT India Tour) ಅಡಿಯಲ್ಲಿ ಭಾರತ...

Read moreDetails

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.

December 12, 2025
Next Post
So called ʼಗುಜರಾತ್‌ ಮಾಡೆಲ್‌ʼನ ಹಿಂದಿನ ಅಸಲಿಯತ್ತು

So called ʼಗುಜರಾತ್‌ ಮಾಡೆಲ್‌ʼನ ಹಿಂದಿನ ಅಸಲಿಯತ್ತು

Please login to join discussion

Recent News

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ
Top Story

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

by ಪ್ರತಿಧ್ವನಿ
December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ
Top Story

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

by ಪ್ರತಿಧ್ವನಿ
December 13, 2025
Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ
Top Story

Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

by ಪ್ರತಿಧ್ವನಿ
December 13, 2025
ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ
Top Story

ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ

by ಪ್ರತಿಧ್ವನಿ
December 13, 2025
ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ
Health Care

ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ

by ನಾ ದಿವಾಕರ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada