• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ದಿಕ್ಕಿಲ್ಲದ ಭಗವತಿ, ಸಮುದ್ರ ತಳ ಸೇರಿದ ತ್ರಿದೇವ್, ಸಾಲದಲ್ಲಿ ಬಿದ್ದ ಕಂಪೆನಿ

by
November 16, 2019
in ಕರ್ನಾಟಕ
0
ದಿಕ್ಕಿಲ್ಲದ ಭಗವತಿ
Share on WhatsAppShare on FacebookShare on Telegram

ಮುಂಬಯಿ ಮೂಲದ ಶಿಪ್ಪಿಂಗ್ ಕಂಪೆನಿ Mercator Ltd ತನ್ನ ಸಿಬ್ಬಂದಿಗೆ ಆರೇಳು ತಿಂಗಳಿನಿಂದ ವೇತನ ನೀಡಿಲ್ಲ. ಈ ವರ್ಷ 529 ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದೆ. ಸಾಲಗಾರರಿಗೆ 1,288 ಕೋಟಿ ರೂಪಾಯಿ ಸಾಲ ಬಾಕಿ ಇದೆ. ಒಂದು ಡ್ರೆಡ್ಜರ್ ಹಡಗು ಮಂಗಳೂರಿನ ತಣ್ಣೀರುಬಾವಿ ತೀರದಲ್ಲಿ ಮುಳುಗಿದೆ. ಮತ್ತೊಂದು ಹಡಗು ಸುರತ್ಕಲ್ ಬೀಚ್ ನಲ್ಲಿ ದಡ ಸೇರಿದೆ.

ADVERTISEMENT

ಇತ್ತೀಚೆಗೆ ನವಮಂಗಳೂರು ಬಂದರು ಸಮೀಪ 2.5 ನಾಟಿಕಲ್ ಮೈಲು ದೂರದಲ್ಲಿ ತ್ರಿದೇವ್ ಪ್ರೇಮ್ ಎಂಬ ಡ್ರೆಡ್ಜರ್ ಸಮುದ್ರದ ನೀರಿನಲ್ಲಿ ಮುಳುಗಡೆ ಆಗಿತ್ತು. ಕೋಸ್ಟ್ ಗಾರ್ಡ್ ಯೋಧರು ಅದರಲ್ಲಿದ್ದ 13 ಮಂದಿ ಮತ್ತು ಏಳು ಮಂದಿ ರಿಪೇರಿ ಕಾರ್ಮಿಕರನ್ನು ಅದಕ್ಕೆ ಮುನ್ನ ಬಚಾವ್ ಮಾಡಿದ್ದರು. ಇದು ನಡೆದಿರುವುದು ಸೆಪ್ಟೆಂಬರ್ ತಿಂಗಳ ಮೊದಲ ವಾರ.

ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಭಗವತಿ ಪ್ರೇಮ್ ಎಂಬ ಮತ್ತೊಂದು ಡೆಡ್ಜಿಂಗ್ ಹಡಗು ಮುಳುಗಡೆ ಆಗುವುದರಲ್ಲಿತ್ತು. ನವಮಂಗಳೂರು ಬಂದರು ಮಂಡಳಿಯವರು ಈ ಹಡಗನ್ನು ಸುರತ್ಕಲ್ ಸಮುದ್ರ ತೀರದಲ್ಲಿ ತಂದು ನಿಲ್ಲಿಸಿದ್ದಾರೆ.

ಬಂದರು ಮಂಡಳಿಯ ಈ ಕ್ರಮವನ್ನು ಸ್ಥಳೀಯ ಮೀನುಗಾರ ಮುಖಂಡರು ವಿರೋಧಿಸಿದರು. ತಮ್ಮ ಕಮ್ಣು ತಪ್ಪಿಸಿ ರಾತ್ರಿ ವೇಳೆ ಡ್ರೆಡ್ಜರನ್ನು ದಡ ಸೇರಿಸಿದ್ದಾರೆ ಎಂದು ಆಪಾದಿಸಲಾಗಿತ್ತು. ಮಾತ್ರವಲ್ಲದೆ, ವಿಮಾ ಹಣಕ್ಕಾಗಿ ಮಂಗಳೂರು ಸಮುದ್ರ ತೀರಕ್ಕೆ ತಂದು ಹಡಗುಗಳನ್ನು ಮುಳುಗಿಸಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೂಡ ಕೇಳಿ ಬಂದಿತ್ತು.

ಮಂಗಳೂರಿನ ಸುರತ್ಕಲ್ ಬೀಚಿನಲ್ಲಿರುವ ಮತ್ತು ಸಮುದ್ರದಲ್ಲಿ ಮುಳುಗಿರುವ ಎರಡೂ ಹಡಗುಗಳು ಕೂಡ ಮುಂಬಯಿಯ Mercator ಕಂಪೆನಿಗೆ ಸೇರಿದ್ದಾಗಿವೆ. ಎಲ್ಲರಂತೆ, ಕಗಳೆದ ಕೆಲವು ವರ್ಷಗಳಿಂದ Mercator ಕಂಪೆನಿಯ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಇತ್ತೀಚೆಗೆ ತನ್ನಲ್ಲಿದ್ದ ಬಹುದೊಡ್ಡ ಹಡಗೊಂದನ್ನು ಕೈಯಲ್ಲಿ ಕಾಸಿಲ್ಲದ ಪರಿಣಾಮ, ಸಾಲದ ಬಡ್ಡಿ ತೀರಿಸಲು ಮಾರಾಟ ಮಾಡಿತ್ತು.

ಕಂಪೆನಿಯ ಶೇರು ಬೆಲೆ ಕೆಲವು ತಿಂಗಳು 26 ರೂಪಾಯಿ ಇದ್ದರೆ, ಇದೀಗ ಅದು ಮೂರು ರೂಪಾಯಿಗೆ ದೊರೆಯುತ್ತದೆ. ಈ ಮಧ್ಯೆ, ವೇತನ ನೀಡಿಲ್ಲ, ಭವಿಷ್ಯ ನಿಧಿ ವಂತಿಕೆಯನ್ನು ಪಾವತಿ ಮಾಡಿಲ್ಲ ಎಂದು ಕಾರ್ಮಿಕರು ನ್ಯಾಯ ಪ್ರಾಧಿಕಾರದ ಮೊರೆ ಹೋಗಿದ್ದಾರೆ.

ಕಂಪೆನಿಯು ಮೂರು ಸರಕು ಸಾಗಾಟ ಹಡಗು ಮತ್ತು ಐದು ಹೂಳೆತ್ತುವ ಡ್ರೆಡ್ಜರ್ ಹೊಂದಿದೆ. ಆದರೆ, ಈಗ ಕೇವಲ ಎರಡೇ ಡ್ರೆಡ್ಜರ್ ಕೆಲಸ ಮಾಡುತ್ತಿದೆ. ಕಾಕಿನಾಡ ಬಂದರು ಸಮೀಪ ದರ್ಶಿನಿ ಪ್ರೇಮ್ ಡ್ರೆಡ್ಜರಿನ ರಿಪೇರಿ ಕೆಲಸ ಸ್ಥಗಿತಗೊಂಡಿದೆ. ಏಕೆಂದರೆ, ಸ್ಥಳೀಯ ಸಂಸ್ಥೆಗಳಿಗೆ ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿ ಮಾಡಿಲ್ಲ ಎಂದು ಸಂಪರ್ಕ ಕಡಿತ ಮಾಡಲಾಗಿದೆ.

ಭಗವತಿ ಪ್ರೇಮ್

ಇತ್ತ ಮಂಗಳೂರಿನಲ್ಲಿ ಮುಳುಗಿರುವ ತ್ರಿದೇವ್ ಹಡಗನ್ನು ಸಮುದ್ರದಿಂದ ಎತ್ತಿ ಹೊರಹಾಕುವಂತೆ ಕಂಪೆನಿಗೆ ಆದೇಶ ನೀಡಲಾಗಿದೆ. ಹಾಗೇ, ಸುರತ್ಕಲ್ ಬೀಚಿನಲ್ಲಿ ದಿಕ್ಕು ದೆಸೆ ಇಲ್ಲದೆ ಬಿದ್ದಿರುವ ಭಗವತಿ ಪ್ರೇಮ್ ಹಡಗನ್ನು ತೆರವು ಮಾಡುವಂತೆ ನವಮಂಗಳೂರು ಬಂದರು ಮಂಡಳಿ ಮಾರ್ಕೆಟರ್ ಕಂಪೆನಿ ಮತ್ತು Directorate General of Shipping ನೋಟೀಸು ನೀಡಿದೆ. ಆದರೆ, ಕಂಪೆನಿಯ ಕೈಯಲ್ಲಿ ಸಿಬ್ಬಂದಿಗೆ ಊಟ ಒದಗಿಸಲು ಗತಿ ಇಲ್ಲದಂತಾಗಿದೆ.

ಶಿಪ್ಪಿಂಗ್ ಡಿಜಿ ಕೆಲಸ ಮಾಡಿದರೆ ಎರಡು ಹಡಗುಗಳು ಕರ್ನಾಟಕ ಕರಾವಳಿಯಿಂದ ತೆರವು ಆಗುತ್ತದೆ. ಆದರೆ, ಮುಂಬಯಿಯಲ್ಲಿ ಕಚೇರಿ ಹೊಂದಿರುವ ಶಿಪ್ಪಿಂಗ್ ಡಿಜಿ ಕೆಲಸ ನಿಧಾನವಾಗಿದೆ.

ಇತ್ತ ನವಮಂಗಳೂರು ಬಂದರು ಮಂಡಳಿ ಈಗಾಗಲೇ ಭಗವತಿ ಪ್ರೇಮ್ ಡ್ರೆಡ್ಜರನ್ನು ತೆರವು ಮಾಡುವಂತೆ ಸೂಚನೆ ನೀಡಿದೆ. ಸೂಕ್ತ ಕಾಲಾವಧಿಯಲ್ಲಿ ತೆರವು ಮಾಡದಿದ್ದಲ್ಲಿ ನ್ಯಾಯಾಲಯದ ಅನುಮತಿ ಪಡೆದು, ಪಬ್ಲಿಕ್ ನೊಟೀಸು ನೀಡಿ ಹಡಗನ್ನು ಹರಜು ಹಾಕಲಾಗುವುದು ಎಂದು ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಎ.ವಿ.ರಮಣ ಪ್ರತಿಧ್ವನಿಗೆ ತಿಳಿಸಿದ್ದಾರೆ.

ಬಂದರು ಮಂಡಳಿ The Merchant Shipping Act, 1958 ಮತ್ತು 2015ರ ತಿದ್ದುಪಡಿ ಪ್ರಕಾರವೇ ಅಪಾಯದಲ್ಲಿದ್ದ ಭಗವತಿ ಪ್ರೇಮ್ ಹಡಗನ್ನು ಚಂಡಮಾರುತದ ಮಧ್ಯದಿಂದ ತಂದು ಸನಿಹದ ಬೀಚಿನಲ್ಲಿ ನಿಲ್ಲಿಸಿದೆ. ಹಡಗಿನಲ್ಲಿ 50 ಟನ್ ತೈಲ ಮತ್ತು ಏಳು ಮಂದಿ ಸಿಬ್ಬಂದಿ ಇದ್ದ ಕಾರಣ ರಕ್ಷಿಸುವುದು ಅನಿವಾರ್ಯ ಆಗಿತ್ತು. ಅರಬಿ ಸಮುದ್ರದಲ್ಲಿ ಈ ಅವಧಿಯಲ್ಲಿ ಐದು ಬಾರಿ ವಾಯುಭಾರ ಕುಸಿತ ಇತ್ತು. ಎರಡು ಚಂಡಮಾರುತಗಳ ನಡುವೆ ಹಡಗನ್ನು ತಡಕ್ಕೆ ತರಲಾಗಿದೆ ಎಂದು ರಮಣ ವಿವರಿಸಿದರು.

ಹಡಗನ್ನು ತಡ ಸೇರಿಸಿದ ಪರಿಣಾಮ ಸಂಭಾವ್ಯ ಪರಿಸರ ಮಾಲಿನ್ಯ ನಿಯಂತ್ರಣವಾಗಿದೆ. ಮಾತ್ರವಲ್ಲದೆ, ಹಡಗು ಮುಳುಗಿದರೆ ಅದನ್ನು ವಿಲೇವಾರಿ ಮಾಡುವುದು ಬೀಚ್ ಮಾಡಿದ ಹಡಗಿಗಿಂದ ಕಷ್ಟಕರ ಮತ್ತು ವೆಚ್ಚದಾಯಕ ಎಂದು ಹೇಳಿದರು.

ಹಡಗುಗಳನ್ನು ಮಾರಾಟ ಮಾಡಿಯಾದರು ಕಂಪೆನಿಯ ಆರ್ಥಿಕ ಸಂಕಷ್ಟವನ್ನು ಸುಧಾರಿಸಬೇಕಾಗಿದೆ ಎನ್ನುತ್ತಾರೆ ಕಂಪೆನಿ ಅಧಿಕಾರಿಗಳು. ಕಂಪೆನಿಯ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ನವಮಂಗಳೂರು ಬಂದರು ಮಂಡಳಿ ಸಮೀಪ ಮುಳುಗಿದ ತ್ರೀದೇವ್ ಮತ್ತು ದಿಕ್ಕೆಟ್ಟು ನಿಂತ ಭಗವತಿಯನ್ನುರಕ್ಷಿಸುವುದು ಅಸಾಧ್ಯವಾಗಿದೆ. ಬಂದರು ಮಂಡಳಿ ಆದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳುವುದೇ ಉತ್ತಮ ಮಾರ್ಗವಾಗಿದೆ.

Tags: Bhagavati Prem DredgerCompany lossEmployeesFishingMangaloreMercator LtdNew Mangalore Port TrustTridevi Prem Dredgerಆರ್ಥಿಕ ಹಿಂಜರಿತಕಾರ್ಮಿಕರುತ್ರಿದೇವ್ ಪ್ರೇಮ್ ಡ್ರೆಡ್ಜರ್ನವಮಂಗಳೂರು ಬಂದರು ಮಂಡಳಿಭಗವತಿ ಪ್ರೇಮ್ ಡ್ರೆಡ್ಜರ್ಮಂಗಳೂರುಮರ್ಕ್ಯಾಟರ್ ಲಿಮಿಟೆಡ್ಮೀನುಗಾರಿಕೆ
Previous Post

ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!

Next Post

ಜಿಡಿಪಿ ಶೇ.4.2 ಕ್ಕೆ ಕುಸಿಯುವ ಆತಂಕ; ಇಲ್ಲಿವೆ ನೋಡಿ ಹನ್ನೆರಡು ಕಾರಣಗಳು!

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ಜಿಡಿಪಿ ಶೇ.4.2 ಕ್ಕೆ ಕುಸಿಯುವ ಆತಂಕ; ಇಲ್ಲಿವೆ ನೋಡಿ ಹನ್ನೆರಡು ಕಾರಣಗಳು!

ಜಿಡಿಪಿ ಶೇ.4.2 ಕ್ಕೆ ಕುಸಿಯುವ ಆತಂಕ; ಇಲ್ಲಿವೆ ನೋಡಿ ಹನ್ನೆರಡು ಕಾರಣಗಳು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada