• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಬುದ್ಧಿ ಕಲಿಯಲು ನಿರಾಕರಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್

by
October 24, 2019
in ಅಭಿಮತ
0
ಬುದ್ಧಿ ಕಲಿಯಲು ನಿರಾಕರಿಸುತ್ತಿರುವ ಕಾಂಗ್ರೆಸ್ ಹೈಕಮಾಂಡ್
Share on WhatsAppShare on FacebookShare on Telegram

ನೇತಾಗಿರಿ, ಚೇಲಾಗಿರಿಯಿಂದ ಹೊರಬಂದು, ಬದಲಾದ ಸನ್ನಿವೇಶದಲ್ಲಿ ರಾಜಕೀಯ ಮಾಡಲು ಕಾಂಗ್ರೆಸ್ ಪಕ್ಷ ವಿಫಲ ಆಗುತ್ತಿರುವುದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ದೇಶದಲ್ಲಿ ಕೇಂದ್ರ ಸರಕಾರ ಮತ್ತು ಆಡಳಿತ ಪಕ್ಷದ ನೀತಿಗಳ ವಿರುದ್ಧ ಜನಾಭಿಪ್ರಾಯ ಇದ್ದರೂ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ.

ADVERTISEMENT

ಮಹಾರಾಷ್ಟ್ರ ಮತ್ತು ವಿಧಾನಸಭಾ ಚುನಾವಣಾ ಫಲಿತಾಂಶ ಮೂಲಕ ಬಿಜೆಪಿಯ ಜನಪ್ರಿಯತೆ ಕುಸಿಯುತ್ತಿರುವುದು ಸ್ಪಷ್ಟವಾಗಿದೆ. ಹರಿಯಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಲಭವಾಗಿ ಜಯಗಳಿಸಬಹುದಿತ್ತು. ಅಲ್ಲಿಯ ರಾಜಕೀಯ ಪರಿಸ್ಥಿತಿ ಹಾಗಿತ್ತು. ಪಂಜಾಬ್ ರಾಜ್ಯದಿಂದ ಪ್ರತ್ಯೇಕವಾದ ಹರಿಯಾಣದಲ್ಲಿ ಜಾಟ್ ಸಮುದಾಯ ಬಿಜೆಪಿಯ ಮುಖ್ಯಮಂತ್ರಿ ಖಟ್ಟರ್ ವಿರುದ್ಧ ಅಸಮಾಧಾನಗೊಂಡಿದ್ದರು. ಬಿಜೆಪಿಯ ಮೈತ್ರಿ ಪಕ್ಷಗಳ ನಡುವೆ ಸಮಸ್ಯೆ ಇತ್ತು. ಚೌಟಾಲಾ ಕುಟುಂಬದಲ್ಲಿ ಸಮಸ್ಯೆ ಇತ್ತು. ಚೌಟಾಲಾ ಮೊಮ್ಮಗ 31ರ ಹರೆಯದ ದುಷ್ಯಂತ ಚೌಟಾಲಾ ಜೆಜೆಪಿ ಎಂಬ ಪಕ್ಷ ರಚಿಸಿ ಹತ್ತು ಶಾಸಕರನ್ನು ಗೆದ್ದುಕೊಂಡಿದ್ದಾರೆ.

ಜೆಜೆಪಿ ಪಕ್ಷದ ದುಷ್ಯಂತ ಚೌಟಾಲಾ

ಹರಿಯಾಣದಲ್ಲಿ ಕಾಂಗ್ರೆಸ್ ಮೊದಲು ಎಡವಿದ್ದು ಪ್ರತಿಸಾರಿಯಂತೆ ನಾಯಕತ್ವ ವಹಿಸಿಕೊಡುವಲ್ಲಿ. ವಿಧಾನಸಭೆಯ ಪ್ರತಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡ ಅವರಿಗೆ ಚುನಾವಣೆಯ ಹೊಣೆಗಾರಿಕೆ ನೀಡಿದ್ದು ಕೇವಲ ಒಂದೆರಡು ತಿಂಗಳ ಹಿಂದೆ. ಆರು ತಿಂಗಳ ಹಿಂದೆಯೇ ಪಕ್ಷದ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿದ್ದರೆ ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಬೇರೆ ತೆರನಾಗಿರುತ್ತಿತ್ತು. ಹರಿಯಾಣದಲ್ಲಿ ಬಹುತೇಕ ಬಿಜೆಪಿ ಸಚಿವರು, ಹಾಲಿ ಶಾಸಕರು ಸೋತಿರುವುದು ಆಡಳಿತ ವಿರೋಧಿ ಜನಾಭಿಪ್ರಾಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇಂತಹ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ವಿಫಲ ಆಗಿದೆ.

ಹೈಕಮಾಂಡಿಗೆ ಸನಿಹ ಇರುವ ಮುಖಂಡರು ಲಾಬಿ ಮಾಡಿ ಟಿಕೆಟ್ ಹಂಚಿಕೆ ಮಾಡುತ್ತಿರುವುದರಿಂದ ಕಾಂಗ್ರೆಸ್ ಸುಲಭದ ಗೆಲುವನ್ನು ಕೈ ಚೆಲ್ಲಿದೆ. ಬಿಜೆಪಿ ಕೂಡ ಹಿನ್ನಡೆ ಅನುಭವಿಸಲು ಇದೇ ಮಾದರಿಯ ಟಿಕೆಟ್ ಹಂಚಿಕೆ ಕಾರಣ ಎನ್ನಲಾಗುತ್ತಿದೆ. ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಯ ಆಯ್ಕೆಗೆ ಗಮನ ನೀಡದ ಕಾರಣ ಕನಿಷ್ಟ ಹತ್ತು ಶಾಸಕ ಸ್ಥಾನಗಳನ್ನು ಬಿಜೆಪಿಗೆ ನೀಡಿದಂತಾಗಿದೆ.

ಹಿನ್ನಡೆಯ ಹೊರತಾಗಿಯು ಬಿಜೆಪಿ 36 ಶೇಕಡ ಮತಗಳನ್ನು ಗಳಿಸಿಕೊಂಡಿದೆ. ಕಾಂಗ್ರೆಸ್ ಶೇಕಡ 26 ಮತಗಳನ್ನು ಗಳಿಸಿದರೆ ಇತರರು ಶೇಕಡ 27 ಮತಗಳನ್ನು ಗಳಿಸಿದ್ದಾರೆ. ಉಳಿದ ಮತಗಳನ್ನು ಚಿಕ್ಕ ಪುಟ್ಟ ಪಕ್ಷಗಳು ಗಳಿಸಿವೆ. ಬಿಜೆಪಿ ವಿರೋಧಿ ಮತಗಳನ್ನು ಒಂದೆಡೆ ಸೇರಿಸಲು ಕಾಂಗ್ರೆಸ್ ಪಕ್ಷದಲ್ಲಿ ಯಾವ ಕಾರ್ಯತಂತ್ರವೂ ಇರಲಿಲ್ಲ. ಹರಿಯಾಣ ಯುವ ಕಾಂಗ್ರೆಸ್ ನಾಯಕ ಮತ್ತು ರಾಷ್ಟ್ರೀಯ ವಕ್ತಾರ ಸುರ್ಜೀವಾಲ ಕಡಿಮೆ ಮತಗಳ ಅಂತರದಿಂದ ಸೋಲಲು ಕಾಂಗ್ರೆಸ್ ಪಕ್ಷದಲ್ಲಿ ವೃತ್ತಿಪರ ಚುನಾವಣಾ ನಿರ್ವಹಣೆಯ ಕೊರತೆ ಕಾರಣವಾಗಿದೆ.

ಭೂಪಿಂದರ್ ಸಿಂಗ್ ಹೂಡ

ಮಹಾ ಸಮಸ್ಯೆ:

ಮಹಾರಾಷ್ಟ್ರದಲ್ಲಿ ಕೂಡ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ 20 ರಿಂದ 30 ಸ್ಥಾನಗಳನ್ನು ಕಳಕೊಂಡಿದೆ ಎನ್ನುತ್ತಾರೆ ರಾಜಕೀಯ ವೀಕ್ಷಕರು. ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಕೂಡ ಈ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗಾಗಿ ಹೇಳಿಕೊಂಡಿದ್ದರು. ರೈತರು, ಗಿರಿಜನ ಮತ್ತು ದಲಿತರ ಆಕ್ರೋಶದ ನಡುವೆ ಕೂಡ ಬಿಜೆಪಿ – ಶಿವಸೇನಾ ಮೈತ್ರಿ ವಿರುದ್ಧ ಸಮಬಲದ ಹೋರಾಟ ಸಂಘಟಿಸಲು ಕೂಡ ಕಾಂಗ್ರೆಸ್ – ಎನ್ ಸಿ ಪಿ ಮೈತ್ರಿ ಕೂಟಕ್ಕೆ ಸಾಧ್ಯವಾಗಿಲ್ಲ. ಪರಿಸರ ಹೋರಾಟ, ರೈತರ ಆತ್ಮಹತ್ಯೆಗಳು ಆಡಳಿತ ಪಕ್ಷಗಳ ವಿರುದ್ಧ ಜನಾಭಿಪ್ರಾಯ ರೂಪಿಸುವಂತೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ.

ಮಹಾರಾಷ್ಟ್ರದಲ್ಲಿ ಕೂಡ ನಾಯಕತ್ವ ವಿಚಾರ, ಗುಂಪುಗಾರಿಕೆ, ಹೈಕಮಾಂಡ್ ಉದಾಸೀನತೆ, ವಿಳಂಬ ನೀತಿಯಿಂದಾಗಿ ಚುನಾವಣೆಗೆ ಮುನ್ನವೇ ಮತ್ತೆ ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿ ಆಗುವುದು ಖಚಿತವಾಗಿತ್ತು. ಶರದ್ ಪವಾರ್ ನೇತೃತ್ವದ ಎನ್ ಸಿ ಪಿ ಸ್ಪಲ್ಪ ಮಟ್ಟಿಗೆ ಆಡಳಿತ ಪಕ್ಷಗಳ ವಿರುದ್ಧ ಹೋರಾಟ ನಡೆಸಿದೆ. ಮರಾಹಾಷ್ಟ್ರದಲ್ಲಿ ಕೂಡ ಚುನಾವಣೋತ್ತರ ಸರ್ವೇ ವರದಿಯಂತೆ ಫಲಿತಾಂಶ ಬಂದಿಲ್ಲ. ಕಳೆದ ಬಾರಿ ಅಭೂತ ಪೂರ್ವ ಜಯಗಳಿಸಿದ್ದ ಬಿಜೆಪಿಗೆ ಈ ಬಾರಿ ಹಲವು ಸ್ಥಾನಗಳು ನಷ್ಟ ಆಗಿವೆ.

ರಾಹುಲ್ ಗಾಂಧಿ ಸ್ಥಾನವನ್ನು ಸೋನಿಯಾ ಗಾಂಧಿ ತುಂಬಿದ ಅನಂತರ ಹಳೇ ಚಾಳಿ ಬದಲಾಗದಿದ್ದರೂ ಅಲ್ಪಸ್ವಲ್ಪ ಬದಲಾವಣೆಯಾಗಿದೆ. ಹರಿಯಾಣದಲ್ಲಿ ಹೂಡ ಬದಲು ಅಶೋಕ್ ತನ್ವರ್ ಅವರನ್ನು ಬೆಳೆಸಲು ರಾಹುಲ್ ಗಾಂಧಿ ಆಸಕ್ತಿ ವಹಿಸಿದ್ದರು. ಭೂಪಿಂದರ್ ಹೂಡ ಒಂದು ಬಹಿರಂಗ ಹೇಳಿಕೆ ನೀಡಿದ ಅನಂತರ ಅವರ ಪ್ರಭಾವ ಪಕ್ಷದಲ್ಲಿ ಎಂದಿನಂತೆ ಮುಂದುವರಿದಿತ್ತು. ಸೋನಿಯಾ ಗಾಂಧಿಯೂ ಕೂಡ ಹೂಡ ಅವರಂತಹ 72ರ ಹರೆಯದ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಹಿರಿಯ ಮುಖಂಡನನ್ನು ಕಡೆಗಣಿಸುವಂತೆ ಇರಲಿಲ್ಲ.

ಅಶೋಕ್ ತನ್ವರ್ ಬದಲು ಮಾಜಿ ಕೇಂದ್ರ ಸಚಿವೆ ಕುಮಾರಿ ಶೆಲ್ಜಾ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕ ಮಾಡಿತ್ತು. ಇದೂ ಕೂಡ ಉತ್ತಮ ಆಯ್ಕೆ ಆಗಿರಲಿಲ್ಲ. ಪಕ್ಷ ಎರಡು ಗುಂಪಾಯಿತು. ಡ್ಯಾಮೇಜ್ ಆದ ನಂತರವೇ ಕಾಂಗ್ರೆಸ್ ಹೈಕಮಾಂಡ್ ಹೂಡ ಅವರನ್ನು ಶಾಸಕಾಂಗ ಪಕ್ಷದ ಮುಖಂಡ ಮತ್ತು ಚುನಾವಣಾ ಸಮಿತಿ ಅಧ್ಯಕ್ಷನಾಗಿ ನೇಮಿಸಿತು.

ಕರ್ನಾಟಕದಲ್ಲೂ ಆಗಿದ್ದು ಇದೇ ರೀತಿ. ಮೈತ್ರಿ ಸರಕಾರ ಉರುಳಿದ ಮೇಲೆ ಸಹಜವಾಗಿ ಶಾಸಕಾಂಗ ಪಕ್ಷದ ಮುಖಂಡರಾಗಿದ್ದ ಸಿದ್ದರಾಮಯ್ಯ ಪ್ರತಿಪಕ್ಷದ ಮುಖಂಡ ಆಗಬೇಕಾಗಿತ್ತು. ಆದರೆ, ಹೈಕಮಾಂಡ್ ಮೂಗಿನ ನೇರಕ್ಕೆ ಪ್ರತಿಪಕ್ಷ ನಾಯಕನ ಆಯ್ಕೆ ಕುರಿತ ಅನಗತ್ಯ ಸರ್ಕಸ್ ಮಾಡಲಾಯಿತು. ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ಅನಗತ್ಯವಾಗಿ ಚರ್ಚೆಗೆ ಅವಕಾಶ ನೀಡಲಾಯಿತು. ಇದರಿಂದ ಸಹಜವಾಗಿ ಸಿದ್ದರಾಮಯ್ಯ ಅವರ ಇಮೇಜಿಗೆ ಧಕ್ಕೆ ತರುವ ಯತ್ನ ನಡೆಯಿತು. ಇಂತಹದೊಂದು ಪ್ರಹಸನದಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ಲಾಭವೂ ಆಗಲಿಲ್ಲ. ಆದರೆ, ವಿರೋಧ ಪಕ್ಷಗಳಿಗೆ ಮಾತ್ರ ಇದರಿಂದ ಆಹಾರ ದೊರೆಯಿತು.

ತಮ್ಮ ಪ್ರಾದೇಶಿಕ ಮುಖಂಡರನ್ನು ಗೌರವಿಸಿದೇ ಅವರನ್ನು ತುಳಿಯುತ್ತಲೇ ಪಕ್ಷವನ್ನು ಅವಸಾನದತ್ತ ಕೊಂಡೊಯ್ಯುವ ಕಾಂಗ್ರೆಸ್ಸಿನಂತಹ ರಾಜಕೀಯ ಪಕ್ಷ ಮತ್ತೊಂದಿಲ್ಲ. ಹೈಕಮಾಂಡಿನ ತಪ್ಪು ನೀತಿಗಳಿಂದಾಗಿಯೇ ಇಂದು ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಗುಜರಾತ್, ಓಡಿಶಾ, ಬಿಹಾರ ಮುಂತಾದ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೊಬ್ಬ ಸಮರ್ಥ ಮುಖಂಡನಿಲ್ಲ. ಪಕ್ಷದ ಪ್ರಭಾವವೂ ಇಲ್ಲ. ಇಂದು ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿರುವವರು ಇದೇ ಕಾಂಗ್ರೆಸ್ ಪಕ್ಷದ ಒಂದು ಕಾಲದ ಮುಖಂಡರು.

Tags: Assembly PollsBJPCongress PartyCongress President Sonia GandhiHaryana Assembly PollsMaharashtra Assembly PollsRahul Gandhiಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಕಾಂಗ್ರೆಸ್ ಪಕ್ಷಬಿಜೆಪಿಮಹಾರಾಷ್ಟ್ರ ವಿಧಾನಸಭೆರಾಹುಲ್ ಗಾಂಧಿವಿಧಾನಸಭಾ ಚುನಾವಣೆಹರಿಯಾಣ ವಿಧಾನಸಭೆ
Previous Post

ಕೆರೆ ಸಂರಕ್ಷಣೆ ವೈಫಲ್ಯ: ಅಧಿಕಾರಿಗಳಿಗೆ ಜೈಲು ವಾಸದ ಎಚ್ಚರಿಕೆ ನೀಡಿದ NGT

Next Post

ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾದ ಚುನಾವಣಾ ಫಲಿತಾಂಶ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾದ ಚುನಾವಣಾ ಫಲಿತಾಂಶ

ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾದ ಚುನಾವಣಾ ಫಲಿತಾಂಶ

Please login to join discussion

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಬ್ರಾಹ್ಮಣರ ಅಭಿವೃದ್ಧಿಗೆ, ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada