ಪೆಟ್ರೋಲಿಯಂ ಅನಿಲವನ್ನು ಸಾಗಿಸುತ್ತಿದ್ದ ಭಾರತೀಯ ಧ್ವಜ ಹೊತ್ತ ಎರಡು ಟ್ಯಾಂಕರ್ ಹಡಗುಗಳು ಇರಾನ ದೇಶದ ಅಧೀನದಲ್ಲಿರುವ ಹಾರ್ಮೂಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿರುವುದಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯ ಮತ್ತು ಇರಾನ್ ನಡುವಿನ ಮಾತುಕತೆ ಬಳಿಕ, ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ಮೂಲಕ ಸುರಕ್ಷಿತವಾಗಿ ಸಾಗಲು ಇರಾನ್ ಅವಕಾಶ ನೀಡಿದೆ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದ ಅನೇಕ ಹಡಗುಗಳಿಗೆ ಭದ್ರತಾ ಸವಾಲುಗಳು ಎದುರಾಗಿದ್ದವು. ಆದರೂ ಭಾರತೀಯ ಧ್ವಜ ಹೊಂದಿದ ಎರಡು ಟ್ಯಾಂಕರ್ ಹಡಗುಗಳಿಗೆ ಇರಾನ್ ಸುರಕ್ಷಿತವಾಗಿ ಸಾಗಲು ಅನುಮತಿ ನೀಡಿದೆ.

ಈ ಹಡಗುಗಳು ಭಾರತಕ್ಕೆ ಅಗತ್ಯವಾದ ಎಲ್ಪಿಜಿ ಅನಿಲವನ್ನು ಸಾಗಿಸುತ್ತಿದ್ದು, ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಇರಾನ್ ಜೊತೆ ಯಾವುದೇ ವಿಶೇಷ “ಒಪ್ಪಂದ” ಇಲ್ಲ ಎಂದು ಸಚಿವ ಜೈಶಂಕರ್ ಸ್ಪಷ್ಟಪಡಿಸಿದರು. ಪ್ರತಿಯೊಂದು ಹಡಗಿನ ಚಲನೆಯೂ ಪ್ರತ್ಯೇಕವಾಗಿದ್ದು, ಸಾಮಾನ್ಯ ವ್ಯಾಪಾರ ಸಂಬಂಧಗಳ ಆಧಾರದ ಮೇಲೆ ಈ ಸಾಗಣೆ ನಡೆದಿರುವುದಾಗಿ ಅವರು ತಿಳಿಸಿದರು.

ಇರಾನ್ ಈ ಹಡಗುಗಳನ್ನು ಭಾರತಕ್ಕೆ ಕಳುಹಿಸಲು ಯಾವುದೇ ಪ್ರತಿಫಲ ಪಡೆಯಿಲ್ಲ. ದೆಹಲಿ ಮತ್ತು ತೆಹ್ರಾನ್ ನಡುವೆ ಇತ್ತಿಚಿನ ಕಾಲದಿಂದಲೂ ವ್ಯಾಪಾರ ಸಂಬಂಧಗಳು ಇರುವುದರಿಂದ ಈ ಸಾಗಣೆ ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು.
ಭಾರತೀಯ ಧ್ವಜ ಹೊತ್ತ ಶಿವಾಲಿಕ್ ಮತ್ತು ನಂದಾ ದೇವಿ ಎಂಬ ಟ್ಯಾಂಕರ್ ಹಡಗುಗಳು ಒಟ್ಟು ಸುಮಾರು 92,700 ಮೆಟ್ರಿಕ್ ಟನ್ ಎಲ್ಪಿಜಿ ಸಾಗಿಸುತ್ತಿದ್ದು, ಅವು ಮುಂದಿನ ಒಂದೆರಡು ದಿನಗಳಲ್ಲಿ ಗುಜರಾತ್ನ ಮುದ್ರಾ ಬಂದರು ಮತ್ತು ಕಾಂಡ್ಲಾ ಬಂದರುಗಳಿಗೆ ತಲುಪುವ ನಿರೀಕ್ಷೆಯಿದೆ.
ಜಾಗತಿಕ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು 20 ಶೇಕಡಾ ಸಾಗಣೆ ನಡೆಯುವ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು United States ಮತ್ತು ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್ ನಿರ್ಬಂಧಿಸಿದ್ದರಿಂದ, ಭಾರತ ಹಾಗೂ ಚೀನಾ ಸೇರಿದಂತೆ ಏಷ್ಯಾದ ಹಲವು ಮಾರುಕಟ್ಟೆಗಳಲ್ಲಿ ಇಂಧನ ಕೊರತೆಯ ಆತಂಕ ಉಂಟಾಗಿತ್ತು.
ಇದನ್ನೂ ಓದಿ
ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ: ಇರಲಿ ಈ ಅಪಾಯದ ಬಗ್ಗೆ ಎಚ್ಚರಿಕೆ
ಭಾರತವು ದ್ರವೀಕೃತ ನೈಸರ್ಗಿಕ ಅನಿಲದ ವಿಶ್ವದ ನಾಲ್ಕನೇ ಅತಿದೊಡ್ಡ ಖರೀದಿದಾರವಾಗಿದ್ದು, ಅಡುಗೆಗೆ ಬಳಸುವ ಎಲ್ಪಿಜಿಯ ಎರಡನೇ ಅತಿದೊಡ್ಡ ಖರೀದಿದಾರವಾಗಿದೆ. ಈ ಅನಿಲದ ಬಹುಪಾಲು ಮಧ್ಯಪ್ರಾಚ್ಯ ದೇಶಗಳಿಂದಲೇ ಭಾರತಕ್ಕೆ ಪೂರೈಕೆಯಾಗುತ್ತದೆ. ಪೂರೈಕೆ ಸಮಸ್ಯೆಗಳ ನಡುವೆ ಮನೆ ಬಳಕೆ ಮತ್ತು ಸಾರಿಗೆ ಕ್ಷೇತ್ರಗಳಿಗೆ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.






