• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಬಿಜೆಪಿ ಬೆಂಬಲವಿಲ್ಲದೆ ಜೆಡಿಎಸ್‌ ಗೆಲ್ಲೋಕೆ ಸಾಧ್ಯವಾಗುವುದಿಲ್ಲ : ಪ್ರೀತಂಗೌಡ ಶಾಕಿಂಗ್‌ ಹೇಳಿಕೆ..

ಪ್ರತಿಧ್ವನಿ by ಪ್ರತಿಧ್ವನಿ
February 4, 2026
in ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಬಿಜೆಪಿ ಬೆಂಬಲವಿಲ್ಲದೆ ಜೆಡಿಎಸ್‌ ಗೆಲ್ಲೋಕೆ ಸಾಧ್ಯವಾಗುವುದಿಲ್ಲ : ಪ್ರೀತಂಗೌಡ ಶಾಕಿಂಗ್‌ ಹೇಳಿಕೆ..
520
VIEWS
Share on WhatsAppShare on FacebookShare on Telegram

ಮಂಡ್ಯ : ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಬೇಕು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿ ತೀರ್ಮಾನ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತದೆ.  ಬಿಜೆಪಿಗೆ ಪ್ರತಿ ಬೂತ್ ನಲ್ಲಿ ತನ್ನದೇ ಆದ ಶಕ್ತಿಯಿದೆ, ಹಿಂದೆ ಹಾಗೂ ಇಂದಿನ ಸ್ಥಿತಿ ಬೇರೆ ಬೇರೆ ಇದ್ದು, ಮಂಡ್ಯದಲ್ಲಿ ಬಿಜೆಪಿ ಬಲಾಢ್ಯವಾಗಿದೆ ಯಾವುದೇ ಅನುಮಾನ ಬೇಡ. ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಕಾರ್ಯಕರ್ತರೇ ಗೆಲ್ಲಬೇಕೆಂಬುದು ಅವರ ಅಪೇಕ್ಷೆಯಾಗಿದೆ. ಕಾರ್ಯಕರ್ತರಿಗೆ ಶಕ್ತಿ ತುಂಬಿ ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

G B Vinaykumar on union Budget : ದಾವಣಗೆರೆಗೆ ಏರ್ಪೋಟ್‌ ನಿರ್ಮಾಣ ಆಗೋಕೆ ಎಲ್ಲ ನಾಯಕರು ಮೋದಿ ಭೇಟಿಯಾಗಬೇಕು..

ನಗರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ, ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ತಾ.ಪಂ.ಗ್ರಾ.ಪಂ.ಚುನಾವಣೆ ಬಗ್ಗೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದೆ. ಜೆಡಿಎಸ್‌ಗೆ ಮಂಡ್ಯದಲ್ಲಿ ಅವರದೇ ಶಕ್ತಿ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಾಗಿತ್ತು. ಈ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ಅವಕಾಶ ಕಲ್ಪಿಸಿಕೊಡಬೇಕು ಅದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಜ್ಯೋತಿಷಿ ಕಮಲಾಕರ ಭಟ್‌ ಜೊತೆಗೆ ಬಿಜೆಪಿ ಶಾಸಕ : ಹರಿಪ್ರಸಾದ್ ಸ್ಫೋಟಕ ಆರೋಪಗಳೇನು..?

ಜಿಲ್ಲೆಯಲ್ಲಿ ಎಲ್ಲಾ ಕಡೆ ಬಿಜೆಪಿ ಸ್ವಂತ ಶಕ್ತಿ ಮೇಲೆ ಚುನಾವಣೆ ಮಾಡುತ್ತೆ. ಪ್ರತ್ಯೇಕವಾಗಿಯೂ ಚುನಾವಣೆ ಮಾಡಲು ನಾವು ಸಿದ್ದ. ಮುಂದಿನ ದಿನಗಳಲ್ಲಿ ಮೈತ್ರಿ ತೀರ್ಮಾನ ರಾಷ್ಟ್ರೀಯ ಮಟ್ಟದಲ್ಲಿ ನಿರ್ಧಾರ ಆಗಲಿದೆ. ಬಳಿಕ ಮೈತ್ರಿ ಮಾನದಂಡದ ಪ್ರಕಾರ ನಾವು ನಡೆಯುತ್ತೇವೆ. 2028ಕ್ಕೆ ಅವರು ಮುಖ್ಯಮಂತ್ರಿ, ಇವರು ಮುಖ್ಯಮಂತ್ರಿ ಅನ್ನೋದನ್ನ ನಿಲ್ಲಿಸಿ ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡರಿಗೆ ಟಿಕೆಟ್‌ ನೀಡಲಾಗುತ್ತಿದೆ. ನಮ್ಮ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲಲಿದ್ದಾರೆ.  ಈ ಹಿಂದೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆದ್ದಿದ್ರು, ನಿಖಿಲ್ ಕುಮಾರಸ್ವಾಮಿ ಸೋತರು. ಮುಂದೆ ನಿಖಿಲ್ ಅವರನ್ನು ಗೆಲ್ಲಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಹಾಸನದಲ್ಲಿ ನನಗೆ ನೂರಕ್ಕೆ ನೂರರಷ್ಟು ಸಿಗುತ್ತದೆ. ಮಂಡ್ಯ ಮಾತ್ರ ಜೆಡಿಎಸ್‌ಗೆ ಅಂದ್ರೆ ಕಾರ್ಯಕರ್ತರ ಕಥೆ ಏನು? ಬಿಜೆಪಿ ಕಾರ್ಯಕರ್ತರನ್ನು ಕುಗ್ಗಿಸುವ ಕೆಲಸವನ್ನು ಯಾರು ಮಾಡಬಾರದು. ಎನ್‌ಡಿಎ ಮೈತ್ರಿಕೂಡ ನಮಗೆ ಬಹಳ ಮುಖ್ಯವಾಗಿದೆ. 2024 ರಲ್ಲಿ ಬಿಜೆಪಿಯಿಂದಲೇ ಜೆಡಿಎಸ್ ಗೆದ್ದಿದೆ. ಆದರೆ ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲ್ಲು ಬಿಜೆಪಿ ಸಹಾಯ ಬೇಕು. ಹೀಗಾಗಿ ಎರಡೂ ಪಕ್ಷದವರು ಅರ್ಥ ಮಾಡಿಕೊಂಡು ಒಟ್ಟಿಗೆ ಹೋಗೋಣ. ಎಲ್ಲರು ಸೇರಿ ಗಟ್ಟಿಯಾಗಿ ಚುನಾವಣೆ ಮಾಡೋಣ. ಪಕ್ಷದ ಕಾರ್ಯಕರ್ತರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಬೇಡ ಅಂತ ಹೇಳಿದ್ದಾರೆ ಈ ಬಗ್ಗೆ ಪಕ್ಷದ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಪ್ರೀತಂಗೌಡ ಹೇಳಿದ್ದಾರೆ.

Tags: BJPBJP MLABY VijayendraGP ElectionsHassan PoliticsHD Devegowdahd kumarswamyJDSKarnataka PoliticsMandya PoliticsNDA allianceNikhil KumaraswamyPratidhvaniPreetam gowdaR AshokTP ElectionsZp Elections
Previous Post

ಬಿಜೆಪಿ ಸರ್ಕಾರದ ಅಕ್ರಮದಲ್ಲಿ ಯಾರಾದ್ರು ರಾಜೀನಾಮೆ ಕೊಟ್ಟಿದ್ರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

Next Post

ಬ್ಯಾಂಕ್ ಗ್ರಾಹಕರೇ ಎಚ್ಚರ: SBI ಬ್ಯಾಂಕಿನಿಂದ ಮಹತ್ವದ ಸಂದೇಶ

Next Post
ಬ್ಯಾಂಕ್ ಗ್ರಾಹಕರೇ ಎಚ್ಚರ: SBI ಬ್ಯಾಂಕಿನಿಂದ ಮಹತ್ವದ ಸಂದೇಶ

ಬ್ಯಾಂಕ್ ಗ್ರಾಹಕರೇ ಎಚ್ಚರ: SBI ಬ್ಯಾಂಕಿನಿಂದ ಮಹತ್ವದ ಸಂದೇಶ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

error: Content is protected !!