ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಸತಿ ಇಲಾಖೆಯಲ್ಲಿ (Housing board) ವಸತಿ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿವೆ. ಶಾಸಕ ಬಿ.ಆರ್ ಪಾಟೀಲ್ (BR patil) ಆಡಿಯೋ ವೈರಲ್ ಆದ ಬಳಿಕ ಕಾಂಗ್ರೆಸ್ ರೇವ್ರ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗ ಜಮೀರ್ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಸಿಡಿದೆದ್ದಿದ್ದಾರೆ.

ಸಚಿವ ಜಮೀರ್ ಅಹ್ಮದ್ ಅವರ ವಸತಿ ಇಲಾಖೆ ಖಾತೆಯಲ್ಲಿ ಈ ಅಕ್ರಮ ನಡೆದಿರುವ,ಭ್ರಷ್ಟಾಚಾರ ನಡೆದಿರುವ ಆರೋಪದ ಹಿನ್ನಲೆ,ಜಮೀರ್ ಅಹ್ಮದ್ ವಿರುದ್ಧ ಹೋರಾಟ ನಡೆಸುವಂತೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಜೆಡಿಎಸ್ ನಾಯಕರಿಗೆ ಸೂಚನೆ ನೀಡಿದ್ದಾರೆ.

ಜೆಡಿಎಸ್ ನ ಎಲ್ಲಾ ಶಾಸಕರು,ಪರಾಜಿತ ಅಭ್ಯರ್ಥಿಗಳಿಗೆ ಹೋರಾಟ ತೀವ್ರಗೊಳಿಸುವಂತೆ ಹೆಚ್ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದು, ಸಚಿವ ಜಮೀರ್ ಅಹ್ಮದ್ ರಾಜೀನಾಮೆಗೆ ಒತ್ತಾಯಿಸಿ ಮತ್ತು ದಾಖಲೆಗಳನ್ನ ಇಟ್ಟುಕೊಂಡು ಹೋರಾಟ ನಡೆಸಿ ಎಂದು ತಾಕೀತು ಮಾಡಿದ್ದಾರೆ.